ತಲಕಾವೇರಿಯಲ್ಲಿ ರವಿ ಕಿರಣ್ ಎಂಬುವವರ ಮೃತದೇಹ ಪತ್ತೆ : ಉಳಿದ ಇಬ್ಬರಿಗಾಗಿ ಕಾರ್ಯಾಚರಣೆ ಚುರುಕು

15/08/2020

ಮಹಾಮಳೆಯಿಂದ ಬೆಟ್ಟ ಕುಸಿದು ಐವರು ನಾಪತ್ತೆಯಾದ ತಲಕಾವೇರಿ ಪ್ರದೇಶದಲ್ಲಿ ರವಿ ಕಿರಣ್ ಎಂಬುವವರ ‌ಮೃತ ದೇಹ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಈಗಾಗಲೇ ಆನಂದತೀರ್ಥ, ನಾರಾಯಣ ಆಚಾರ್ ಅವರ ಮೃತದೇಹ ಪತ್ತೆಯಾಗಿದ್ದು, ಇಂದು ದೊರೆತ ಶವದೊಂದಿಗೆ ಮೂವರು ಪತ್ತೆಯಾದಂತ್ತಾಗಿದೆ. ಉಳಿದ ಇಬ್ಬರಿಗಾಗಿ ಕಾರ್ಯಾಚರಣೆ ಚುರುಕುಗೊಂಡಿದೆ.