ಸಿದ್ದಾಪುರ ಡಿ.21 : ಹಲವಡೆ ಬೆಳೆಯುವ ಸಾಧಾರಣ ನಿಂಬೆ ಹಣ್ಣುಗಳ ಸಣ್ಣ ಗಾತ್ರ ಕಂಡಿದ್ದೇವೆ
ಆದರೆ ಪಾಲಿಬೆಟ್ಟದ ಕಾಫಿ ತೋಟ ಒಂದರಲ್ಲಿ ಬೆಳೆದ ಗಿಡದಲ್ಲಿ ಬರೋಬರಿ 5 ಕೆಜಿ ಗಾತ್ರದ ಗಜ ನಿಂಬೆಹಣ್ಣು ಕಂಡು ಕಾರ್ಮಿಕ ಸ್ಥಳೀಯ ರೈತರು ಬೆರಗಾಗಿದ್ದಾರೆ.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಮೂಕೊಂಡ ವಿಜು ಸುಬ್ರಮಣಿ
ಅವರ ಕಾಫಿ ತೋಟದಲ್ಲಿ ನಿಂಬೆಹಣ್ಣು ಕಂಡುಬಂದಿದ್ದು, ಅಚ್ಚರಿ ಎಂಬಂತೆ ಅಂದಾಜು 6 ಅಡಿ ಎತ್ತರದ ಗಿಡಗಳಲ್ಲಿ
ಸಣ್ಣ ಗಾತ್ರದಿಂದ ಬರೋಬರಿ 5 ಕೆ.ಜಿ ತೂಕದ ನಿಂಬೆ ಹಣ್ಣುಗಳು ಕಂಡು ಬಂದು ಅಚ್ಚರಿ ಮೂಡಿಸಿದೆ.
ನಾಲ್ಕು ವರ್ಷಗಳ ಹಿಂದೆ ವಿಜು ಸುಬ್ರಮಣಿ ಅವರು ಮೈಸೂರು ಮಾರುಕಟ್ಟೆಯಲ್ಲಿ ಸಿಟ್ರಸ್ ಹಣ್ಣು ಖರೀದಿ ಮಾಡಿ ತಂದಿದ್ದರು. ಉಪಯೋಗಕ್ಕೆ ಬಾರದ ಒಂದು ಹಣ್ಣನ್ನು ಮನೆಯ ಹಿಂಬದಿಯ ತೋಟದಲ್ಲಿ ಹೆಸದಿದ್ದರೂ ಕೆಲ ದಿನಗಳ ನಂತರ ಸಣ್ಣ ಎರಡು ಗಿಡಗಳು ಬೆಳೆದು ಬಂದವು.
ನಂತರ ಗಿಡವನ್ನು ಕಿತ್ತು ತೋಟದ ಬದಿಯಲ್ಲಿ ಆರ್ಗನಿಕ್ ಗೊಬ್ಬರವನ್ನು ಬಳಸಿ ಗುಂಡಿ ತೋಡಿ ನೀಡಲಾಗಿತ್ತು.
ಅಂದಾಜು ಮೂರು ವರ್ಷಗಳ ಕಾಲ ಗಿಡ ಮಾತ್ರ ಬೆಳೆಯಲಾರಂಭಿಸುತ್ತಾದರೂ
ಗಿಡದಲ್ಲಿ ಹೂವು ಕಾಯಿಗಳು ಯಾವುದು ಕಂಡು ಬರಲಿಲ್ಲ. ಇದು ಯಾವ ಗಿಡ ಎಂದು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ನಾಲ್ಕು ವರ್ಷಗಳ ನಂತರ ಇತ್ತೀಚಿಗೆ ಗಿಡದಲ್ಲಿ ಮಲ್ಲಿಗೆ ಹೂವಿನ ಆಕಾರದ ದೊಡ್ಡ ಹೂವುಗಳೊಂದಿಗೆ ಸಣ್ಣ ಕಾಯಿಗಳು ಕಾಣಿಸಿಕೊಂಡವು.
ಕೆಲ ತಿಂಗಳ ನಂತರ ಕಾಯಿಗಳು ದೊಡ್ಡದಾಗುತ್ತಾ
ಬಾರಿ ಗಾತ್ರದಲ್ಲಿ ಹಣ್ಣುಗಳಾಗಿ ಕಾಣಿಸಿಕೊಂಡವು
ವಿಜು ಸುಬ್ರಮಣಿ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಂತರ ಗಜ ನಿಂಬೆಹಣ್ಣು
ಎಂದು ಹೇಳಲಾಗುತ್ತಿದ್ದು, ಇಟಲಿ, ಯೂರೋಪ್, ದೇಶಗಳಲ್ಲಿ ಅಪರೂಪದಲ್ಲಿ ಕಂಡು ಬಂದಿದೆ.
ಗಜನಿಂಬೆಯ ಬಗೆಗಳಲ್ಲಿ ಇದು ಬಹು ಮುಖ್ಯವಾದದ್ದು, ಸಾಮಾನ್ಯವಾಗಿ ಎಲ್ಲ ತರಹದ ವಾತಾವರಣಕ್ಕೂ ಹೊಂದಿಕೊಂಡು ಬೆಳೆಯುತ್ತದೆ. ಇದರ ಹಣ್ಣು ಅಂಡಾಕಾರದ್ದು. ಸಣ್ಣ ಬೀಜಗಳನ್ನು ಹೊಂದಿದೆ.
ಹಣ್ಣುಗಳಲ್ಲಿ ಮಂದವಾದ ಸಿಪ್ಪೆ ಮತ್ತು ರಸಭರಿತ ತಿರುಳು ಇರುವುದರಿಂದ ಉಪ್ಪಿನಕಾಯಿ ಮತ್ತು ತಂಪಾದ ಪಾನೀಯಗಳ ತಯಾರಿಕೆಯೊಂದಿಗೆ ಹಲವು ಆರೋಗ್ಯಕರ ಉಪಯೋಗ ಔಷಧಿ ಗುಣಗಳಿಗೆ ಬಳಕೆಯಾಗುತ್ತಿದೆ ಎನ್ನಲಾಗಿದೆ.ಕೃಷಿ ಹಾಗೂ ಪರಿಸರ ಕಾಳಜಿಯೊಂದಿಗೆ ವಿಜು ಸುಬ್ರಮಣಿ ಎಂಬವರು ತಮ್ಮ ಕಾಫಿ ತೋಟದಲ್ಲಿ ಹಲವು ತಳಿಯ
ಹಣ್ಣು ಹಂಪಲು ಗಿಡಗಳನ್ನು ಬೆಳೆದಿದ್ದಾರೆ.
ಅವಶ್ಯಕತೆ ಇರುವದನ್ನ ಮಾತ್ರ ಕೊಯ್ದು ಬಾಕಿ ಹಣ್ಣುಗಳನ್ನು ಪಕ್ಷಿಗಳಿಗೆ ಆಹಾರವಾಗಲು ಬಿಡುತ್ತಾರೆ.
ಪರಿಸರ ಕಾಳಜಿ ಸಮಾಜ ಸೇವೆಗಾಗಿ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಾಧಕರ ಸನ್ಮಾನ ಗೌರವ ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ.
ತಮ್ಮ ಕಾಫಿ ತೋಟದಲ್ಲಿ ಬೆಳೆದ ಗಜನಿಂಬೆ ಫಸಲನ್ನ ಸ್ಥಳೀಯ ದೇವಸ್ಥಾನಗಳಿಗೆ
ನೀಡಿದ್ದಾರೆ.









