ಕೊಡಗಿನಲ್ಲಿ ಗುರುವಾರ 39 ಹೊಸ ಕೋವಿಡ್ ಪ್ರಕರಣ ದೃಢ

27/08/2020

ಮಡಿಕೇರಿ ಆ.27(ಕರ್ನಾಟಕ ವಾರ್ತೆ):-ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆ ವೇಳೆಗೆ 29 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 10 ಸೇರಿದಂತೆ 39 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ನಾಪೆÇೀಕ್ಲು ಎಮ್ಮೆಮಾಡುವಿನ ಹಳೆತಾಲೂಕಿನ 22 ವರ್ಷದ ಮಹಿಳೆ, ಮೂರ್ನಾಡು ಗಾಂಧೀನಗರ ಸರ್ಕಾರಿ ಶಾಲೆ ಬಳಿಯ 55 ವರ್ಷದ ಮಹಿಳೆ, ನಾಪೆÇೀಕ್ಲು ಕಲ್ಲುಮೊಟ್ಟೆಯ ವೆಂಕಟೇಶ್ವರ ದೇವಾಲಯ ಸಮೀಪದ 25 ವರ್ಷದ ಮಹಿಳೆ, ಮಡಿಕೇರಿ ಪುಟಾಣಿ ನಗರದ 52 ವರ್ಷದ ಪುರುಷ, ದೇಚೂರಿನ ಗಣಪತಿ ದೇವಾಲಯ ಬಳಿಯ 39 ವರ್ಷದ ಮಹಿಳೆ, ಮೈಸೂರಿನ ಆವರ್ತಿಕೊಪ್ಪದ 19 ವರ್ಷದ ಪುರುಷ, ವಿರಾಜಪೇಟೆ ವಿದ್ಯಾನಗರದ 33 ವರ್ಷದ ಪುರುಷ, ವಿರಾಜಪೇಟೆ ನಿಸರ್ಗ ಲೇಔಟಿನ 37 ವರ್ಷದ ಪುರುಷ, ಸೋಮವಾರಪೇಟೆ ಪೆÇಲೀಸ್ ವಸತಿಗೃಹದ 28 ವರ್ಷದ ಪುರುಷ, ಸೋಮವಾರಪೇಟೆ ಎಂ.ಡಿ ಬ್ಲಾಕಿನ ವಿಜಯ ಬ್ಯಾಂಕ್ ಬಳಿಯ 29 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ನೀರುಕೊಲ್ಲಿಯ ಸಿದ್ದಪ್ಪಾಜಿ ದೇವಾಲಯ ಬಳಿಯ 20 ವರ್ಷದ ಮಹಿಳೆ, ಮಡಿಕೇರಿ ಹಾಕತ್ತೂರುವಿನ ತೊಂಬತ್ತುಮನೆಯ 35 ವರ್ಷದ ಮಹಿಳೆ, 44 ವರ್ಷದ ಪುರುಷ, 67 ವರ್ಷದ ಮಹಿಳೆ, 9 ವರ್ಷದ ಬಾಲಕ, 19 ವರ್ಷದ ಪುರುಷ, 42 ವರ್ಷದ ಮಹಿಳೆ ಮತ್ತು 51 ವರ್ಷದ ಪುರುಷ, ಮೂರ್ನಾಡುವಿನ ಹೊದವಾಡ ಗ್ರಾಮ ಮತ್ತು ಅಂಚೆಯ 38 ವರ್ಷದ ಮಹಿಳೆ, 10 ವರ್ಷದ ಬಾಲಕ, 41 ವರ್ಷದ ಪುರುಷ ಮತ್ತು 11 ವರ್ಷದ ಬಾಲಕಿ.
ವಿರಾಜಪೇಟೆ ಚಿಕ್ಕಮಡೂರು ಗ್ರಾಮದ 54 ವರ್ಷದ ಮಹಿಳೆ, 18 ವರ್ಷದ ಪುರುಷ, 72 ಮತ್ತು 65 ವರ್ಷದ ಮಹಿಳೆಯರು, ಮಡಿಕೇರಿ ನೀರುಕೊಲ್ಲಿಯ 16 ವರ್ಷದ ಬಾಲಕಿ, ಮಡಿಕೇರಿ ನೆಲಜಿಯ ಎಮ್ಮೆಮಾಡು ಜಂಕ್ಷನ್ನಿನ 49 ವರ್ಷದ ಪುರುಷ, ವಿರಾಜಪೇಟೆ ನೆಹರು ನಗರದ 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿ ಗಣಪತಿ ಬೀದಿಯ 48 ವರ್ಷದ ಮಹಿಳೆ, ಕುಶಾಲನಗರ ಗೌಡ ಸಮಾಜ ಬಳಿಯ 41 ವರ್ಷದ ಪುರುಷ, ಕುಶಾಲನಗರ ನಾಗೇಗೌಡ ಬಡಾವಣೆಯ ಬಲಮುರಿ ದೇವಾಲಯ ಹಿಂಭಾಗದ 53 ವರ್ಷದ ಪುರುಷ, ಕುಶಾಲನಗರ ಮಾದಾಪಟ್ಟಣದ 22 ವರ್ಷದ ಮಹಿಳೆ, ಕುಶಾಲನಗರ ಹೆಬ್ಬಾಲೆಯ ಮರೂರಿನ 37 ವರ್ಷದ ಪುರುಷ, ಮಡಿಕೇರಿ ಕೆನರಾ ಬ್ಯಾಂಕ್ ಸಮೀಪದ 23 ವರ್ಷದ ಮಹಿಳೆ, ಸೋಮವಾರಪೇಟೆ ನಗ್ರೂರುವಿನ ತಾಲೂಕು ಪಂಚಾಯಿತಿ ವಸತಿಗೃಹದ 31 ವರ್ಷದ ಪುರುಷ, ನಾಪೆÇೀಕ್ಲು ಹಳೆತಾಲೂಕಿನ 23 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಪೆÇನ್ನಂಪೇಟೆಯ ನಲ್ಲೂರು ಗ್ರಾಮ ಮತ್ತು ಅಂಚೆಯ 25 ವರ್ಷದ ಮಹಿಳೆ, ಮಡಿಕೇರಿ ಜಯನಗರ 18ನೇ ಬ್ಲಾಕಿನ 52 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1289 ಆಗಿದ್ದು, 1020 ಮಂದಿ ಗುಣಮುಖರಾಗಿದ್ದಾರೆ. 252 ಸಕ್ರಿಯ ಪ್ರಕರಣಗಳಿದ್ದು, 17 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 216 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.