ಮಡಿಕೇರಿ ಸೆ.30 : ಬೆಂಗಳೂರು ಕೊಡವ ಸಮಾಜದ ಕೈಲ್ಪೊವ್ದ್ ಒತ್ತೊರ್ಮೆ ಕೂಟದಲ್ಲಿ ಕೊಡವ ಪತ್ರಿಕೋದ್ಯಮದ ಮೂಲಕ ಭಾಷೆ-ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಸೇವೆ ಸಲ್ಲಿಸುತ್ತ ಬರುತ್ತಿರುವ ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೈಲ್ ಪೊವ್ದ್ ಒತ್ತೊರ್ಮೆ ಕೂಟಕ್ಕೆ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಚೆಪ್ಪುಡಿರ ಎಂ. ಪೂಣಚ್ಚ, ರಾಜ್ಯ ಸಾರ್ವಜನಿಕ ಅಭಿಯೋಜಕ ಬಲ್ಲಚಂಡ ಎ.ಬೆಳ್ಯಪ್ಪ ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಕರವಟ್ಟಿರ ಟಿ.ಪೆಮ್ಮಯ್ಯ ಅವರುಗಳು ನಾಚಯ್ಯ ರಿಗೆ ಶಾಲುಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಈ ಸಂದರ್ಭ ಸಮಾಜದ ಉಪಾದ್ಯಕ್ಷೆ ಪಾಂಡಂಡ ಕಮಲ, ಗೌ.ಕಾರ್ಯದರ್ಶಿ ಲೆ.ಕ. ಚಿರಿಯಪಂಡ ವಿವೇಕ್ ಮುತ್ತಣ್ಣ (ರಿ), ಖಜಾಂಚಿ ಬಲ್ಯಮೀದೇರಿರ ಗಣೇಶ್, ಜಂಟಿ ಕಾರ್ಯದರ್ಶಿ ಬೊಪ್ಪಂಡ ಮಹೇಶ್ ತಮ್ಮಯ್ಯ, ಜಂಟಿ ಖಜಾಂಚಿ ಪೊನ್ನಚೆಟ್ಟಿರ ರಮೇಶ್ ಗಣಪತಿ ಹಾಗೂ ಮೂರು ಸಾವಿರಕ್ಕೂ ಅಧಿಕ ಕೊಡವ ಬಾಂಧವರು ಹಾಜರಿದ್ದರು.










