ನಾಪೋಕ್ಲು ಅ.26 : ಪಾಲೆಮಾಡು ಅಂಬೇಡ್ಕರ್ ಯುವಕ ಸಂಘ ಹಾಗೂ ಕಿಂಗ್ಸ್ ಇಲೆವೆನ್ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ವರ್ಷದ ಹೊದ್ದೂರು ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ರದರ್ಸ್ ಕೂಟಮ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಬಾಲ್ ಬ್ಲಾಸ್ಟರ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.
ಬಲಮುರಿ ಗ್ರಾಮದ ಬೊಳ್ಳಚೆಟ್ಟೀರ ಕುಟುಂಬದ ಆಟದ ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಹೊದ್ದೂರು ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿಆರು ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯದಲ್ಲಿ ಬಾಲ್ ಬ್ಲಾಸ್ಟರ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 5 ಓವರ್ ಪಂದ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 25 ರನ್ ಕಲೆ ಹಾಕಿತು. ಬ್ರದರ್ಸ್ ಕೂಟಮ್ ತಂಡ 3.3 ಓವರ್ ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 26 ರನ್ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಬಾಲ್ ಬ್ಲಾಸ್ಟರ್ ತಂಡ ದ್ವಿತೀಯ ಸ್ಥಾನ ಪಡೆದು ಕೊಂಡಿತು.
ಟೂರ್ನಿಯ ಉದ್ಘಾಟನೆಯನ್ನು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಧನಂಜಯ ಹಾಗೂ ಟ್ರೋಫಿ ದಾನಿ ಸಿ.ಕೆ ಆಶ್ರಫ್ ನೆರವೇರಿಸಿದರು.
ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಧನಂಜಯ ವಹಿಸಿದ್ದರು. ಕ್ರೀಡಾಕೂಟದಲ್ಲಿ ತನು, ಕೌಶಿಕ್, ರಫೀಕ್, ಕುಲದೀಪ್, ಅಯ್ಯಪ್ಪ, ಹರೀಶ್ ಪಾಲ್ಗೊಂಡಿದ್ದರು.
ಟ್ರೋಫಿಯನ್ನು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ನೀಡಿದರೆ, ಬಲಮುರಿಯ ಗುತ್ತಿಗೆದಾರ ಜೀವಿತ್ ಕ್ರೀಡಾಕೂಟದ ಊಟದ ವ್ಯವಸ್ಥೆ ಕಲ್ಪಿಸಿದ್ದರು.
ಸರಣಿ ಶ್ರೇಷ್ಠ ಪ್ರಶಸ್ತಿ: ಬ್ರದರ್ಸ್ ಕೂಟಮ್ ತಂಡದ ಶಕೀರ್
ಉತ್ತಮ ಬ್ಯಾಟ್ಸ್ ಮನ್ : ಬ್ರದರ್ಸ್ ಕೂಟಮ್ ತಂಡದ ಸುದೀಪ್
ಅಂತಿಮ ಪಂದ್ಯದ ಪಂದ್ಯ ಶ್ರೇಷ್ಠ : ಬ್ರದರ್ಸ್ ಕೂಟಮ್ ತಂಡದ ಶಕೀರ್
ಉತ್ತಮ ಬ್ಯಾಟ್ಸ್ ಮನ್ : ಬಾಲ್ ಬ್ಲಾಸ್ಟರ್ ತಂಡದ ವಿನೋದ್.
ವರದಿ : ದುಗ್ಗಳ ಸದಾನಂದ









