ಸೋಮವಾರಪೇಟೆ ಏ.25 : ಸೋಮವಾರಪೇಟೆ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು. ದೇವಾಲಯದಲ್ಲಿ ಅಭಿಷೇಕ ಅರ್ಚನೆಯೊಂದಿಗೆ, ಪ್ರಧಾನ ಅರ್ಚಕ ಚಿತ್ರ ಕುಮಾರ್ ಭಟ್ ನೇತೃತ್ವದಲ್ಲಿ ಗುರು ಪೂಜಾ ವಿಧಿ ವಿಧಾನಗಳು ನಡೆದವು. ದೇವಾಲಯದ ಅಧ್ಯಕ್ಷ ಎಸ್. ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್. ಡಿ. ವಿಜೇತ್, ಪದಾಧಿಕಾರಿಗಳಾದ ಸತೀಶ್, ಎಸ್. ಎನ್. ಸೋಮಶೇಖರ್, ಮೋಹನ್ ರಾಮ್, ದಿನೇಶ್ ಹಾಲೇರಿ, ರವಿಶಂಕರ್, ದೇವಿ ಬಳಗದ ಅಧ್ಯಕ್ಷೆ ವಿಮಲ ರಾಜ್ ಗೋಪಾಲ್ ಇದ್ದರು.










