ಮಹಾಮಳೆಯಿಂದ ಕೊಡಗಿನಲ್ಲಿ 342 ಮನೆಗಳಿಗೆ ಹಾನಿ

ಮಡಿಕೇರಿ ಆ.13 : ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಜನವರಿ-2020ರ ಮಾಹೆಯಿಂದ ಈವರೆವಿಗೆ ಜಿಲ್ಲೆಯಲ್ಲಿ 1,731 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲ್ಲೂಕು ಭಾಗಮಂಡಲ ಹೋಬಳಿ ತಲಕಾವೇರಿಯ ತಪ್ಪಲಿನಲ್ಲಿ ಆಗಸ್ಟ್ 6 ರಂದು ಗಜಗಿರಿ ಬೆಟ್ಟ ಕುಸಿದು ಎರಡು ಮನೆಗಳ ಮೇಲೆ ಬಿದ್ದಿದ್ದು, ಕೊಚ್ಚಿಹೋಗಿದೆ. ಎರಡು ಮನೆಗಳ ಪೈಕಿ ಒಬ್ಬರು ಅರ್ಚಕರು ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ಭಾಗಮಂಡಲದಲ್ಲಿ ನೆಲೆಸಿರುತ್ತಾರೆ. ಒಂದು ಮನೆಯಲ್ಲಿ ವಾಸವಿದ್ದ ನಾರಾಯಣ ಆಚಾರ್ (ಅಂದಾಜು 80 ವರ್ಷ), ಶಾಂತ (ನಾರಾಯಣ ಆಚಾರ್ ರವರ ಪತ್ನಿ ಅಂದಾಜು 70 ವರ್ಷ), ಆನಂದತೀರ್ಥ ಸ್ವಾಮಿ (ನಾರಾಯಣ ಆಚಾರ್ ಇವರ ಅಣ್ಣ, ಅಂದಾಜು 86 ವರ್ಷ) ಮತ್ತು ಇಬ್ಬರು ಸಹಾಯಕ ಅರ್ಚಕರು ಸೇರಿ ಒಟ್ಟು 05 ಜನ ಕಣ್ಮರೆಯಾಗಿರುವುದು ಪ್ರಾಥಮಿಕ ವರದಿಯಿಂದ ತಿಳಿಯಲಾಗಿದೆ. ಈ ಪೈಕಿ ಇಬ್ಬರ ಮೃತ ದೇಹವು ಪತ್ತೆಯಾಗಿದೆ. ಉಳಿದ 03 ಜನರ ಹುಡುಕಾಟಕ್ಕೆ ಕಾರ್ಯಚರಣೆ ನಡೆಸಲಾಗುತ್ತಿದೆ.
ಮಾನವ ಜೀವಹಾನಿ/ ಜಾನುವಾರು ಜೀವಹಾನಿಯ ವಿವರ: ಮಾನವ ಜೀವ ಹಾನಿ 2, ಜಾನುವಾರು ಹಾನಿ 16, ಬೆಳೆ ಹಾನಿ ವಿವರ (ಈದಿನದ ವರೆಗೆ ಅಂದಾಜಿಸಿರುವಂತೆ) ಕೃಷಿ ಬೆಳೆ ಹಾನಿ ವಿಸ್ತೀರ್ಣ 3200 ಹೆಕ್ಟೇರ್, ತೋಟಗಾರಿಕೆ ಬೆಳೆ ಹಾನಿ ವಿಸ್ತೀರ್ಣ 2970 ಹೆಕ್ಟೇರ್, ಕಾಫಿ ಬೆಳೆ ಹಾನಿ 28,000 ಹೆಕ್ಟೇರ್ ಒಟ್ಟು 34,170 ಹೆಕ್ಟೇರ್.
ಮನೆ ಹಾನಿ ವಿವರ (ಈ ದಿನದ ವರೆಗೆ ಅಂದಾಜಿಸಿರುವಂತೆ) ಹಾನಿಯಾದ ಒಟ್ಟು ಮನೆಗಳ ಸಂಖ್ಯೆ ಮಡಿಕೇರಿ 75, ಸೋಮವಾರಪೇಟೆ 155, ವಿರಾಜಪೇಟೆ 112, ಒಟ್ಟು 342 ಮನೆಗಳು ಹಾನಿಯಾಗಿವೆ.
ಮೂಲಭೂತ ಸೌಲಭ್ಯಗಳ ಹಾನಿಯ ವಿವರ (ಈ ದಿನದ ವರೆಗೆ ಅಂದಾಜಿಸಿರುವಂತೆ): ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಮಡಿಕೇರಿ ತಾಲ್ಲೂಕಿನಲ್ಲಿ 3 ನಾಲೆ/ ತಡೆಗೋಡೆ/ ಸೇತುವೆ/ ಮೋರಿಗಳ ಹಾನಿ, 18.28 ಕಿ.ಮೀ. ರಸ್ತೆಗೆ ಹಾನಿ ರೂ.3,733 ಲಕ್ಷ ರೂ. ಹಾನಿಯಾಗಿದೆ. ಸೋಮವಾರಪೇಟೆಯಲ್ಲಿ 8 ನಾಲೆ/ ತಡೆಗೋಡೆ/ ಸೇತುವೆ/ ಮೋರಿಗಳ ಹಾನಿ, 17.22 ಕಿ.ಮೀ. ರಸ್ತೆ ಹಾನಿ ರೂ.2580 ಲಕ್ಷ ರೂ. ನಷ್ಟು ಹಾನಿಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 10 ನಾಲೆ/ ತಡೆಗೋಡೆ/ ಸೇತುವೆ/ ಮೋರಿಗಳ ಹಾನಿ, 1 ಕಟ್ಟಡ ಹಾನಿ 27.30 ಕಿ.ಮೀ. ರಸ್ತೆಗೆ ಹಾನಿಯಾಗಿದ್ದು, ರೂ.1411 ಲಕ್ಷ ರೂ.ನಷ್ಟು ಹಾನಿಯಾಗಿದೆ. ಒಟ್ಟು 21 ನಾಲೆ/ತಡೆಗೋಡೆ/ಸೇತುವೆ/ಮೋರಿಗಳ ಹಾನಿ, 1 ಕಟ್ಟಡ ಹಾನಿ, 62.80 ಕಿ.ಮೀ. ರಸ್ತೆ ಹಾನಿ ಒಟ್ಟು 7,724 ಲಕ್ಷ ರೂ. ನಷ್ಟು ಹಾನಿಯಾಗಿದೆ.
ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಿಸಿದಂತೆ ಮಡಿಕೇರಿ ತಾಲ್ಲೂಕಿನಲ್ಲಿ 162 ನಾಲೆ/ ತಡೆಗೋಡೆ/ ಸೇತುವೆ, ಮೋರಿಗಳ ಹಾನಿ, 1242.35 ಕಿ.ಮೀ. ರಸ್ತೆಗೆ ಹಾನಿ ರೂ.7,363 ಲಕ್ಷ ರೂ. ನಷ್ಟು ಹಾನಿಯಾಗಿದೆ. ಸೋಮವಾರಪೇಟೆಯಲ್ಲಿ 9 ನಾಲೆ/ತಡೆಗೋಡೆ/ಸೇತುವೆ/ಮೋರಿಗಳ ಹಾನಿ, 6 ಕಟ್ಟಡ ಹಾನಿ, 145.20 ಕಿ.ಮೀ. ರಸ್ತೆ ಹಾನಿ ರೂ.915 ಲಕ್ಷ ರೂ. ನಷ್ಟು ಹಾನಿಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 42 ನಾಲೆ/ತಡೆಗೋಡೆ/ಸೇತುವೆ/ಮೋರಿಗಳ ಹಾನಿ, 535.50 ಕಿ.ಮೀ. ರಸ್ತೆಗೆ ಹಾನಿಯಾಗಿದ್ದು, ರೂ.6011 ಲಕ್ಷ ರೂ.ನಷ್ಟು ಹಾನಿಯಾಗಿದೆ. ಮೂರು ತಾಲ್ಲೂಕಿನಲ್ಲಿ ಒಟ್ಟು 213 ನಾಲೆ/ತಡೆಗೋಡೆ/ಸೇತುವೆ/ಮೋರಿಗಳ ಹಾನಿ, 6 ಕಟ್ಟಡ ಹಾನಿ, 1923.05 ಕಿ.ಮೀ. ರಸ್ತೆ ಹಾನಿ, ರೂ.14,289.50 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಸಣ್ಣ ನೀರಾವರಿ ಇಲಾಖೆ : ಮಡಿಕೇರಿ ತಾಲ್ಲೂಕಿನಲ್ಲಿ 28 ನಾಲೆ/ತಡೆಗೋಡೆ/ಸೇತುವೆ/ಮೋರಿಗಳ ಹಾನಿಯಾಗಿದ್ದು, ರೂ.1326 ಲಕ್ಷ ರೂ. ನಷ್ಟು ಹಾನಿಯಾಗಿದೆ. ಸೋಮವಾರಪೇಟೆ ತಾಲ್ಲುಕಿನಲ್ಲಿ 16 ನಾಲೆ/ತಡೆಗೋಡೆ/ಸೇತುವೆ/ಮೋರಿಗಳ ಹಾನಿಯಾಗಿದ್ದು, 590 ಲಕ್ಷ ರೂ. ನಷ್ಟು ಹಾನಿಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 16 ನಾಲೆ/ತಡೆಗೋಡೆ/ಸೇತುವೆ/ಮೋರಿಗಳ ಹಾನಿಯಾಗಿದ್ದು, 570 ಲಕ್ಷ ರೂ.ನಷ್ಟು ಹಾನಿಯಾಗಿದೆ. ಮೂರು ತಾಲ್ಲೂಕಿನಲ್ಲಿ ಒಟ್ಟು 60 ನಾಲೆ/ ತಡೆಗೋಡೆ/ ಸೇತುವೆ/ ಮೋರಿಗಳ ಹಾನಿಯಾಗಿದೆ. ಒಟ್ಟು 2,486 ಲಕ್ಷ ರೂ.ನಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಪಿ.ಎಂ.ಜಿ.ಎಸ್.ವೈ : ಮಡಿಕೇರಿ ತಾಲ್ಲೂಕಿನಲ್ಲಿ 96.83 ಕಿ.ಮೀ. ರಸ್ತೆಗೆ ಹಾನಿಯಾಗಿದ್ದು, 5707.60 ಲಕ್ಷ ರೂ.ನಷ್ಟು ಹಾನಿಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 59.33 ಕಿ.ಮೀ. ರಸ್ತೆಗೆ ಹಾನಿಯಾಗಿದ್ದು, 4045.60 ಲಕ್ಷ ರೂ.ನಷ್ಟು ಹಾನಿಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 53.53 ಕಿ.ಮೀ. ರಸ್ತೆಗೆ ಹಾನಿಯಾಗಿದ್ದು, 2,397.55 ಲಕ್ಷ ರೂ.ನಷ್ಟು ಹಾನಿಯಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ : ಮಡಿಕೇರಿ ತಾಲ್ಲೂಕಿನಲ್ಲಿ 25 ನಾಲೆ/ ತಡೆಗೋಡೆ/ ಸೇತುವೆ/ ಮೋರಿಗಳ ಹಾನಿಯಾಗಿದ್ದು, 36.70 ಲಕ್ಷ ರೂ.ನಷ್ಟು ಹಾನಿಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 38 ನಾಲೆ/ತಡೆಗೋಡೆ/ಸೇತುವೆ/ಮೋರಿಗಳ ಹಾನಿಯಾಗಿದ್ದು, 52 ಲಕ್ಷ ರೂ.ನಷ್ಟು ಹಾನಿಯಾಗಿದೆ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 9 ನಾಲೆ/ತಡೆಗೋಡೆ/ಸೇತುವೆ/ಮೋರಿಗಳ ಹಾನಿಯಾಗಿದ್ದು, 13 ಲಕ್ಷ ರೂ.ನಷ್ಟು ಹಾನಿಯಾಗಿದೆ.
ರಾಷ್ಟ್ರೀಯ ಹೆದಾರಿ ಉಪವಿಭಾಗ : ಮಡಿಕೇರಿಯಲ್ಲಿ 85 ಕಿ.ಮೀ. ರಸ್ತೆಗೆ ಹಾನಿಯಾಗಿದ್ದು, 300 ಲಕ್ಷ ರೂ. ನಷ್ಟು ಹಾನಿಯಾಗಿದೆ.
ಸೆಸ್ಕ್ (ವಿದ್ಯುಚಕ್ತಿ ಮಂಡಳಿ) : ಮಡಿಕೇರಿ ತಾಲ್ಲೂಕಿನಲ್ಲಿ 722 ವಿದ್ಯುತ್ ಕಂಬಗಳು, 10700 ಮೀ. ವಿದ್ಯುತ್ ಮಾರ್ಗಗಳು, 24 ವಿದ್ಯುತ್ ಟ್ರಾನ್ಸ್ ಪಾರ್ಮರ್ಗಳಿಗೆ ಹಾನಿಯಾಗಿದ್ದು, 88.83 ಲಕ್ಷ ರೂ. ನಷ್ಟು ಹಾನಿಯಾಗಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ 794 ವಿದ್ಯುತ್ ಕಂಬಗಳು, 5500 ಮೀ. ವಿದ್ಯುತ್ ಮಾರ್ಗಗಳು, 22 ವಿದ್ಯುತ್ ಟ್ರಾನ್ಸ್ ಪಾರ್ಮರ್ಗಳಿಗೆ ಹಾನಿಯಾಗಿದ್ದು, 89.91 ಲಕ್ಷ ರೂ. ನಷ್ಟು ಹಾನಿಯಾಗಿದೆ.
ವಿರಾಜಪೇಟೆ ತಾಲ್ಲೂಕಿನಲ್ಲಿ 1161 ವಿದ್ಯುತ್ ಕಂಬಗಳು, 25,650 ಮೀ. ವಿದ್ಯುತ್ ಮಾರ್ಗಗಳು, 75 ವಿದ್ಯುತ್ ಟ್ರಾನ್ಸ್ ಪಾರ್ಮರ್ಗಳಿಗೆ ಹಾನಿಯಾಗಿದ್ದು, 304.81 ಲಕ್ಷ ರೂ. ನಷ್ಟು ಹಾನಿಯಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ 13 ವಿದ್ಯುತ್ ಕಂಬ, 4 ಮೀ. ವಿದ್ಯುತ್ ಮಾರ್ಗ, 14 ಕಿ.ಮೀ.ನಷ್ಟು ರಸ್ತೆ ಹಾನಿಯಾಗಿದ್ದು, 473 ಲಕ್ಷ ರೂ. ಹಾನಿಯಾಗಿದೆ.
ಕುಶಾಲನಗರ ಪ.ಪಂ. ವ್ಯಾಪ್ತಿಯಲ್ಲಿ 20 ವಿದ್ಯುತ್ ಕಂಬ, 50 ಮೀ. ವಿದ್ಯುತ್ ಮಾರ್ಗಗಳು, 25 ಕಿ.ಮೀ. ರಸ್ತೆ ಹಾನಿಯಾಗಿದ್ದು, 308 ಲಕ್ಷ ರೂ. ನಷ್ಟು ಹಾನಿಯಾಗಿದೆ.
ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ 11 ವಿದ್ಯುತ್ ಕಂಬ, 8 ಕಿ.ಮೀ. ರಸ್ತೆ ಹಾನಿಯಾಗಿದ್ದು, 156 ಲಕ್ಷ ರೂ.ನಷ್ಟು ಹಾನಿಯಾಗಿದೆ. ವಿರಾಜಪೇಟೆ ಪ.ಪಂ. ವ್ಯಾಪ್ತಿಯಲ್ಲಿ 9 ವಿದ್ಯುತ್ ಕಂಬ, 22 ಕಿ.ಮೀ. ರಸ್ತೆ ಹಾನಿಯಾಗಿದ್ದು, 640.40 ಲಕ್ಷ ರೂ.ನಷ್ಟು ಹಾನಿಯಾಗಿದೆ. ಒಟ್ಟು 53 ವಿದ್ಯುತ್ ಕಂಬ, 54 ಮೀ. ವಿದ್ಯುತ್ ಮಾರ್ಗ, 70 ಕಿ.ಮೀ.ನಷ್ಟು ರಸ್ತೆ ಹಾನಿಯಾಗಿದ್ದು, 1577.40 ಲಕ್ಷ ರೂ.ನಷ್ಟು ಹಾನಿಯಾಗಿದೆ.
ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಪ್ರದೇಶಗಳ ವಿವರ ಇಂತಿದೆ. ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ಚೇರಂಗಾಲ, ಕೋರಂಗಾಲ, ಅಯ್ಯಂಗೇರಿ, ತಾವೂರು, ತಣ್ಣಿಮಾನಿ, ಸಣ್ಣ ಪುಲಿಕೋಟು, ಬೇಂಗೂರು, ಕಡಿಯತ್ತೂರು, ಬಿ.ಬಾಡಗ, ಪದಕಲ್ಲು, ಬೇತು, ಎಮ್ಮೆಮಾಡು, ಬಲಮುರಿ, ನಾಪೆÇೀಕ್ಲು, ಬೆಟ್ಟಗೇರಿ, ಐಕೊಳ, ದೊಡ್ಡಪುಲಿಕೋಟು, ಹೊದ್ದೂರು, ಹೊದವಾಡ, ಕಿಗ್ಗಾಲು, ಎಸ್.ಕಟ್ಟೆಮಾಡು(ಪರಂಬು ಪೈಸಾರಿ) ಒಟ್ಟು 22 ಗ್ರಾಮಗಳು.
ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು, ಗುಹ್ಯ, ಕೊಂಡಂಗೇರಿ, ಹಚ್ಚಿನಾಡು, ನಾಲ್ಕೇರಿ, ಹೈಸೊಡ್ಲೂರು, ಬಲ್ಯಮಂಡೂರು, ಬಿರುನಾಣಿ, ತೆರಾಲು, ಅರುವತ್ತೊಕ್ಲು, ನಿಡುಗುಂಬ, ಹಾತೂರು, ಮೈತಾಡಿ, ಬಾಳೆಲೆ ಒಟ್ಟು 14 ಗ್ರಾಮಗಳು.
ಸೋಮವಾರಪೇಟೆ ತಾಲ್ಲೂಕಿನ ಮುಳ್ಳುಸೋಗೆ ಗ್ರಾಮದ ಕುವೆಂಪು ಬಡಾವಣೆ, ತಮ್ಮಣ್ಣಶೆಟ್ಟಿ ಬಡಾವಣೆ, ಗುಮ್ಮನಕೊಲ್ಲಿ, ಬಸವನಹಳ್ಳಿ, ಮಾದಾಪಟ್ಟಣ, ಬೈಚನಹಳ್ಳಿ, ಕೂಡ್ಲೂರು(ನಿಸರ್ಗ ಬಡಾವಣೆ) ಬೆಟ್ಟದಕಾಡು, ಬರಡಿ, ಕುಂಬಾರಗುಂಡಿ, ಅತ್ತೂರುನಲ್ಲೂರು (ಕೊಟ್ಟಗೇರಿ ಪೈಸಾರಿ). ಒಟ್ಟು 10 ಗ್ರಾಮಗಳು.
ಪಟ್ಟಣ ಪಂಚಾಯತಿ ಕುಶಾಲನಗರ ಸಾಯಿ ಬಡಾವಣೆ, ಬಸಪ್ಪ, ತ್ಯಾಗರಾಜ ರಸ್ತೆ, ವಿವೇಕಾನಂದ, ರಸೂಲ್, ಶೈಲಜ, ಇಂದಿರಾ ಬಡಾವಣೆ, ದಂಡಿನಪೇಟೆ, ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ, ಬಿದ್ದಪ್ಪ, ನಿಜಾಮುದ್ದೀನ್, ನಿಂಗೇಗೌಡ, ಯೋಗಾನಂದ, ತಾವರೆಕೆರೆ ಬಳಿ ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಒಟ್ಟು 14 ಗ್ರಾಮಗಳು. ಒಟ್ಟು ಪ್ರವಾಹ ಪೀಡಿತ ಪ್ರದೇಶಗಳು 60 ಆಗಿರುತ್ತದೆ.
ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿರುವ ಪ್ರದೇಶಗಳ ವಿವರ. ಮಡಿಕೇರಿ ತಾಲ್ಲೂಕಿನ ಬ್ರಹ್ಮಗಿರಿ (ತಲಕಾವೇರಿ), ಕೋರಂಗಾಲ, ಬೊಟ್ಲಪ್ಪ ಪೈಸಾರಿ(ಕಡಗದಾಳು), ಜೋಡುಪಾಲ, ನೀರುಕೊಲ್ಲಿ, 2ನೇ ಮೊಣ್ಣಂಗೇರಿ, ಕೊಯನಾಡು, ಪೆರಾಜೆ, ನಗರಸಭೆ ಮಡಿಕೇರಿ ದೇಚೂರು, ಸೋಮವಾರಪೇಟೆ ತಾಲ್ಲೂಕು ಪೆÇನ್ನತ್ಮೊಟ್ಟೆ, ಚೆಟ್ಟಳ್ಳಿ-ಮಡಿಕೇರಿ ರಸ್ತೆ(ಅಬ್ಯಾಲ) ವಿರಾಜಪೇಟೆ ತಾಲ್ಲೂಕು ಮಗ್ಗುಲ(ಅಯ್ಯಪ್ಪಬೆಟ್ಟ) ಒಟ್ಟು 12 ಕಡೆಗಳಲ್ಲಿ ಭೂಕುಸಿತವಾಗಿದೆ.
ಜಿಲ್ಲೆಯಲ್ಲಿ ಈವರೆಗೆ ರಕ್ಷಿಸಲಾಗಿರುವ ಸಂತ್ರಸ್ತರ ವಿವರ ಇಂತಿದೆ. ನಾಪೆÇೀಕ್ಲು 13, ಹೊದವಾಡ 13, ನೆಲ್ಲಿಹುದಿಕೇರಿ 96, ಕಡಗದಾಳು 150, ಬಲಮುರಿ 7, ಕೊಟ್ಟಮುಡಿ 29, ಚೆರಿಯಪರಂಬು 7, ಬಾಳೆಗುಂಡಿ ಗ್ರಾಮ (ವಾಲ್ನೂರು ತ್ಯಾಗತ್ತೂರು) 6, ನಲ್ವತ್ತೆಕರೆ 12, ಬೆಟ್ಟಗೇರಿ 8, ಬೊಟ್ಲಪ್ಪ ಪೈಸಾರಿ, ಕಡಗದಾಳು 51, ಕೈಮಾಡು 5, ನೀರುಕೊಲ್ಲಿ 43, ಮೈತಾಡಿ 40, ಕೊಂಡಂಗೇರಿ 8, ಸಿದ್ದಾಪುರ (ಕುರುಬರ ಗುಂಡಿ) 8, ತಣ್ಣಿಮಾನಿ 50, ಬೆಟ್ಟದಕಾಡು 10, ಅತ್ತೂರುನಲ್ಲೂರು ಕೊಟ್ಟಗೇರಿ ಪೈಸಾರಿ 10, ಬಾಳೆಲೆ 2, ಚಾಮಿಯಾಲ 17, ಒಟ್ಟು 585.
ಜಿಲ್ಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರಗಳ ವಿವರ: ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿ, ಕಾಶಿಮಠದಲ್ಲಿ 6 ಕುಟುಂಬಗಳು ಆಶ್ರಯ ಪಡೆದಿದ್ದು, 10 ಸಂತ್ರಸ್ತರಿದ್ದಾರೆ. ಭಾಗಮಂಡಲ ಕೆ.ವಿ.ಜಿ.ಕಾಲೇಜು 4 ಕುಟುಂಬಗಳು ಆಶ್ರಯ ಪಡೆದಿದ್ದು, 5 ಸಂತ್ರಸ್ತರಿದ್ದಾರೆ. ಕಡಗದಾಳು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ 14 ಕುಟುಂಬಗಳು ಆಶ್ರಯ ಪಡೆದಿದು, 34 ಸಂತ್ರಸ್ತರಿದ್ದಾರೆ.
ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 3 ಕೇಂದ್ರಗಳಿದ್ದು, 24 ಕುಟುಂಬಗಳು ಆಶ್ರಯ ಪಡೆದಿದ್ದು, 49 ಸಂತ್ರಸ್ತರಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 21 ಕುಟುಂಬಗಳು ಆಶ್ರಯ ಪಡೆದಿದ್ದು, 41 ಜನ ಸಂತ್ರಸ್ತರಿದ್ದಾರೆ. ಕೊಂಡಂಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ 8 ಕುಟುಂಬಗಳು ಆಶ್ರಯ ಪಡೆದಿದ್ದು, 27 ಜನ ಸಂತ್ರಸ್ತರಿದ್ದಾರೆ. ಕರಡಿಗೋಡು ಬಸವೇಶ್ವರ ಸಮುದಾಯ ಭವನದಲ್ಲಿ 19 ಕುಟುಂಬಗಳಿದ್ದು, 36 ಜನ ಸಂತ್ರಸ್ತರಿದ್ದಾರೆ.
ಹುದಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 36 ಕುಟುಂಬಗಳಿದ್ದು, 112 ಜನ ಸಂತ್ರಸ್ತರಿದ್ದಾರೆ. ವಿರಾಜಪೇಟೆ ಚಿಕ್ಕಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 24 ಕುಟುಂಬಗಳಿದ್ದು, 43 ಜನ ಸಂತ್ರಸ್ತರಿದ್ದಾರೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಒಟ್ಟು 5 ಪರಿಹಾರ ಕೇಂದ್ರಗಳಲ್ಲಿ 108 ಕುಟುಂಬಗಳು ಆಶ್ರಯ ಪಡೆದಿದ್ದು, 259 ಜನ ಸಂತ್ರಸ್ತರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 8 ಪರಿಹಾರ ಕೇಂದ್ರಗಳಿದ್ದು, 132 ಕುಟುಂಬದವರು ಆಶ್ರಯ ಪಡೆದಿದ್ದು, 308 ಜನ ಸಂತ್ರಸ್ತರಿದ್ದಾರೆ.
ಭೂ ಕುಸಿತ ಮತ್ತು ಪ್ರವಾಹದಿಂದ ಬಂದ್ ಆದ ರಸ್ತೆಗಳ ವಿವರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರೆ ಜರಿದಿರುವುದರಿಂದ ಮತ್ತು ಮರ ಬಿದ್ದಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ತುರ್ತಾಗಿ ಕ್ರಮ ವಹಿಸಬಹುದಾದ ಕಡೆಗಳಲ್ಲಿ ಸಂಬಂಧಪಟ್ಟ ಇಲಾಖೆಗಳಿಂದ ತುರ್ತು ಕ್ರಮ ವಹಿಸಿ ರಸ್ತೆಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಅತಿವೃಷ್ಟಿಯಿಂದ ಆಗಬಹುದಾದ ತೊಂದರೆಗಳನ್ನು ಎದುರಿಸಲು ಜಿಲ್ಲಾಡಳಿತವು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಯಾವುದೇ ತುರ್ತು ಸಂದರ್ಭ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನರು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ.
ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಮೊಕ್ಕಾಂ ಹೂಡಿದ್ದು, ತುರ್ತು ಸಂದರ್ಭದಲ್ಲಿ ನೆರವಿಗೆ ಬರಲಿವೆ. ಅಲ್ಲದೆ ಜಿಲ್ಲಾಧಿಕಾರಿ ಅವರ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ 24*7 ನಿಯಂತ್ರಣಾ ಕೊಠಡಿ ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಾಟ್ಸಪ್ನಲ್ಲಿ ಸಹ ಪ್ರಕೃತಿ ವಿಕೋಪ ಸಂಬಂಧಿತ ದೂರು ಸ್ವೀಕರಿಸಲಾಗುತ್ತಿದ್ದು, ತುರ್ತು ಕ್ರಮ ವಹಿಸಲಾಗುತ್ತಿದೆ.
ಹಾರಂಗಿ ಜಲಾಶಯದಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಕೃತಿ ವಿಕೋಪ ಸಂಬಂಧಿತ ಹಾನಿಯ ಬಗ್ಗೆ ವಿವರ ಮತ್ತು ನೆರವು ಕೋರಲು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಂಟ್ರೋಲ್ ಕೊಠಡಿ ಸಂ:08272-221077 ಮತ್ತು ವಾಟ್ಸಪ್ ನಂ.8550001077 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
