ಮಡಿಕೇರಿ ಆ.5 : ಸ್ವಸ್ಥಿಕ್ ಯುವ ವೇದಿಕೆ ಬನ್ನಿಮಂಟಪ ಗಣೇಶೋತ್ಸವ ಸಮಿತಿಯ 22ನೇ ವರ್ಷದ ಗಣೇಶೋತ್ಸವ ಪೂಜಾ ಕಾರ್ಯಕ್ರಮ ಹಾಗೂ ಶೋಭಾಯಾತ್ರೆಯ ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ಸಮಿತಿಯ ಸ್ಥಾಪಕ ಅಧ್ಯಕ್ಷರು ಕುಲದೀಪ್ ತಿಳಿಸಿದ್ದಾರೆ.
ಅಧ್ಯಕ್ಷರಾಗಿ ಪುನೀತ್ ಭೀಮಯ್ಯ, ಉಪಧ್ಯಾಕ್ಷರಾಗಿ ಸಿ.ಯು.ವಿಘ್ನೇಶ್, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್, ಸಹ ಕಾರ್ಯದರ್ಶಿಯಾಗಿ ರಮೇಶ್, ಜಂಟಿ ಕಾರ್ಯದರ್ಶಿಯಾಗಿ ಹೊಯ್ಸಳ, ಮನೋಹರ್ ನೇಮಕಗೊಂಡಿದ್ದಾರೆ. ಖಜಾಂಚಿಯಾಗಿ ವಿನಯ್, ಸಹ ಖಜಾಂಚಿಯಾಗಿ ಸಂದೇಶ್, ಜಂಟಿ ಖಜಾಂಚಿಯಾಗಿ ಕವನ್, ನಿಖಿಲ್ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಮಂಜು, ಮೊನಿಷ್, ಮಿಥುನ್, ಗೌರವಾಧ್ಯಕ್ಷರಾಗಿ ಎ.ಕೆ.ಸತೀಶ್, ಸಂದೇಶ್, ಶಿವರಾಜ್, ಹೇಮಂತ್ ಕುಮಾರ್, ಸಲಹೆಗಾರರಾಗಿ ಪ್ರೇಮ ರಾಮಯ್ಯ, ರಶ್ಮಿ ಪ್ರವೀಣ್, ಸವಿತಾ ರಾಕೇಶ್, ಮಂಜುನಾಥ್, ಎ.ಎಂ.ನಿತಿನ್, ಕಾರ್ತಿಕ್, ಶ್ರೀನಿಧಿ ರಾಜ್ ನೇಮಕಗೊಂಡಿದ್ದಾರೆ.
ಅಲಂಕಾರ ಸಮಿತಿಗೆ ಸಿ.ವಿ.ವಿಕ್ರಂ, ಭರತ್, ಲಿಖಿತ್ ಲೀ, ಪೂಜಾ ಸಮಿತಿಗೆ ವರ್ಶಿತ್, ಪೋಪಿನ್, ಧ್ವನಿವರ್ಧಕ ಸಮಿತಿಗೆ ಗಣೇಶ್, ಮೆರವಣಿಗೆ ಸಮಿತಿಗೆ ಸೋನಾಲ್ ಪೂಜಾರಿ, ಆಹಾರ ಸಮಿತಿಗೆ ಪ್ರಶಾಂತ್, ಜಯಣ್ಣ ಪ್ರಮುಖರಾಗಿ ಪ್ರಸಾದ್ ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ಕುಲದೀಪ್ ತಿಳಿಸಿದ್ದಾರೆ.








