ಸುಂಟಿಕೊಪ್ಪದಲ್ಲಿ ಜು. 15 ರಿಂದ 17ರ ವರೆಗೆ ಅರ್ಧದಿನ ಮಾತ್ರ ವ್ಯಾಪಾರ ವಹಿವಾಟು
14/07/2020

ಸುಂಟಿಕೊಪ್ಪ,ಜು.14: ಸುಂಟಿಕೊಪ್ಪ ಛೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಸಭೆಯನ್ನು ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ್ಪದಲ್ಲಿ ಸ್ಥಾನೀಯ ಸಮಿತಿ ಅಧ್ಯಕ್ಷ ಡಿ.ನರಸಿಂಹ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸುಂಟಿಕೊಪ್ಪ ವರ್ತಕರ ಮನವಿಯ ಮೇರೆಗೆ ಬೆಳಿಗ್ಗೆ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವ್ಯಾಪರ ನಡೆಸಲು ತಾ.17 ಶುಕ್ರವಾರ ದವರೆಗೆ ವ್ಯಾಪಾರ ನಡೆಸಿ ಮದ್ಯಾಹ್ನದ ನಂತರ ಸಂಪೂರ್ಣ ಬಂದ್ ಮಾಡಲು ನಿರ್ಣಾಯಿಸಲಾಯಿತು. ಈಗಾಗಲೇ ವ್ಯಾಪಾರಸ್ಥರ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು ಅವರ ಬದುಕು ಶೋಚನೀಯ ಸ್ಥಿತಿಯಾಂತಾಗಿದೆ. ಆದರಿಂದ 6 ರಿಂದ 12 ಗಂಟೆಯವರೆಗೆ ವ್ಯಾಪಾರ ನಡೆಸಲು ಸುಂಟಿಕೊಪ್ಪ ಛೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಗಂಗಾಧರ ರೈ, ಖಜಾಂಜಿ ಸತೀಶ್ ಶೇಟ್, ಸಮಿತಿ ಸದಸ್ಯರಾದ ಎಂ.ಎ.ವಸಂತ, ವಿ.ಆರ್.ಸಂತೋಷ್, ಟಿ.ಕೆ.ರಾಜೀವ್, ಜಗದೀಶ್ ರೈ ಹಾಗೂ ರಾಜುರೈ ಉಪಸ್ಥಿತರಿದ್ದರು.
