ಕುಶಾಲನಗರ ಫೆ.15 : ಪುಲ್ವಾಮದಲ್ಲಿ ಉಗ್ರರ ದಾಳಿಯಿಂದ ವೀರ ಮರಣ ಹೊಂದಿದ ಭಾರತೀಯ ವೀರಯೋಧರ ನೆನಪಿಗಾಗಿ ಕರ್ನಾಟಕ ಕಾವಲು ಪಡೆ ವತಿಯಿಂದ ಕುಶಾಲನಗರದಲ್ಲಿ 40 ಕ್ಕೂ ಹೆಚ್ಚು ಹಣ್ಣಿನ ಗಿ ಡಗಳನ್ನು ನೆಟ್ಟು ಶ್ರದ್ಧಾಂಜಲಿ ಅರ್ಪಿಸಲಾಯಿತು,
ಕುಶಾಲನಗರ ಫಾತಿಮಾ ಪ್ರೌಢಶಾಲೆ ಆವರಣದಲ್ಲಿ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ ಕೃಷ್ಣ ಮತ್ತು ಮುಖ್ಯ ಶಿಕ್ಷಕರಾದ ಜಫ್ರಿ ಡಿಸಿಲ್ವಾ ನೇತೃತ್ವದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಕಾವಲು ಪಡೆಯ ಗೌರವಾಧ್ಯಕ್ಷ ಅಂತೋನಿ, ಶಾಲಾ ಇಕೋ ಕ್ಲಬ್ ಸಂಚಾಲಕ ಕಮಲ್ನಾಥ್, ಸಹ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.









