




ಮೂರ್ನಾಡು ಮೇ 10 NEWS DESK : ಕ್ರೀಡೆಗಳಿಗೆ ಸಮುದಾಯದ ಬಾಂಧವ್ಯ ಬೆಸೆಯುವ ಶಕ್ತಿಯಿದ್ದು, ಮುಂದೆಯು ಹೆಚ್ಚಿನ ಕ್ರೀಡಾಕೂಟಗಳು ಆಯೋಜನೆಯಾಗಬೇಕೆಂದು ಬೆಳೆಗಾರರಾದ ಟಿ.ಎನ್.ಲೋಕನಾಥ್ ಅಭಿಪ್ರಾಯಿಸಿದರು. ಬಲಿಜ ನಾಯ್ಡು ಸಮಾಜದ ಅಂಗ ಸಂಸ್ಥೆಯಾದ ನಾಯ್ಡುಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಮೂರ್ನಾಡು ಕಾಲೇಜು ಮೈದಾನದಲ್ಲಿ ನಡೆದ ದ್ವಿತೀಯ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಲಿಜ ಸಮಾಜ ಬಾಂಧವರು ವಿರಳವಾಗಿದ್ದರು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಮಾಜ ಬಾಂಧವರನ್ನು ಒಂದೇ ವೇದಿಕೆಯಲ್ಲಿ ಕರೆತರುವಂತೆ ಮಾಡುವ ಶಕ್ತಿ ಕ್ರೀಡೆಗಿದೆ ಎಂದರು. ಮೂರ್ನಾಡು ಬೆಳೆಗಾರರಾದ ಗಣೇಶ್ ನಾಯ್ಡು ಮಾತನಾಡಿ, ಕ್ರೀಡಾಕೂಟ ಕೇವಲ ಕ್ರೀಡೆಗೆ ಮಾತ್ರ ಸಿಮಿತವಾಗದೆ. ಸಮಾಜದ ಕುಟುಂಬಗಳನ್ನು ಒಂದು ಮಾಡುವ ಸಮ್ಮಿಲನ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಿಸಿದರು. ನಾಯ್ಡುಸ್ ಸ್ಪೋಟ್ರ್ಸ್ ಕ್ಲಬ್ ಉಪಾಧ್ಯಕ್ಷ ಟಿ.ಜಿ.ಹರ್ಷ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 8 ತಂಡಗಳು ಭಾಗವಹಿಸಿವೆ. ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆಯೆಂದರು. ವೇದಿಕೆಯಲ್ಲಿ ನಾಯ್ಡುಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ್ ಲೋಕನಾಥ್ ಮತ್ತು ಆಯೋಜಕರು, ಬಲಿಜ ಸಮಾಜದ ಹಿರಿಯರು ಉಪಸ್ಥಿತರಿದ್ದರು.ಶಿಕ್ಷಕರಾದ ನಿರ್ಮಲ ಅವರು ಸ್ವಾಗತಿಸಿ, ವಂದಿಸಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ