ಸೈನಿಕ ಸೇರಿದಂತೆ ಇಬ್ಬರ ಸಾವು : ಹೇಮಾವತಿ ಹಿನ್ನೀರಿನಲ್ಲಿ ಘಟನೆ
01/05/2020

ಮಡಿಕೇರಿ ಮೇ 1 : ಉತ್ತರ ಕೊಡಗು ಸೋಮವಾರಪೇಟೆ ತಾಲ್ಲೂಕಿನ ಗಡಿಭಾಗ, ಹಾಸನ ಜಿಲ್ಲೆಯ ಅರಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಬಳಿಯ ಕಟ್ಟೆಪುರದ ಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಸೈನಿಕ ಸೇರಿದಂತೆ ಇಬ್ಬರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ದುರ್ಘಟನೆಯಲ್ಲಿ ಹಾಸನದ ಅರಕಲಗೂಡುವಿನ ನಂಜಪ್ಪ ಎಂಬವರ ಪುತ್ರ, ಸೈನಿಕ ಲೋಕೇಶ್(28) ಮತ್ತು ಬೆಸೂರಿನ ನಿಲುವಾಗಿಲಿನ ಶಾಂತರಾಜು ಎಂಬವರ ಪುತ್ರ ಲತೀಶ್ ಸಾವನ್ನಪ್ಪಿದ್ದಾರೆ.
ಬೆಸೂರಿನ ನಿಲುವಾಗಿಲಿಗೆ ಆಗಮಿಸಿದ್ದ ಲೋಕೇಶ್ ಇಂದು ಲತೀಶ್ನೊಂದಿಗೆ ಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದರು. ಈ ಸಂದರ್ಭ ಇವರಿಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರ ಮೃತ ದೇಹಗಳನ್ನು ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದೊಂದಿಗೆ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.