
ಸುಂಟಿಕೊಪ್ಪ ಜೂ.22 NEWS DESK : ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜು ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳು ವಿವಿಧ ಯೋಗಾಸನ ಮಾಡಿ ಗಮನ ಸೆಳೆದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಶ್ರೀಲತಾ ಯೋಗಭ್ಯಾಸದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ವಿದ್ಯಾರ್ಥಿಗಳು ದೈಹಿಕ, ಮಾನಸಿಕವಾಗಿ ಸದೃಢರಾಗಿ ಹಾಗೂ ಏಕಾಗ್ರತೆಯನ್ನು ಸಾಧಿಸಲು ಪ್ರತಿದಿನ ಯೋಗಭ್ಯಾಸ ಮಾಡುವುದು ಒಳಿತು ಎಂದರು.
ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯೋಗಭ್ಯಾಸವು ಇಂದಿನ ದಿನಮಾನಗಳಲ್ಲಿ ಅಗತ್ಯವಾಗಿದೆ ಎಂದು ನುಡಿದರು.
ಮಾರ್ಗದರ್ಶಕರಾದ ಅಭಿಷೇಕ್ ಮಾತನಾಡಿ ದೇಹ ಮನಸ್ಸನ್ನು ಸಂಯೋಜಿಸುವ ಶೇಷ್ಠ ವಿದ್ಯೆಯೇ ಯೋಗಭ್ಯಾಸ ಎಂದು ನುಡಿದ ಅವರು ಪತಂಜಲಿ ಮಹರ್ಷಿಯ ಕೊಡುಗೆಯನ್ನು ಧನ್ಯತಾ ಭಾವದಿಂದ ಸ್ಮರಿಸಿದರು.
ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ತುತ್ತಾಗಿ ಯೋಗಭ್ಯಾಸದ ದಿನಾಚರಣೆಯನ್ನು ಅಳವಡಿಸಿಕೊಳ್ಳಬೇಕಾಗಿರುವುದರ ಮಹತ್ವ ತಿಳಿಸಿದರು.
ನಂತರ ವಿದ್ಯಾರ್ಥಿಗಳಿಗೆ ವೃಕ್ಷಾಸನ, ತಾಡಾಸನ, ವಜ್ರಾಸನ, ಕಪಾಲಭಾತಿ, ಸೂರ್ಯನಮಸ್ಕಾರ ಇತ್ಯಾದಿ ಕೆಲವು ಸರಳ ಆಸನಗಳನ್ನು ಮಾಡಿ ತೋರಿಸಿ, ವಿದ್ಯಾರ್ಥಿಗಳು ಅನುಸರಿಸುವಂತೆ ಹೇಳಿದರು. 







