ಮಡಿಕೇರಿ ಮೇ 19 : ಗೋಣಿಕೊಪ್ಪಲು, ಶ್ರೀಮಂಗಲ ಮತ್ತು ಬಾಳೆಲೆ ಶಾಖಾ ವ್ಯಾಪ್ತಿಯ 11 ಕೆವಿ ಫೀಡರ್ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಮೇ, 20 ಮತ್ತು 21 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಮೇ, 20 ರಂದು ಕಾನೂರು, ನಾಲ್ಕೇರಿ, ಕೆ.ಬಾಡಗ, ತೂಚಮಕೇರಿ, ಚಿಕ್ಕಮಂಡೂರು, ಬೇಗೂರು, ಹರಿಹರ ಹುದಿಕೇರಿ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹಾಗೆಯೇ ಮೇ, 21 ರಂದು ಕುಟ್ಟ, ಮಂಚಳ್ಳಿ, ನಾಗರಹೊಳೆ, ನಲ್ಲೂರು, ಸುಳುಗೋಡು, ಪೊನ್ನಪ್ಪಸಂತೆ, ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.









