ಮಡಿಕೇರಿ ಏ.6 NEWS DESK : ರಾಜ್ಯದಲ್ಲಿ ಬಿಜೆಪಿ ಮತ್ತು ಜಾತ್ಯಾತೀತ ಜನತಾ ದಳ ಮೈತ್ರಿ ಯಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕೊಡಗಿನಲ್ಲಿ ಕೂಡ ಎರಡು ಪಕ್ಷದ ಮೈತ್ರಿ ಸಭೆ ಮಡಿಕೇರಿ ಯಲ್ಲಿ ನಡೆಯಿತು.
ಸಭೆ ಯಲ್ಲಿ ಮುಂದಿನ ಲೋಕ ಸಭಾ ಚುನಾವಣೆ ಯನ್ನು ಜಂಟಿ ಯಾಗಿ ಎದುರುಸುವ ತೀರ್ಮಾನ ವನ್ನು ಮಾಡಲಾಯಿತು. ಈ ನಿಟ್ಟಿನಲ್ಲಿ ಕಾರ್ಯ ತಂತ್ರ ರೂಪಿಸುವಂತೆ ಚರ್ಚೆ ನಡೆಯಿತು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜಿ ಶಾಸಕ ಅಪ್ಪಚ್ಚು ರಂಜನ್, ಜಾತ್ಯಾತೀತ ಜನತಾ ದಳದ ಕೋರ್ ಕಮಿಟಿ ಸದಸ್ಯರಾದ ಟಿ.ಎಲ್.ವಿಶ್ವ, ಪ್ರವೀಣ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಮಹೇಶ್ ಜೈನಿ, ವಿ.ಕೆ.ಲೋಕೇಶ್, ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹಾಗೂ ಎರಡು ಪಕ್ಷದ ಪ್ರಮುಖರಾದ ಪಾಣ್ ತಲೆ ವಿಶ್ವ ನಾಥ್, ನಾಗರಾಜ್, ಅನಿತಾ ಪೂವಯ್ಯ, ಕನ್ನಿಕೆ, ಮನು ಮಂಜುನಾಥ್, ಪುಷ್ಪವತಿ, ಗೌತಮ್ , ಕವನ್ ಕಾವೇರಪ್ಪ, ಮಂಜುನಾಥ್, ಶಿವದಾಸ್, ಜಾಶಿರ್, ಸುರೇಶ್, ರವಿ ಮೊಗೇರ ಸೇರಿದಂತೆ ಎರಡು ಪಕ್ಷದ ಪ್ರಮುಖರು ಹಾಜರಿದ್ದರು.









