



ಮಡಿಕೇರಿ NEWS DESK ಫೆ.16 : ತಲಕಾವೇರಿ ಉಪ ಠಾಣೆಯ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಬಿದ್ದು ಸಿಕ್ಕಿದ ರೂ.40,000 ಹಣ ಮತ್ತು 40,000 ಯುಎಸ್ ಡಾಲರ್ ಇರುವ ಪರ್ಸನ್ನು ಅದರ ವಾರಸುದಾರರಿಗೆ ಹಿಂದಿರುಗಿಸಲಾಯಿತು. ಪರ್ಸ್ ಮತ್ತು ಹಣವನ್ನು ಹಿಂದಿರುಗಿಸಿದ ಭಾಗಮಂಡಲ ಠಾಣೆಯ ಸಿಬ್ಬಂದಿ ಎಸ್.ಎಸ್.ಜಯಪ್ರಕಾಶ್ ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.