ಮಡಿಕೇರಿ ಮೇ 23 : ಅರಂತೋಡು ಗ್ರಾ.ಪಂ ವತಿಯಿಂದ ಗ್ರಾಮೀಣ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸಲಾಯಿತು.
ಅರಂತೋಡು ಗ್ರಾ.ಪಂ ಅಮೃತ ಸಭಾಭವನದಲ್ಲಿ ನಡೆಸಲಾದ ಶಿಬಿರವನ್ನು ಗ್ರಾ.ಪಂ ಅಧ್ಯಕ್ಷೆ ಹರಿಣಿ ದೇರಾಜೆ ಉದ್ಘಾಟಿಸಿದರು.
ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷರಾದ ಶ್ವೇತ , ಪಂಚಾಯತ್ ಅಭಿವೃದ್ಧಿ ಆಧಿಕಾರಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸದಸ್ಯರಾದ ಕೇಶವ ಅಡ್ತಲೆ, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ನಿವೃತ್ತಿ ಶಿಕ್ಷಕಿ ಗಂಗಮ್ಮ ಜಾನಪದ ಕಥೆ, ಪದ್ಯ ಮುಂತಾದ ಚಟುವಟಿಕೆಗಳನ್ನು ಮಾಡಿಸಿದರು.
ಸುಮಾರು ಹದಿನೈದು ಶಿಬಿರಾರ್ಧಿಗಳು ಭಾಗವಹಿಸಿದರು.








