ಮಡಿಕೇರಿ ಸೆ.18 : ಕೊಡವ ರೈಡರ್ಸ್ ಕ್ಲಬ್, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಹಾಗೂ ಬೆಂಗಳೂರಿನ ಇಂಚರ ಇನ್ಫೋಟೆಕ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹುದಿಕೇರಿ ಭದ್ರಕಾಳಿ ದೇವಸ್ಥಾನದ ಕಾಪುಕಾಡಿನಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ವಿವಿಧ ಬಗೆಯ ಕಾಡು ಹಣ್ಣುಗಳು ಸೇರಿದಂತೆ ಹತ್ತಾರು ಜಾತಿಯ ಕಾಡು ಮರದ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ ಹಾಗೂ ತಂಡ ಸೇರಿದಂತೆ, ಬೆಂಗಳೂರಿನ ಇಂಚರ ಇನ್ಫೋಟೆಕ್ ಸಂಸ್ಥೆಯ ಕೇಟೊಳೀರ ವಿನ್ಸಿ ದೇವಯ್ಯ ತಂಡ ಹಾಗೂ ಅರಣ್ಯ ಮಹಾವಿದ್ಯಾಲಯದ ಕೊಣೇರೀರ ನಾಣಯ್ಯ ಸೇರಿದಂತೆ ಪ್ರಮುಖರಾದ ಕೇಟೊಳೀರ ಶಮ್ಮಿ, ತೀತಿರ ಅಭಿಷೇಕ್ ಮುತ್ತಣ್ಣ, ಚಕ್ಕೇರ ಅನುಪಮಾ ತಮ್ಮಯ್ಯ, ಕುಪ್ಪಣಮಾಡ ದಿಲೀಪ್, ಅಜ್ಜಿಕುಟ್ಟಿರ ದೇವಯ್ಯ ಮತ್ತಿತರರು ಪಾಲ್ಗೊಂಡಿದ್ದರು.








