ಶ್ರಮದಾನದ ಮೂಲಕ ಯುವ ಜೆಡಿಎಸ್ನಿಂದ ಸ್ವಾತಂತ್ರ್ಯ ದಿನ ಆಚರಣೆ
15/08/2020

ಮಡಿಕೇರಿ ಆ. 15 : ಮಡಿಕೇರಿ ಯುವ ಜೆಡಿಎಸ್ ವತಿಯಿಂದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರ ನೇತೃತ್ವದಲ್ಲಿ ನಗರದಲ್ಲಿ ಶ್ರಮದಾನ ಮಾಡುವ ಮೂಲಕ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ನಗರ ಮಹಿಳಾ ಘಟಕದ ಅಧ್ಯಕ್ಷರಾದ ಸುನಂದಾ, ಜಿಲ್ಲಾ ಸಮಿತಿ ಕಾರ್ಯದರ್ಶಿ ಸುನಿಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬೊಳ್ಳಿಯಂಡ ಗಣೇಶ್, ಯುವ ಜೆಡಿಎಸ್ ನ ಜಿಲ್ಲಾ ವಕ್ತಾರರಾದ ರವಿ ಕಿರಣ್, ಯುವ ಜೆಡಿಎಸ್ ನ ನಗರ ಅಧ್ಯಕ್ಷರು ಮೋನಿಷ್, ತಾಲ್ಲೂಕು ಸಾಮಾಜಿಕ ಜಾಲತಾಣದ ಸಂಚಾಲಕರಾದ ಅಜಿತ್, ಕೋಳಿಮಾಡ ಗಣೇಶ್, ಸುಕೇಶ್ ಚಂಗಪ್ಪ, ಉಮೇಶ್, ಹೆಚ್.ಎ ರವಿಕುಮಾರ್, ಪ್ರಮೋದ್, ಪ್ರವೀಣ್ ಕುಮಾರ್, ಮುಜೀಬ್, ರಫ್ಹಿಕ್, ಕೆ.ರಾಜು ಪಾಲ್ಗೊಂಡಿದ್ದರು.



