
ಮಡಿಕೇರಿ, ಮೇ 6 NEWS DESK : ನಗರದ ಅಶೋಕಪುರದ ಶ್ರೀ ವೀರಭದ್ರ, ಪಾಷಾಣ ಮೂರ್ತಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ನೇಮೋತ್ಸವ ನಡೆಯಿತು. ಪಂಜುರ್ಲಿ, ಕಲ್ಕುಡ, ಪಾಷಾಣ ಮೂರ್ತಿ, ಗುಳಿಗ, ಕೊರ್ತಿ, ಕಲ್ಲುರ್ಟಿ ಹಾಗೂ ಕೊರಗಜ್ಜ ದೈವಗಳ ಕೋಲಗಳು ನಡೆದವು. ನಗರ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ದೈವಗಳ ದರ್ಶನ ಪಡೆದರು. ಇದೇ ಸಂದರ್ಭ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ದೇವಾಲಯ ಅರ್ಚಕ ರಾಜೇಶ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನಡೆಯಿತು.









