ಮಡಿಕೇರಿ ನ.27 : ದಕ್ಷಿಣ ಕೊಡಗಿನ ಹಳ್ಳಿಗಟ್ಟು ಶ್ರೀಭದ್ರಕಾಳಿ ದೇವಾಲಯದಲ್ಲಿ ಪುತ್ತರಿ ಹಬ್ಬವನ್ನು ಶ್ರದ್ಧಾಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು. ಗದ್ದೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕದಿರನ್ನು ದೇವಾಲಯಕ್ಕೆ ತರಲಾಯಿತು. ಪೂಜೆಯ ನಂತರ ಭಕ್ತರಿಗೆ ವಿತರಿಸಲಾಯಿತು. ದೇವಾಲಯದಲ್ಲಿ ಪೂಜೆಯಾದ ನಂತರ ಗ್ರಾಮದ ವಿವಿಧ ಭಾಗದಲ್ಲಿ ಕದಿರು ಕೊಯ್ದು ಪುತ್ತರಿ ಆಚರಿಸಲಾಯಿತು.











