
ಮಡಿಕೇರಿ NEWS DESK ಏ.27 : ಶನಿವಾರಸಂತೆ ಹೋಬಳಿಯ ನಿಡ್ತ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಟಿ.ಕೆ.ಅಶೋಕ್ ಅವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಸದಸ್ಯರಾದ ಕಾರ್ತಿಕ್, ತೀರ್ಥಾನಂದ, ಯಶೋಧ ಪುಟ್ಟಸ್ವಾಮಿ, ತಸ್ಲೀಂ, ಸುಮಿತ್ರ ಮಹೇಶ್ ಹಾಗೂ ತನ್ಮಯ್ ಅವರುಗಳ ಬೆಂಬಲದಿAದ ಟಿ.ಕೆ.ಅಶೋಕ್ ಅವರು ಅಧಿಕ ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಸೋಮವಾರಪೇಟೆ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಕಾಂತರಾಜ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್, ಡಿಸಿಸಿ ಬ್ಯಾಂಕ್ ಸದಸ್ಯ ಶರತ್ ಶೇಖರ್, ಸೋಮವಾರಪೇಟೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸಂದೀಪ್, ಕಾಂಗ್ರೆಸ್ ಮುಖಂಡರಾದ ಮತ್ತೂರು ಮಹೇಶ್, ಗಂಗಾಧರ್, ಡಿ.ಜೆ.ಈರಪ್ಪ, ಅನಿಲ್ ನಿಡ್ತ, ಶೇಖರ್ ನಿಡ್ತ ಹಾಗೂ ಕಾರ್ಯಕರ್ತರು ಟಿ.ಕೆ.ಅಶೋಕ್ ಅವರನ್ನು ಅಭಿನಂದಿಸಿದರು.









