ವಿರಾಜಪೇಟೆಯಲ್ಲಿ ಹಿಂದೂಪರ ಸಂಘಟನೆಗಳಿಂದ ವಿಶೇಷ ಪೂಜೆ ಮತ್ತು ಸಂಕಲ್ಪ

ಮಡಿಕೇರಿ ಆ. 5 : ಅಖಂಡ ಭಾರತದ ಹಿಂದೂಗಳ ಶ್ರದ್ಧಾ ಕೇಂದ್ರವಾಗಿದ್ದ ಅಯೋದ್ಯೆಯಲ್ಲಿ ನೆಲೆಕಂಡ ಶ್ರೀ ರಾಮಚಂದ್ರರ ಭೌವ್ಯ ದೇಗುಲದ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮ ಅಂಗವಾಗಿ ವಿರಾಜಪೇಟೆ ನಗರದ ಪ್ರಮುಖ ದೇವಾಲಯದಲ್ಲಿ ಹಿಂದೂ ಪರ ಸಂಘಟನೆಗಳಿಂದ ವಿಶೇಷ ಪೂಜೆ ನೆರವೇರಿಸಲಾಯಿತು.
ವಿಶ್ವಹಿಂದೂ ಪರಿಷತ್,ರಾಷ್ಟ್ರೀಯ ಸ್ವಯಂ ಸೇವಕ ಸಂಘ್, ತಾಲ್ಲೂಕು ಭಜರಂಗದಳ ವಿರಾಜಪೇಟೆ ನಗರ ಶಾಖೆಗಳ ವತಿಯಿಂದ ಸಂಕಲ್ಪ ಪೂಜೆ ನೆರೆವರಿಸಲಾಯಿತು.
ದೇಗುಲದಲ್ಲಿ ಘಂಠಾಘೋಷದೊಂದಿಗೆ ಘೋಷಣೆಗಳನ್ನು ಕೂಗಿ ಮಂದಿರ ನಿರ್ಮಾಣದಲ್ಲಿ ಯಾವುದೇ ಅಡೆ ತಡೆಗಳು ಬಾರದೆ ಸುಸುತ್ರವಾಗಿ ನೆರವೆರಲು ಸಂಘಟನೆಗಳ ಪ್ರಮುಖರು ಪ್ರಾರ್ಥನೆ ಮಾಡಿದರು.
ಮಹಾ ಗಣಪತಿಗೆ ಪೊಜೆ ಸಲ್ಲಿಸಿದ ನಂತರ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ 1992 ರ ಡಿಸೆಂಬರ್ ತಿಂಗಳ 6 ರಂದು ನಡೆದ ಕರಸೇವೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಕರಸೇವೆಕನಾಗಿ ಸೆವೆಸಲ್ಲಿಸಿದ ಮೈತಾಡಿ ಗ್ರಾಮದ ಐಚ್ಚೇಟ್ಟಿರ ಕೇಸರಿ ಅವರನ್ನು ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಪುರಾತನವಾದ ಶ್ರೀ ಆಂಜನೇಯ ದೇಗುಲದಲ್ಲಿ ಗುರು ಹಿರಿಯರು ದೇಗುಲದ ಅರ್ಚಕರು ಪೊಜೆ ಸಲ್ಲಿಸಿದರು.
ವಿಶ್ವ ಹಿಂದೂ ಪರಿಷತ್ ನ ತಾಲ್ಲೂಕು ಕಾರ್ಯದರ್ಶಿ ಬಿ.ಎಂ.ಕುಮಾರ್, ಆರ್.ಎಸ್.ಎಸ್ ನ ನಗರ ಕಾರ್ಯವಾಹಕ್ ಬಿ.ವಿ. ಹೇಮಂತ್, ತಾಲ್ಲೂಕು ಭಜರಂಗ್ದಳ ಸಂಚಾಲಕ ವಿವೇಕ್ ರೈ, ನಗರ ಸಂಚಾಲಕ ದಿನೇಶ್ ನಾಯರ್, ಹಿರಿಯರಾದ ಮಾಳೇಟಿರ ಶ್ರೀನಿವಾಸ್, ನಗರ ಭಾ.ಜ.ಪ ಅಧ್ಯಕ್ಷ ಟಿ.ಪಿ. ಕೃಷ್ಣ, ಪಟ್ಟಣ ಪಂಚಾಯಿತಿ ಸದಸ್ಯರು, ಹಿಂದೂ ಪರ ಸಂಘಟನೆಗಳ ಪ್ರಮುಖ ಮತ್ತು ಧರ್ಮಾಭಿಮಾನಿಗಳು ಹಾಜರಿದ್ದರು.
ಕೊಡಗು ಜಿಲ್ಲೆಯಲ್ಲಿ 144 ಕಾಯ್ದೆ ಜಾರಿಯಲ್ಲಿರುವುದುರಿಂದ ಅಹಿತಕರ ಘಟನೆಗಳು ಸಂಭವಿಸದಂತೆ ಆರಕ್ಷಕ ಇಲಾಖೆಯಿಂದ ಭಿಗಿ ಬಂದೂಬಸ್ತು ಕಲ್ಪಿಸಲಾಗಿತ್ತು.



