
ಮಡಿಕೇರಿ ಏ.30 NEWS DESK : ಕೊಡಗು ಜಿಲ್ಲಾ ಕುಲಾಲ(ಕುಂಬಾರ) ಸಂಘದ ವತಿಯಿಂದ ಜಿಲ್ಲಾ ಯುವ ಘಟಕ ಮತ್ತು ಜಿಲ್ಲಾ ಮಹಿಳಾ ಘಟಕ ಸಹಯೋಗದೊಂದಿಗೆ ಸಮಾಜ ಬಾಂಧವರ ಸಮ್ಮಿಲನ ಮತ್ತು ಕ್ರೀಡೋತ್ಸವ ಸಂಭ್ರಮದಿಂದ ನಡೆಯಿತು. ಮುಂಜಾನೆ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಕ್ರೀಡಾ ಜ್ಯೋತಿಯನ್ನು ಬೆಂಗಳೂರು ಕುಲಾಲ ಸಮಾಜದ ಮಾಜಿ ಉಪಾಧ್ಯಕ್ಷ ಹಾಗೂ ನಿವೃತ ಯೋಧ ಕೆ.ಎ0.ಚಿನ್ನಪ್ಪ ಚಾಲನೆ ನೀಡಿದರು. ಸಭಾ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಮೂಲ್ಯರ ಯಾನೆ ಕೊಡಗು ಜಿಲ್ಲಾ ಕುಲಾಲ ಕುಂಬಾರ ಬಾಂಧವರ ಕಷ್ಟಕಾರ್ಪಣ್ಯಕ್ಕೆ ನಾವೆಲ್ಲರೂ ಕೈಜೋಡಿಸುತ್ತೇವೆ. ಮಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಪ್ರಾರಂಭವಾಗುವ ಮಹಿಳಾ ಹಾಸ್ಟೆಲ್ ನಲ್ಲಿ ಕೊಡಗಿನ ಮಹಿಳಾ ಕುಲಬಾಂಧವರಿಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ವೇದಿಕೆಯಲ್ಲಿ ಮಂಗಳೂರು ಶ್ರೀದೇವಿ ದೇವಸ್ಥಾನ ಅಧ್ಯಕ್ಷ ಸದಾಶಿವ ಕುಲಾಲ್ , ದಕ್ಷಿಣ ಕನ್ನಡ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾ ದಳಪತಿ ಪ್ರದೀಪ್ ಅತ್ತಾವರ್, ಸಾಮಾಜಿಕ ಕಾರ್ಯಕರ್ತ ಕಿರಣ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಪುರುಷರ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ಮೆರವಣಿಗೆ :: ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಕೆ.ಕುಶಾಲಪ್ಪ ಮೂಲ್ಯ , ವೆಂಡಮ್ ಎಂಟರ್ಪ್ರೈಸಸ್ ಮಾಲೀಕ ಕೆ.ದಾಮೋದರ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ, ಖಜಾಂಚಿ ಕೆ.ಎಸ್.ಗಿರೀಶ್ ಮಡಿಕೆಬೀಡು ಮತ್ತು ಯುವ ಘಟಕದ ಪದಾಧಿಕಾರಿಗಳು ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಕುಲಾಲ ಕುಂಬಾರ ಸಮಾಜದ ಕುಲಬಾಂಧವರು ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಆಟೋಟ ಸ್ಪರ್ಧೆ :: ಮರುದಿನ ಪುರುಷರ ವಿಭಾಗದಲ್ಲಿ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ಗೋಣಿಚೀಲ ಓಟ, ಮೂರು ಕಾಲಿನ ಓಟ, 100, 200 ಮೀಟರ್ ಓಟ, ವೇಗದ ನಡಿಗೆ, ಬಾಲ್ ಪಾಸಿಂಗ್ ಸ್ಪರ್ಧೆ, ಮಹಿಳೆಯರ ವಿಭಾಗದಲ್ಲಿ ರಂಗೋಲಿ, ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಬಾಂಬ್ ಇನ್ ದ ಸಿಟಿ, ನಿಂಬೆ ಚಮಚ, ಸೂಜಿಗೆ ದಾರ, ಭಾರದ ಗುಂಡು ಎಸೆತ, ಗೋಣಿಚೀಲದ ಓಟ, ಬಕೇಟಿಕೆ ಚೆಂಡು ಹಾಕುವುದು, ಸಂಗೀತ ಕುರ್ಚಿ, ಮೂರು ಕಾಲಿನ ಓಟ, 100, 200 ಮೀ ಓಟ, ವಾಟರ್ ಪಾಸಿಂಗ್ ಬಾಲ್ ವೇಗದ ನಡಿಗೆ, ಮಕ್ಕಳ 50,100 ಮೀ ಓಟ, ಕಾಳು ಹೆಕ್ಕುವುದು, ಮೆಮೊರಿ ಗೇಮ್, ಕಪ್ಪೆ ಜಿಗಿತ, ಚಕ್ಕುಲಿ ತಿನ್ನುವ ಸ್ಪರ್ಧೆ, ಸೂಜಿಗೆ ದಾರ ಸ್ಪರ್ಧೆ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಯಲ್ಲಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಕುಲಬಾಂಧವರು ಸ್ಪರ್ಧಿಸಿ ಸಂಭ್ರಮಿಸಿದರು.
ಸಮಾರೋಪ ಸಮಾರಂಭ :: ಸಮಾರೋಪ ಸಮಾರಂಭದಲ್ಲಿ ಸಂಸದ ಯದುವೀರ್ ಕೃಷ್ಣ ದತ್ತ ಒಡೆಯರ್ ಮಾತನಾಡಿ ಕೊಡಗು ಜಿಲ್ಲೆ ಸ್ಪರ್ಧಿಸಿರುವುದು ನನಗೆ ಒಂದು ಹೆಮ್ಮೆಯ ವಿಷಯ ನನ್ನ ಈ ಕ್ಷೇತ್ರದ ಜನರಿಗಾಗಿ ನಾನು ಸದಾ ಮುಂದೆ ಇರುತ್ತೇನೆ. ಕೊಡಗು ಜಿಲ್ಲಾ ಕುಲಾಲ ಕುಂಬಾರ ಬಂದವರ ಕಷ್ಟ ಕಾರ್ಪಣ್ಯಕ್ಕೆ ನೆರವಾಗುತ್ತೇನೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಕೊಡಗಿನ ಕುಂಬಾರ ಬಾಂಧವರ ಈ ರೀತಿಯ ಒಗ್ಗಟ್ಟು ಎಲ್ಲರಿಗೂ ಮಾದರಿ. ಮುಂದಿನ ದಿನಗಳಲ್ಲಿ ನಿಮ್ಮ ಯಾವ ಇಂತಹ ಕಾರ್ಯಕ್ರಮಗಳು ನನ್ನ ಪೂರ್ಣ ರೀತಿಯ ಬೆಂಬಲವಿದೆ. ಹಿಂದುಳಿದ ವರ್ಗದ ಬೆಂಬಲಕ್ಕೆ ಶಾಸಕನಾಗಿ ನಾನು ಸದಾ ಕಟಿಬದ್ಧರಾಗಿದ್ದೇನೆ ಎಂದು ಕಾರ್ಯಕ್ರಮಕ್ಕೆ ಹಾರೈಸಿದರು. ಅಖಿಲ ಭಾರತೀಯ ಗ್ರಾಹಕರ ಕಲ್ಯಾಣ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಎ0.ಪಿ.ವರ್ಷ ಮಾತನಾಡಿ ಕುಂಬಾರಿಕೆಯ ಮತ್ತು ಕುಂಬಾರರ ಇತಿಹಾಸವನ್ನು ಸವಿಸ್ತಾರವಾಗಿ ಮುಂದಿಟ್ಟರು. ಐಎಎಸ್ ಐಪಿಎಸ್ ಮಾಡಲು ಆಸಕ್ತರಾಗಿರುವ ಕೊಡಗು ಜಿಲ್ಲಾ ಕುಲಾಲ ಕುಂಬಾರ ಮಕ್ಕಳಿಗೆ ತನ್ನ ಕಡೆಯಿಂದ 25,000ಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು. ಗ್ರಾಹಕರ ನ್ಯಾಯಾಲಯದ ನ್ಯಾಯಾಧೀಶ ರೇಣುಕಾಂಬ ಮಾತನಾಡಿ, ಕೊಡಗು ಜಿಲ್ಲಾ ಕುಲಾಲ ಕುಂಬಾರ ಬಾಂಧವರ ಈ ರೀತಿಯ ಒಗ್ಗಟ್ಟು ಬಾಂಧವ್ಯ ಸಮಾಜಕ್ಕೆ ಒಂದು ಮಾದರಿ ಎಂದು ಶ್ಲಾಘಿಸಿದರು. ದಾವಣಗೆರೆ ಸರ್ವಜ್ಞ ಸಂಶೋಧನಾ ಪೀಠದ ಅಧ್ಯಕ್ಷ ಮಂಜಪ್ಪ ಶರಣರು ಮಾತನಾಡಿ, ಸರ್ವಜ್ಞ ಸಂಶೋಧನಾ ಪೀಠದಿಂದ ಕುಲಬಾಂಧವರಿಗೆ ನೀಡುವ ಸೌಲಭ್ಯಗಳು ಮತ್ತು ವಿಶ್ವವಿದ್ಯಾನಿಲಯದಿಂದ ಸರ್ವಜ್ಞನ ಮತ್ತು ಕುಂಬಾರ ಸಮಾಜದ ಅಧ್ಯಯನ ಬಗ್ಗೆ ಸವಿಸ್ತಾರವಾಗಿ ವಿಸ್ತರಿಸಿದರು. ಸಮಾಜದ ಮಾಜಿ ಉಪಾಧ್ಯಕ್ಷ ಹಾಗೂ ನಿವೃತ ಯೋಧ ಕೆ.ಎ0.ಚಿನ್ನಪ್ಪ ಮಾತನಾಡಿ, ಕ್ರೀಡೋತ್ಸವ ಕುಲಾಲ ಕುಂಬಾರ ಬಾಂಧವರ ಬಾಂಧವ್ಯಕ್ಕೆ ಅಡಿಪಾಯ. ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮ ನಡೆಯುವಂತಾಗಲಿ ಆ ಮೂಲಕ ಕೊಡಗು ಜಿಲ್ಲೆ, ಕುಲಾಲ ಕುಂಬಾರ ಬಾಂಧವರು ಒಗ್ಗಟ್ಟಾಗಿ ಸಂಘಟಿತರಾಗಿ ನಿಲ್ಲಿ ಎಂದು ತಿಳಿಸಿದರು. ಖ್ಯಾತ ಬಹುಭಾಷಾ ಚಲನಚಿತ್ರ ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಕುಲಾಲ ಕುಂಬಾರ ಬಾಂಧವರ ಸಾಮಾಜಿಕ ಬದ್ಧತೆ, ಸೌಜನ್ಯತೆ, ಪ್ರಾಮಾಣಿಕತೆಯನ್ನು ಕೊಂಡಾಡಿದರು. ತಮ್ಮ ಶೈಲಿಯಲ್ಲಿ ಹಾಡನ್ನು ಹಾಡಿ ಎಲ್ಲರನ್ನೂ ರಂಜಿಸಿದರು. ಇದೇ ಸಂದರ್ಭ ಕುಂಬಾರ ಬಾಂಧವರು ಮಣ್ಣಿನಲ್ಲಿ ತಯಾರು ಮಾಡಿದ ಪರಿಕರಗಳನ್ನು ಉಡುಗೊರೆಯಾಗಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಕೆ.ಕುಶಾಲಪ್ಪ ಮೂಲ್ಯ ಕೊಡಗು ಜಿಲ್ಲಾ ಸಂಘವು ಜಿಲ್ಲೆಯ ಕುಲಾಲ ಕುಂಬಾರ ಬಾಂಧವರ ಏಳಿಗೆಗೆ ಹಾಗೂ ಸಹಕಾರಕ್ಕೆ ಸಿದ್ಧವಿದೆ. ಸರಳತೆ, ಸಮಾನತೆ,ಮಾನವೀಯತೆಯ ಮೂಲಕ ಜಿಲ್ಲಾ ಸಂಘವು ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಕುಲಾಲ ಕುಂಬಾರ ಬಾಂಧವರಿಗೆ ಹಲವು ಯೋಜನೆಗಳು ಸಂಘದ ಮುಂದಿದೆ ಅದನ್ನು ಕಾರ್ಯಗತ ಗೊಳಿಸಲು ನಿಮ್ಮೆಲ್ಲರ ಸಹಕಾರ ಅವಶ್ಯಕ. ಕೊಡಗಿನ ಕುಲಾಲ ಕುಂಬಾರ ಬಾಂಧವರು ನೀಡಿದ ಅಭೂತಪೂರ್ವ ಸಹಕಾರ ಸಹಾಯಕ್ಕ್ಕೆ ಜಿಲ್ಲಾ ಸಂಘವು ಸದಾ ಚಿರಋಣಿಯಾಗಿರುತ್ತದೆ. ನಿಮ್ಮೆಲ್ಲರ ಸಹಕಾರ ಸಹಾಯದಿಂದ ಈ ರೀತಿಯ ಅದ್ದೂರಿ ಕಾರ್ಯಕ್ರಮ ನಡೆಯಲು ಸಾಧ್ಯವಾಯಿತು. ಕಾರ್ಯಕ್ರಮದ ಯಶಸ್ಸಿಗೆ ಶ್ರಮವಹಿಸಿದ ಎಲ್ಲರಿಗೂ ಶುಭವಾಗಲಿ ಎಂದು ನುಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮೂಡಿಗೆರೆ ಕುಲಾಲ ಕುಂಬಾರ ಸಂಘದ ಅಧ್ಯಕ್ಷ ವಿಶ್ವನಾಥ್ ಕುಲಾಲ್, ಬಂಟ್ವಾಳ ಕುಲಾಲಸಂಘದ ಸತೀಶ್, ಮೈಸೂರು ಶಾಲಿವಾಹನ ಗುಡಿ ಕೈಗಾರಿಕೆ ಅಧ್ಯಕ್ಷ ವೆಂಕಟೇಶ, ಪ್ರಮುಖರಾದ ಮುತ್ತಮ್ಮ ಕೋಟಿ ಹಾಜರಿದ್ದರು. ಕ್ರೀಡೆಯಲ್ಲಿ ವಿಜೇತರಾದ ಕುಲಾಲ ಕುಂಬಾರ ಬಾಂಧವರಿಗೆ ಬಹುಮಾನ ವಿತರಿಸಲಾಯಿತು. ಯಶಸ್ವಿನಿ ಪ್ರಾರ್ಥಿಸಿದರು, ರಮೇಶ್ ಮಡಿಕೆಬೀಡು ಸ್ವಾಗತಿಸಿದರು, ನವೀನ್ ಕುಲಾಲ್ ಪುತ್ತೂರು ನಿರೂಪಿಸಿದರು, ಹೇಮಲತಾ ಪ್ರಕಾಶ್ ವಂದಿಸಿದರು.









