
ಮಡಿಕೇರಿ ಅ.17 NEWS DESK : ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಇಂದು (ಅ.17) ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವವಾಯಿತು. ಭಕ್ತರ ಜಯಘೋಷ, ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕುಂಡಿಕೆಯಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡಳು. ಪ್ರಧಾನ ಅರ್ಚಕರಾದ ಗುರುರಾಜ್ ಆಚಾರ್ ತಂಡ ಪೂಜಾ ವಿಧಿವಿಧಾನವನ್ನು ನಡೆಸಿದರು. ಸಂಸದ ಯದುವೀರ್ ಒಡೆಯರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ, ಶಾಸಕರಾದ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ.ಚಂದ್ರಶೇಖರ್, ತಕ್ಕ ಮುಖ್ಯಸ್ಥರಾದ ಕೋಡಿ.ಯು.ಮೋಟಯ್ಯ ಮಠಾಧೀಶರು ಮತ್ತಿತರ ಗಣ್ಯರು ತೀರ್ಥೋದ್ಭವದ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು. ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಭಾಗಮಂಡಲ ಕ್ಷೇತ್ರಕ್ಕೆ ಆಗಮಿಸಿ ಶ್ರೀಭಗಂಡೇಶ್ವರನಿಗೆ ಪೂಜೆ ಸಲ್ಲಿಸಿದರು. ನಂತರ ಕಾಲ್ನಡಿಗೆಯ ಮೂಲಕ ಕಾವೇರಿ ಮಾತೆಯ ಸ್ಮರಣೆಯೊಂದಿಗೆ ತಲಕಾವೇರಿಗೆ ತೆರಳಿದರು. :: ಬ್ರಿಟಿಷ್ ಏರ್ ವೇಸ್ ನಿಂದ ಕಾವೇರಿ ಸಂಕ್ರಮಣದ ಶುಭಾಷಯಗಳು :: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಮುಂಜಾನೆ 5.30 ಗಂಟೆಗೆ ಬಂದಿಳಿದ ಬ್ರಿಟಿಷ್ ಏರ್ ವೇಸ್ ವಿಮಾನ ಪ್ರಯಾಣಿಕರಿಗೆ ಆಶ್ಚಯ೯ ಕಾದಿತ್ತು, ಬೆಂಗಳೂರಿನಲ್ಲಿ ಇನ್ನೇನು ವಿಮಾನ ಇಳಿಯಬೇಕೆಂಬಷ್ಟರಲ್ಲಿ ವಿಮಾನದ ಪೈಲಟ್, ಬ್ರಿಟಿಷ್ ಏರ್ ವೇಸ್ ಪರವಾಗಿ ಎಲ್ಲಾ ಯಾತ್ರಿಗಳಿಗೆ ಕನಾ೯ಟಕದ ಜೀವನದಿಯ ತೀಥೋ೯ದ್ವವ ಮತ್ತು ಕಾವೇರಿ ಸಂಕ್ರಮಣದ ಶುಭಾಷಯ ತಿಳಿಸಿದರು. ಕೊಡಗಿನ ಮೂಲದ ಪಡಿಯಂಡ ದೀಪಕ್ ಈ ವಿಮಾನದ ಪೈಲಟ್ ಆಗಿದ್ದು, ತನ್ನ ಜಿಲ್ಲೆಯಲ್ಲಿ ಅಂದು ಮಧ್ಯಾಹ್ನ ಸಂಭವಿಸುತ್ತಿದ್ದ ಕಾವೇರಿ ಪವಿತ್ರ ತೀಥೋ೯ದ್ವವದ ಬಗ್ಗೆ ಯಾತ್ರಿಕರಿಗೆ ಮಾಹಿತಿ ನೀಡಿ ಅವರು ಸಂಭ್ರಮ ವಿನಿಮಯ ಮಾಡಿಕೊಂಡರು. :: ಕಾಲ್ನಡಿಗೆಯಲ್ಲಿ ಬಂದ ಹಷಿ೯ಕಾ – ಭುವನ್ :: ಕಾವೇರಿ ತೀಥೋ೯ದ್ವವದ ಸಂದಭ೯ ಕಲಾವಿದ ದಂಪತಿ ಹಷಿ೯ಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ತಮ್ಮ 1 ವಷ೯ದ ಮಗು ತ್ರಿದೇವಿ ಪೊನ್ನಕ್ಕಳೊಂದಿಗೆ ಭಾಗಮಂಡಲದಿಂದ ತಲಕಾವೇರಿಗೆ 8 ಕಿ.ಮೀ. ದೂರ ಕಾಲ್ನಡಿಗೆಯಲ್ಲಿಯೇ ಬಂದರು. ತಮಗೆ ಆರೋಗ್ಯವಂತ ಮಗುವಾದರೆ ಕಾಲ್ನಡಿಗೆಯಲ್ಲಿ ಕಾವೇರಿ ಕ್ಷೇತ್ರಕ್ಕೆ ಬರುವುದಾಗಿ ಹರಕೆ ಹೊತ್ತುಕೊಂಡಿದ್ದೆವು. ಅಂತೆಯೇ ಹರಕೆ ತೀರಿಸಲು ಕಾವೇರಿ ತೀಥೋ೯ದ್ವವದಂದು ಕಾಲ್ನಡಿಗೆಯಲ್ಲಿಯೇ ತ್ರಿದೇವಿಯೊಂದಿಗೆ ಬಂದೆವು ಎಂದು ಹಷಿ೯ಕಾ ಹೇಳಿದರು. ಭುವನ್ ಇದೀಗ ಯೋಗರಾಜ ಭಟ್ ಅವರ ನಿದೇ೯ಶನದ ಹೊಸ ಚಿತ್ರದಲ್ಲಿ ನಾಯಕನಾಗಿದ್ದು ಹಷಿ೯ಕಾ ಕೂಡ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಪುತ್ರಿ ಜನಿಸಿದ ಬಳಿಕ ಈ ದಂಪತಿಯ ವೖತ್ತಿ ಜೀವನದಲ್ಲಿ ಹೊಸ ಆಶಾಕಿರಣ ಮೂಡಿದೆ. ಹೀಗಾಗಿಯೇ ದಂಪತಿ ಕುಲದೈವವಾಗಿರುವ ಕಾವೇರಮ್ಮನ ಸನ್ನಿಧಿಗೆ ಬಂದು ತೀಥ೯ ಸ್ವೀಕರಿಸಿ ಹರಕೆ ತೀರಿಸಿದರು. :: ರಾಯಲ್ ಲುಕ್ ನಲ್ಲಿ ಮಿಂಚಿದ ಯದುವೀರ್ :: ಸಂಸದ ಯದುವೀರ್ ಮೈಸೂರು ರಾಜವಂಶಸ್ಥರ ಉಡುಗೆಯಲ್ಲಿ ಕಾವೇರಿ ತೀಥೋ೯ದ್ವವ ಸಂದಭ೯ ಕಂಗೊಳಿಸಿದ್ದು ವಿಶೇಷವಾಗಿತ್ತು. ತಲೆಗೆ ಮೈಸೂರು ಪೇಟ ಧರಿಸಿದ್ದ ಯದುವೀರ್ ಕೊಡವರೊಂದಿಗೆ ಭಾಗಮಂಡಲದಿಂದ 8 ಕಿ.ಮೀ. ದೂರದ ತಲಕಾವೇರಿಗೆ ಬರೀಕಾಲಿನಲ್ಲಿಯೇ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ಸಂಸದರ ಜತೆ ಕಾಲ್ನಡಿಗೆಯಲ್ಲಿಯೇ ಹೆಜ್ಜೆ ಹಾಕಿದರು.


















