ಲೇಖಕ: admin

ಸುಂಟಿಕೊಪ್ಪ, ಆ.28 NEWS DESK : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕ್ಷೇತ್ರ ರೈತರ ಹಿತಾಶಕ್ತಿ ಕಾಪಾಡಿಕೊಂಡು ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಲಾಭಾಂಶ ಹೆಚ್ಚಿಸುತ್ತಾ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಹೇಳಿದರು. ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ನರೇಂದ್ರ ಮೋದಿ ಭವನದಲ್ಲಿ ಆಯೋಜಿಸಲಾಗಿದ್ದು, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿನಲ್ಲಿ ಕಾಫಿಗೆ ಹೂವು ಮಳೆಯ ಕೊರತೆ ಹಾಗೂ ಇದೀಗ ಅತಿವೃಷ್ಠಿಯಿಂದ ಬೆಳೆಗಾರರ ಫಸಲು ನಷ್ಟವಾಗಿದ್ದು, ಸಹಕಾರ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ಚೆಟ್ಟಳ್ಳಿ ಕೃಷಿಪತ್ತಿನ ಸಹಕಾರ ಸಂಘವು ಚೆಟ್ಟಳ್ಳಿ ವ್ಯಾಪ್ತಿಯ ವಿವಿಧ ಸಮಾಜಕ್ಕೆ ಹಾಗೂ ಐನ್‍ಮನೆ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುತ್ತಾ ಬರುತ್ತಿದ್ದು, ರೈತರು ಆರ್ಥಿಕವಾಗಿ ಸದೃಢವಾಗಲು ಎಲ್ಲಾ ರೀತಿಯ ನೆರವು ನೀಡಲಾಗುತ್ತಿದೆ. ಸಹಕಾರ ಸಂಘದಲ್ಲಿ ಈ ಹಿಂದೆ ಮನೆಯಲ್ಲಿ ಗಂಡ ಹೆಂಡತಿ ಮಾತ್ರ ಸದಸ್ಯರಾಗುತ್ತಿದ್ದರು. ಈಗ ಆ ಕುಟುಂಬದ ಮಕ್ಕಳನ್ನು ಸದಸ್ಯರನ್ನಾಗಿಸುವ…

Read More

ಮಡಿಕೇರಿ ಆ.28 NEWS DESK : ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಡಾ.ದೀಪಿಕಾ ಮೂರ್ತಿ ನಿಯೋಜನೆಗೊಂಡರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್ ಆದೇಶದ ಮೇರೆಗೆ ಡಾ.ದೀಪಿಕಾ ಅಧಿಕಾರ ಸ್ವೀಕರಿಸಿದರು. ಆರೋಗ್ಯ ಈ ಸಂದರ್ಭ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಹಾಜರಿದ್ದರು.

Read More

ಮಡಿಕೇರಿ ಆ.28 NEWS DESK : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಗೋಣಿಕೊಪ್ಪ ಸೇವಾ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಸಂಭ್ರಮದಿಂದ ಆಚರಿಸಲಾಯಿತು. ಸುಮಾರು 35ಕ್ಕೂ ಹೆಚ್ಚಿನ ಮಕ್ಕಳು ರಾಧಾಕೃಷ್ಣನ ವೇಷಧರಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿ ಸಂಭ್ರಮ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಇಂದಿನ ಒತ್ತಡ ಜೀವನದಲ್ಲಿ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕತೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಪ್ರವಚನಕಾರರಾಗಿ ಆಗಮಿಸಿದ ಹಾಸನ ಸೇವಾ ಕೇಂದ್ರ ಸಂಚಾಲಕಿ ಬ್ರಹ್ಮಾಕುಮಾರಿ ಆಶಾಕ್ಕ  ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಧ್ಯಾತ್ಮಿಕ ರಹಸ್ಯವನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು. ಶ್ರೀ ಕೃಷ್ಣನು ಸರ್ವಗುಣ ಸಂಪನ್ನ, ಸಂಪೂರ್ಣ ನಿರ್ವಿಕಾರಿ, ಅಹಿಂಸ ಪರಮೋದರ್ಮಿ, ಮರ್ಯಾದ ಪುರುಷೋತ್ತಮ, ಹದಿನಾರು ಕಲ ಸಂಪನ್ನ ಹಾಗೂ ಸಂಪೂರ್ಣ ಪವಿತ್ರನಾಗಿದ್ದನು ಅದನ್ನು ಪ್ರತಿಯೊಬ್ಬರು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಾವು ಸಹ ದೈವತ್ವ ಪಡೆದುಕೊಳ್ಳಲು ಸಾಧ್ಯ. ಶ್ರೀ ಕೃಷ್ಣನ ಜೀವನ ಚರಿತ್ರೆಯಲ್ಲಿ ಬರುವ ಒಂದೊಂದು ಘಟನೆಗಳಲ್ಲಿ ಆಳವಾದ ಆಧ್ಯಾತ್ಮಿಕ ರಹಸ್ಯ…

Read More

ಮಡಿಕೇರಿ ಆ.28 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ ಪರಿಕರಗಳಾದ ದುಡಿ, ಧೋಳ್, ಕೊಂಬು, ತಾಳ, ಒಡಿಕತ್ತಿಗಳಿಗೆ ಅರ್ಹ ಕಲಾವಿದರುಗಳು ಹಾಗೂ ದೇವನೆಲೆ, ಐನ್‍ಮನೆ ಮತ್ತು ನೋಂದಾಯಿತ ಸಂಘ-ಸಂಸ್ಥೆ-ಸಮಾಜಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸ ಬಯಸುವವರು ಸ್ವವಿವರಗಳನ್ನು ದಾಖಲೆ ಸಮೇತವಾಗಿ ಸಲ್ಲಿಸುವುದು. ತಮಗಳ ಸೇವಾಕ್ಷೇತ್ರದಲ್ಲಿನ ಅನುಭವ ಹಾಗೂ ಕೊಡವ ಸಂಸ್ಕೃತಿಗೆ ನೀಡಿರುವ ಕೊಡುಗೆಗಳ ದಾಖಲೆಗಳನ್ನು ಸಲ್ಲಿಸುವುದು. ಕೊಡವ ಅಕಾಡೆಮಿಯಿಂದ ಅರ್ಹತೆಯ ಮೇರೆಗೆ ಪರಿಕರಗಳನ್ನು ಪಡೆಯುವ ವ್ಯಕ್ತಿಗಳು, ಸಂಸ್ಥೆಗಳು ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರ ಜೊತೆಗೆ ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುವಂತೆ ದೃಡೀಕರಿಸುವುದು ಕಡ್ಡಾಯವಾಗಿದೆ. ಧೋಳ್, ಕೊಂಬುಗಳನ್ನು ಪಡೆಯುವ ಕಲಾವಿದರು ಕೊಡವ ಸಂಸ್ಕೃತಿ ಪಾಲಕರು ಹಾಗೂ ಕೊಡವ ಭಾಷಿಕರಾಗಿದ್ದು ಅಕಾಡೆಮಿಯ ಕಾರ್ಯಕ್ರಮಗಳಿಗೆ ಆಹ್ವಾನದ ಮೇರೆ ನಿಯಮಾನುಸಾರ ಭಾಗವಹಿಸುವಂತವರಾಗಿರತಕ್ಕದ್ದು. ಅಕಾಡೆಮಿಯ ಶರತ್ತುಗಳು ಹಾಗೂ ನೀತಿ ನಿಯಮಗಳಿಗೆ ಹೊಂದಿಕೊಂಡು ಕೊಡವ ಸಂಸ್ಕೃತಿಯ ಪೋಷಣೆಗೆ ಸದಾ ಸಿದ್ದರಿರಬೇಕು. ಈ ಹಿಂದೆ ಪರಿಕರಗಳನ್ನು ಪಡೆದಿರುವವರು ಅರ್ಜಿ ಸಲ್ಲಿಸುವಂತಿಲ್ಲ. ಅಂತಹವರ ಅರ್ಜಿಯನ್ನು ತಿರಸ್ಕರಿಸಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ…

Read More

ನಾಪೋಕ್ಲು ಆ.28 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮತ್ತು ವಾಟೆಕಾಡು ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ವಾಟೆಕಾಡುವಿನಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ವಾಟೆಕಾಡು ಸಮುದಾಯ ಭವನ ಮತ್ತು ಅಂಗನವಾಡಿ ಕೇಂದ್ರದ ಸುತ್ತಲ್ಲು ಬೆಳೆದಿದ್ದ ಗಿಡಗಂಟಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಮಿತಿಯ ಪದಾಧಿಕಾರಿಗಳು ಸ್ವಚ್ಛಗೊಳಿಸಿದರು. ಈ ಸಂದರ್ಭ ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅಧ್ಯಕ್ಷ ಹೆಚ್.ಜೆ.ಶರಣು, ಕಾರ್ಯದರ್ಶಿ ಅಭಿ, ಹೆಚ್.ಜೆ.ಗಣೇಶ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳಾದ ಸರಸ್ವತಿ, ಸುಮ್ಮಿ, ಸೀತೆ, ರಂಜು , ರೂಪ ಮತ್ತು ಇತರರು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ. 

Read More

ನಾಪೋಕ್ಲು ಆ.28 NEWS DESK : ಅಯ್ಯಂಗೇರಿ ಚಿನ್ನತಪ್ಪ (ಶ್ರೀ ಕೃಷ್ಣ ) ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆ ಶ್ರೀ ಕೃಷ್ಣನಿಗೆ ಅಲಂಕಾರ ಹಾಗೂ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ನಂತರ ನೆರೆದ್ದವರಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಿತು. ವರದಿ : ದುಗ್ಗಳ ಸದಾನಂದ.  

Read More

ನಾಪೋಕ್ಲು ಆ.28 NEWS DESK : ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಯುವಕ ಸಂಘದ ಆಶ್ರಯದಲ್ಲಿ ಕೈಲ್ ಮುಹೂರ್ತ (ಕೈಲ್ಪೊಳ್ದ್) ಹಬ್ಬದ ಪ್ರಯುಕ್ತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ರೀಡಾಕೂಟ ನಡೆಯಿತು. ಯೂತ್ ಕ್ಲಬ್ ಅಧ್ಯಕ್ಷ ಕಾಳೆಯಂಡ ರಿನೇಶ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಕೂಟವನ್ನು ನಿವೃತ್ತ ಎಸ್ಪಿ ಬೊಳ್ಯೆಪಂಡ ರವಿ ಮಾಚಯ್ಯ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು.  ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಬೊಳ್ಯಪಂಡ ಜಾನ್ ಪೂಣಚ್ಚ ಪ್ರಥಮ, ಕಾಳಚಂಡ ಹರ್ಷ ಉತ್ತಯ್ಯ ದ್ವಿತೀಯ, ಬೇತು ಗ್ರಾಮದ ಕಾಫಿ ಬೆಳೆಗಾರ ಕುಟ್ಟಂಚೆಟ್ಟೀರ ಶ್ಯಾಂ ಬೋಪಣ್ಣ, ಕೊಂಡೀರ ಕಾಳಯ್ಯ, ಠಾಣಾಧಿಕಾರಿ ಮಂಜುನಾಥ್ ಸಂಘದ ಪದಾಧಿಕಾರಿಗಳು ಸದಸ್ಯರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು. ಬಲ್ಲಮಾವಟಿ :: ಸಮೀಪದ ಬಲ್ಲಮಾವಟಿ ಗ್ರಾಮದ ಅಪೋಲೋ ಯುವಕ ಸಂಘ ಮತ್ತು ಕಾವೇರಿ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಾಡಹಬ್ಬ ಕೈ ಮುಹೂರ್ತ ಪ್ರಯುಕ್ತ ಆಟೋಟ ಕೂಟ ಜರುಗಿತು. ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗ್ರಾ.ಪಂ…

Read More

ಮಡಿಕೇರಿ ಆ.28 NEWS DESK : ಮಂಗಳೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘಟನೆ ಮೀಡಿಯಾ ಅಲೂಮ್ನಿ ಅಸೋಸಿಯೇಷನ್‌ ಆಫ್‌ ಮಂಗಳಗಂಗೋತ್ರಿ (MAAM) ವತಿಯಿಂದ ನೀಡಲಾಗುವ 2023- 24ನೇ ಸಾಲಿನ ಮಾಮ್‌ ಇನ್‌ ಸ್ಪೈರ್‌ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳ ಯಾವುದೇ ಪದವಿ ವಿಭಾಗ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಸಾಧಕ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುತ್ತದೆ. ವಿಜೇತರಿಗೆ ರೂ.5 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು. 2023- 24ರಲ್ಲಿ ಯಾವುದೇ ಪದವಿಯ ಅಧ್ಯಯನ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಅಧ್ಯಯನ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹತೆಗಳು: ಪದವಿ ವಿದ್ಯಾರ್ಥಿಗಳಿಗೆ: 2023ರ ಜೂನ್‌ನಿಂದ 2024ರ ಮೇ ಅಂತ್ಯದ ಒಳಗೆ ಕನಿಷ್ಠ 8 ಲೇಖನಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿರಬೇಕು. ರೇಡಿಯೋ, ಟಿವಿ ಕಾರ್ಯಕ್ರಮಗಳು ಪ್ರಸಾರವಾಗಿರಬೇಕು. ಮಾಧ್ಯಮ ಕ್ಷೇತ್ರದ ಬಗ್ಗೆ ಆಸಕ್ತರಾಗಿರಬೇಕು. ಶೈಕ್ಷ ಣಿಕ ವಿಷಯಗಳಲ್ಲಿ ಶೇ.60ರಷ್ಟು ಅಂಕ ಗಳಿಸಿರಬೇಕು. ಬ್ಲಾಗ್‌ ಬರಹ,…

Read More

ಪುತ್ತೂರು ಆ.28 NEWS DESK : ರಾಷ್ಟ್ರ ಸೇವೆ ಎನ್ನುವುದು ಒಂದು ಹೆಮ್ಮೆಯ ವಿಷಯ. ನಮ್ಮಲ್ಲಿ ಅಪ್ಪಟ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕಾದರೆ ನಮ್ಮ ಚಿಂತನೆ ಮತ್ತು ಮನೋಭಾವಗಳಲ್ಲಿ ಸ್ಪಷ್ಟತೆಯನ್ನು ತಂದುಕೊಳ್ಳಬೇಕು ಎಂದು ಭಾರತೀಯ ನೌಕಾಪಡೆಯ ಅಧಿಕಾರಿ ರೇರ್ ಅಡ್ಮಿರಲ್ ಸಿ.ಆರ್.ಪ್ರವೀಣ್ ನಾಯರ್ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಮತ್ತು ಇನ್ಸ್ಟಿಟ್ಯೂಶನಲ್ ಇನ್ನೋವೇಶನ್ ಕೌನ್ಸಿಲ್ ಸಂಯುಕ್ತ ಆಶ್ರಯದಲ್ಲಿ ನಡೆದ ಇಂಜಿನಿಯರಿಂಗ್ ಪದವಿಯ ನಂತರ ಎನ್ನುವ ವಿಷಯದ ಬಗೆಗಿನ ವಿಚಾರ ಸಂಕಿರಣದಲ್ಲಿ ಅವರು ಮಾತಾಡಿದರು. ಮಿಲಿಟರಿ ವ್ಯವಸ್ಥೆ ಎಂದಾಕ್ಷಣ ಕೋವಿ ಹಿಡಿದುಕೊಂಡು ಯುದ್ಧ ಭೂಮಿಗೆ ಹೋಗುವ ಕಲ್ಪನೆ ಮನಸ್ಸಿನಲ್ಲಿ ಮೂಡುವುದು ಸಹಜ. ಆದರೆ ಇದರ ಒಳ ಹೊಕ್ಕು ನೋಡಿದಾಗ ಅದರೊಳಗಿನ ಅಗಾಧವಾದ ವಿಷಯಗಳು ಬೆರಗನ್ನು ಮೂಡಿಸುತ್ತವೆ ಎಂದರು. ಇಂಜಿನಿಯರಿಂಗ್ ಪದವೀಧರರಿಗೆ ದೇಶ ಸೇವೆಯನ್ನು ಮಾಡುವುದಕ್ಕೆ ಇದರಲ್ಲಿ ವಿಪುಲವಾದ ಅವಕಾಶವಿದೆ. ಸಾಫ್ಟ್‍ವೇರ್ ಇಂಜಿನಿಯರುಗಳಿಗೆ ಸಿಗುವ ಸವಲತ್ತುಗಳಿಗಿಂತ ಮಿಗಿಲಾದ ಸವಲತ್ತುಗಳು ಮತ್ತು ಶಿಸ್ತಿನ ಜೀವನ ಇಲ್ಲಿ…

Read More

ಸೋಮವಾರಪೇಟೆ ಆ.28 NEWS DESK : ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ವತಿಯಿಂದ ಹಾನಗಲ್ಲು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಚೇರ್‌ಗಳು, ಸ್ಟೀಲ್ ತಟ್ಟೆ ಮತ್ತು ಲೋಟಗಳು, ಆಟದ ಚೆಂಡುಗಳು, ಕಲಿಕೆಯ ಲೇಖನಿ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು. ರೋಟರಿ ಸಂಸ್ಥೆಯ ಅಧ್ಯಕ್ಷ ಜೆ.ಕೆ.ಪೊನ್ನಪ್ಪ 10,000 ರೂ, ಬೆಲೆಯ 10 ಚೇರ್‌ಗಳು ಸೇರಿದಂತೆ ಇತರ ಸಾಮಾಗ್ರಿಗಳನ್ನು ಅಂಗನವಾಡಿ ಶಿಕ್ಷಕಿ ಶಾರದ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಹಾನಗಲ್ಲು ಗ್ರಾ.ಪಂ ಉಪಾಧ್ಯಕ್ಷೆ ರೇಣುಕಾ, ಸದಸ್ಯೆ ಉಷಾ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ, ಜೋನಲ್ ಲೆಫ್ಟಿನೆಂಟ್, ಎಂ.ಎಂ.ಪ್ರಕಾಶ್ ಕುಮಾರ್, ಸದಸ್ಯರಾದ ಎಸ್.ಬಿ.ಯಶವಂತ್, ಬಿ.ಎಂ.ದಿನೇಶ್, ಕೆ.ಪಿ.ಪ್ರವೀಣ್, ಸವಿತಾ ಪ್ರಕಾಶ್‍ಕುಮಾರ್ ಇದ್ದರು.

Read More