ಸುವರ್ಣ ಸಮುಚ್ಛಯ ಭವನ ನಿರ್ಮಾಣ ಅಪೂರ್ಣ : ಗಮನ ಸೆಳೆದ ಸುನೀಲ್ ಸುಬ್ರಮಣಿ

26/09/2020

ಮಡಿಕೇರಿ ಸೆ.26 : ಕೊಡಗು ಜಿಲ್ಲೆಯಲ್ಲಿ ಇಲ್ಲಿಯವರೆಗೆ ನಿರ್ಮಿಸಲಾಗಿರುವ ಕನ್ನಡ ಭವನಗಳ ಸಂಖ್ಯೆ ಎಷ್ಟು ಹಾಗೂ ಅವುಗಳಿಗೆ 3 ವರ್ಷಗಳಲ್ಲಿ ಬಿಡುಗಡೆಯಾದ ಅನುದಾನ ಮತ್ತು ಖರ್ಚಿನ ವಿವರ ನೀಡುವಂತೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವ ಸಿ.ಟಿ.ರವಿ ಅವರಿಂದ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾಹಿತಿ ಪಡೆದರು.
ಕಳೆದ 3 ವರ್ಷಗಳಲ್ಲಿ ಸುವರ್ಣ ಸಮುಚ್ಛಯ ಭವನ ಮಡಿಕೇರಿಗೆ 807 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 307 ಲಕ್ಷ ರೂ. ಖರ್ಚಾಗಿದೆ. ಜನರಲ್ ತಿಮ್ಮಯ್ಯ ಸ್ಮಾರಕ ಭವನ ಮಡಿಕೇರಿ ಇಲ್ಲಿಗೆ 275 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 275 ಲಕ್ಷ ರೂ. ಖರ್ಚಾಗಿದೆ. ಕಲಾಭವನ ಕುಶಾಲನಗರ ಇಲ್ಲಿಗೆ 399.43 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 388.43 ಲಕ್ಷ ರೂ. ಖರ್ಚಾಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕøತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವರಾದ ಸಿ.ಟಿ.ರವಿ ಅವರು ಮಾಹಿತಿ ನೀಡಿದರು.