ಮಡಿಕೇರಿ ಡಿ.25 : ಕ್ರಿಸ್ಮಸ್ ಮುನ್ನ ದಿನ ಭಾನುವಾರ ರಾತ್ರಿ ಸೋಮವಾರಪೇಟೆ ಜಯವೀರಮಾತೆ ಚರ್ಚ್ ನಲ್ಲಿ ಬಾಲಯೇಸುವಿನ ಮೂರ್ತಿಯನ್ನು ಗೋದಾಲಿಯಲ್ಲಿ ಮಲಗಿಸಿ ನಮನ ಸಲ್ಲಿಸಲಾಯಿತು.

ನಂತರ ಗಾಯನ ಆಡಂಬರ ಬಲಿಪೂಜೆ ನಡೆಯಿತು. ಕ್ರೈಸ್ತರೆಲ್ಲರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಧರ್ಮಗುರುಗಳಾದ ಎಂ.ರಾಯಪ್ಪ, ಜಾನ್ ಫರ್ನಾಂಡೋ, ಹಾಗೂ ಚರ್ಚ್ನ ಪಾಲನ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.










