ನಾಪೋಕ್ಲು ಏ.17 : ನಾಪೋಕ್ಲು ಸಮೀಪದ ಕಕ್ಕುಂದಕಾಡು ಪೌರಾಣಿಕ ಹಿನ್ನೆಲೆಯ ಶ್ರೀ ಕರಿಚಾಮುಂಡಿ ದೈವದ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದ ತಕ್ಕ ಮುಖ್ಯಸ್ಥ ಸೂರ್ಯಕುಮಾರ್ ಅವರ ಮನೆಯಿಂದ ಭಕ್ತಾಧಿಗಳೊಂದಿಗೆ ಕರಿಚಾಮುಂಡಿ ದೇವಸ್ಥಾನಕ್ಕೆ ದೈವದ ಆಯುಧ ಹಾಗೂ ವಸ್ತ್ರ ಆಭರಣಗಳಿರುವ ಭಂಡಾರವನ್ನು ತರಲಾಯಿತು. ನಂತರ ರಾತ್ರಿ ತೋತ, ಚನ್ನಾಲೆ ಮೂರ್ತಿ, ತಮ್ಮಚ್ಚ ಪೊಟ್ಟು ಗುಳಿಗ, ಕೊರತಿ,ಆಂಗಾರೆ ಉತ್ಸವ ನಡೆಯಿತು. ಗುಳಿಗ ಹಾಗೂ ಕರಿ ಚಾಮುಂಡಿ ಕೋಲ ಗಮನ ಸೆಳೆಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಹರಕೆ ಕಾಣಿಕೆ ಒಪ್ಪಿಸಿ ದೈವದ ಪ್ರಸಾದ ಪಡೆದುಕೊಂಡರು.(ದುಗ್ಗಳ ಸದಾನಂದ).









