ಮಡಿಕೇರಿ ಜು.12 : ಇನ್ನು ಎರಡು ವಷ೯ಗಳಲ್ಲಿ ಚೀನಾವನ್ನೂ ಮೀರಿಸಿ ಭಾರತದೇಶವು ಜಗತ್ತಿನಲ್ಲಿಯೇ ಅತ್ಯಧಿಕ ಜನಸಂಖ್ಯೆ ಇರುವ ದೇಶವಾಗಲಿದ್ದು, ಕೆಲವೊಂದು ಪ್ರತಿಕೂಲ ಪರಿಣಾಮಗಳನ್ನು ಎದುರಿಸುವ ಸವಾಲು ಎದುರಾಗಲಿದೆ ಎಂದು ಮಡಿಕೇರಿಯ ಸಕಾ೯ರಿ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿ ಡಾ.ಎನ್.ಎಸ್. ನವೀನ್ ಕಳವಳ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಜನಸಂಖ್ಯಾ ದಿನಾಚರಣೆಯ ಸಂದಭ೯ ಈವರೆಗೆ 15 ಸಾವಿರದಷ್ಟು ಉದರದಶ೯ಕ ಕುಟುಂಬ ಕಲ್ಯಾಣ ಮತ್ತು ವಾಸೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿದ ಕೀತಿ೯ಗೆ ಡಾ.ಎನ್.ಎಸ್. ನವೀನ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದಭ೯ ಮಾತನಾಡಿದ ಡಾ.ನವೀನ್, ಭಾರತ ದೇಶವು ವಷ೯ದಿಂದ ವಷ೯ಕ್ಕೆ ಜನಸಂಖ್ಯಾ ಸ್ಪೋಟವನ್ನು ಕಾಣುತ್ತಿದೆ. ಇದರಿಂದ ಆಹಾರ, ಉದ್ಯೋಗ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಬಡತನ ನಿಮೂ೯ಲನೆಯ ಉದ್ದೇಶ ಕೂಡ ಜನಸಂಖ್ಯಾ ನಿಯಂತ್ರಣದಲ್ಲಿದೆ ಎಂದರು. ಲಿಂಗಸಮಾನತೆಯ ಶಕ್ತಿಯ ಮಾಹಿತಿ ನೀಡುವುದೇ ಈ ವಷ೯ದ ಘೋಷ ವಾಕ್ಯವಾಗಿದೆ. ಜಗತ್ತಿನಲ್ಲಿ ಪ್ರಸ್ತುತ 800 ಕೋಟಿ ಜನರಿದ್ದು ಈ ಪೈಕಿ 140 ಕೋಟಿ, ಜನ ಭಾರತದಲ್ಲಿದ್ದರೆ, 142 ಕೋಟಿ ಜನರು ಚೀನಾ ದೇಶದಲ್ಲಿದ್ದಾರೆ.. ಇನ್ನೆರಡು ವಷ೯ಗಳಲ್ಲಿ ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಭಾರತ ಮೊದಲ ಸ್ಥಾನ ತಲುಪುವ ಸಾಧ್ಯತೆಯಿದೆ. ಅರಣ್ಯಗಳ ನಾಶ ಕೂಡ ಜನಸಂಖ್ಯಾ ಸ್ಪೋಟದ ಪರಿಣಾಮಗಳಲ್ಲೊಂದಾಗಿದೆ. ಇದರಿಂದಾಗಿ ಪ್ರವಾಹ, ಭೂಕುಸಿತದಂಥ ಪ್ರಾಕೖತ್ತಿಕ ವಿಕೋಪಗಳು ಸಂಭವಿಸುತ್ತಿದೆ. ಜನಸಂಖ್ಯೆಯ ಹೆಚ್ಚಳ ಆಥಿ೯ಕ ಅಸಮತೋಲನಕ್ಕೆ ಕೂಡ ಕಾರಣವಾಗಿದ್ದು, ಜತೆಗೆ ಬಡತನ ಹೆಚ್ಚಳಕ್ಕೂ ಕಾರಣವಾಗಿದೆ ಎಂದೂ ಡಾ.ನವೀನ್ ಕಳವಳ ವ್ಯಕ್ತಪಡಿಸಿದರು.
ಜನಸಂಖ್ಯೆಯ ಹೆಚ್ಚಳದಿಂದಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ತಿಳಿಸಲು 1989 ರಿಂದ ಪ್ರತೀ ವಷ೯ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದ್ದು, ಸಣ್ಣ ಕುಟುಂಬಗಳಿಗೆ ಇರುವ ಮಹತ್ವವನ್ನೂ ತಿಳಿಸುವ ನಿಟ್ಟಿನಲ್ಲಿ ಈ ದಿನಾಚರಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಡಾ.ಎನ್.ಎಸ್. ನವೀನ್ ಮಾಹಿತಿ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, ವೈದ್ಯ ನವೀನ್ ಅವರು ಕಳೆದ 10 ವಷ೯ಗಳಿಂದ ಉದರದಶ೯ಕ ಕುಟುಂಬ ಕಲ್ಯಾಣ ಮತ್ತು ವಾಸೆಕ್ಟಮಿ ಸಂಬಂಧಿಸಿದ 15 ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆ ಕೈಗೊಂಡು ದಾಖಲೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ರತ್ನಾಕರ್ ರೈ, ಸಹಾಯಕ ಗವನ೯ರ್ ದೇವಣಿರ ತಿಲಕ್. ಡಾ.ರಾಜೇಶ್ವರಿ ನವೀನ್ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಅನಂತಶಯನ, ನಿಕಟಪೂವ೯ ಅಧ್ಯಕ್ಷ ಪ್ರಸಾದ್ ಗೌಡ, ಮಾಜಿ ಸಹಾಯಕ ಗವನ೯ರ್ ಗಳಾದ ಡಾ.ಪ್ರಶಾಂತ್, ಬಿ.ಕೆ.ರವೀಂದ್ರರೈ, ಅನಿಲ್ ಎಚ್.ಟಿ. ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಶ್ರೀಹರಿ, ಎ.ಕೆ.ವಿನೋದ್, ಹಾಜರಿದ್ದರು.








