
ನಾಪೋಕ್ಲು ಮೇ 5 NEWS DESK : ಕೊಡಗು ಜಿಲ್ಲಾ ಗೊಲ್ಲ ಸಮಾಜದ ವತಿಯಿಂದ ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊನ್ನುಕಂಡ ತಂಡ ಪ್ರಥಮ ಸ್ಥಾನಗಳಿಸಿತು. ಪೊನ್ನಾಟಿಯಂಡ ತಂಡ ದ್ವಿತೀಯ ಸ್ಥಾನ ಗಳಿಸಿತು. ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಆಚೀರ ತಂಡ ಪ್ರಥಮ ಸ್ಥಾನ ಗಳಿಸಿದರೆ, ಪೊನ್ನುಕಂಡ ತಂಡ ದ್ವಿತೀಯಸ್ಥಾನಗಳಿಸಿತು. ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪೆÇಂಗೇರ ತಂಡ ಪ್ರಥಮ ಸ್ಥಾನವನ್ನು ಕೈಬಿಲಿರ ತಂಡ ದ್ವಿತೀಯ ಸ್ಥಾನವನ್ನುಗಳಿಸಿತು. ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಅರೆಯಂಡ ಎ.ಭೀಮಯ್ಯ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದ ಫೈನಲ್ ಕ್ರೀಡಾಕೂಟದ ಉದ್ಘಾಟನೆಯನ್ನು ಕೊಡವ ಭಾಷಿಕ ಒಕ್ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿ, ಗೊಲ್ಲ ಸಮುದಾಯವು ಚಿಕ್ಕ ಸಮುದಾಯವಾದರೂ ದೊಡ್ಡ ಮಟ್ಟದಲ್ಲಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿರುವುದು ಸಂತಸ ತಂದಿದೆ. ಎಲ್ಲಾ ಸಮುದಾಯ ವರ್ಗದಲ್ಲೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡು ಮುಂದೆ ಬರಬೇಕೆಂದು ಆಶಿಸಿದರು. ಒಗ್ಗಟ್ಟು, ಶಿಸ್ತು, ಪ್ರೀತಿ, ವಿಶ್ವಾಸ ಮೈಗೂಡಿಸಿಕೊಳ್ಳ ಬೇಕೆಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕಿವಿಮಾತು ಹೇಳಿದರು. ಆರಕ್ಷಕ ಇಲಾಖೆಯ ನಿವೃತ್ತ ಸಹಾಯಕ ಉಪನಿರೀಕ್ಷಕ ಮುಕ್ಕಾಟಿರ ಕೆ.ಗಣೇಶ್ ಮಾದಪ್ಪ, ಅಗ್ನಿಶಾಮಕ ದಳದ ನಿವೃತ್ತ ಸಹಾಯಕ ಉಪ ನಿರೀಕ್ಷಕ ಪೊನ್ನಾಟಿಯಂಡ ಬಿ.ತಮ್ಮಯ್ಯ, ಮಾಜಿ ಸೈನಿಕ ಪೆÇಂಗೇರ ಪ್ರಕಾಶ್ ಚಿಣ್ಣಪ್ಪ ಪಾಲ್ಗೊಂಡಿದ್ದರು. ಕ್ರೀಡಾ ಸಮಿತಿ ಅಧ್ಯಕ್ಷ ತೊತ್ತಿಯಂಡ ಅಜಂತ ನಾಣಯ್ಯ ಕಾಫಿ ಬೆಳಗಾದ ಉದ್ದಮಾಡಂಡ ಕೆ.ಕಾಶಿ ಭೀಮಯ್ಯ, ಚೋಕಿರ ವಾಸುದೇವ, ಕ್ರೀಡಾಕೂಟದ ಸಮಿತಿಯ ಪದಾಧಿಕಾರಿಗಳು, ಜನಾಂಗಬಾಂಧವರು ಪಾಲ್ಗೊಂಡಿದ್ದರು. ಅರೆಯಂಡ ಯಶ್ಮಿ ಪ್ರಾರ್ಥಿಸಿದರು. ಕ್ರೀಡಾಕೂಟದ ವೀಕ್ಷಕ ವಿವರಣೆಯನ್ನು ತೊತ್ತಿಯಂಡ ಅಮಿತ್ ಮಾದಪ್ಪ ನೆರವೇರಿಸಿಕೊಟ್ಟರು, ಪೊನ್ನುಕಂಡ ತೀರ್ಥ ತಮ್ಮಯ್ಯ ಕಾರ್ಯಕ್ರಮ ನಿರೂಪಿಸಿದರು, ಚೋಕಿರ ವಾಸುದೇವ ಮಾದಪ್ಪ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನದ ಟ್ರೋಫಿಯನ್ನು ಮಾಜಿ ಸೈನಿಕ ಪೊನ್ನುಕಂಡ ಗಣೇಶ್ ಬೆಳ್ಳಿಯಪ್ಪ ಪ್ರಾಯೋಜಿಸಿದ್ದರೆ, ದ್ವಿತೀಯ ಬಹುಮಾನದ ಟ್ರೋಫಿಯನ್ನು ಕೋಡಿಯಂಡ ಶಶಿಕಾಂತ ತಿಮ್ಮಯ್ಯ ಪ್ರಯೋಜಿಸಿದ್ದರು. ಹಗ್ಗ ಜಗ್ಗಾಟ ಪಂದ್ಯದ ಪ್ರಥಮ ಬಹುಮಾನದ ಟ್ರೋಫಿಯನ್ನು ಯುವನಟ ತೊತ್ತಿಯಂಡ ಕಿರಣ್ ಸೋಮಣ್ಣ ಪ್ರಾಯೋಜಿಸಿದ್ದರೆ ದ್ವಿತೀಯ ಬಹುಮಾನದ ಟ್ರೋಫಿಯನ್ನು ಅರೆಯಂಡ ಕಾಳಪ್ಪ ಪ್ರಾಯೋಜಿಸಿದ್ದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕ ಕೈಬುಲಿರ ಕಿಷನ್ ಉತ್ತಪ್ಪ ಪಂದ್ಯಾಟದ ಚೆಂಡು ಹಾಗೂ ಸ್ಟಂಪ್ ಗಳನ್ನು ಒದಗಿಸಿದ್ದರು.
ವರದಿ : ದುಗ್ಗಳ ಸದಾನಂದ









