
ಮಡಿಕೇರಿ NEWS DESK ಅ.1 : ವಿಜಯ ದಶಮಿಯ ದಿನವಾದ ಅಕ್ಟೋಬರ್ 2 ರಂದು ಮಡಿಕೇರಿಯಲ್ಲಿ ದಶಮಂಟಪಗಳ ಶೋಭಾಯಾತ್ರೆಯನ್ನು ಮತ್ತು ಗಾಂಧಿ ಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಜಿಲ್ಲೆಯ, ಹೊರ ಜಿಲ್ಲೆಯ, ರಾಜ್ಯದ, ಹೊರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ. ಅ.3 ರಂದು ದಶ ಮಂಟಪಗಳ ಪ್ರದರ್ಶನ ಮುಗಿದ ನಂತರ ಐಜಿ ವೃತ್ತ, ಮಹದೇವಪೇಟೆಗಾಗಿ ಬನ್ನಿ ಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವಸ್ಥಾನಗಳಿಗೆ ತೆರಳಲು ರಾತ್ರಿ 8 ಗಂಟೆ ಆಗಲಿದೆ. ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಸೇರುವುದಲ್ಲದೇ, ವಾಹನ ಸಂಚಾರವು ಹೆಚ್ಚು ಇರಲಿರುವುದರಿಂದ ಅಕ್ಟೋಬರ್ 3 ರಂದು ಮಡಿಕೇರಿ ನಗರದ ಸಂತೆ ರದ್ದುಗೊಳಿಸಲಾಗಿದೆ ಎಂದು ನಗರಸಭೆಯ ಪೌರಾಯುಕ್ತ ಎಚ್.ಆರ್.ರಮೇಶ್ ಅವರು ತಿಳಿಸಿದ್ದಾರೆ.








