ಮಡಿಕೇರಿ ಅ.18 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಲಂಬೇರಿ ಪ್ರಸಿದ್ಧ ಅಗಸ್ತೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಐತಿಹಾಸಿಕ ಮಹತ್ವವುಳ್ಳ ಹಾಗೂ ಕಾವೇರಿ ತಾಯಿಗೆ ಸಂಬಂಧಿಸಿದ ಅತ್ಯಂತ ಪಾವಿತ್ರ್ಯತೆಯ ಈ ಕ್ಷೇತ್ರಕ್ಕೆ, ತುಲಾ ಸಂಕ್ರಮಣದ ಮರುದಿನ ಶಾಸಕರು ಆಗಮಿಸಿ ಪೂಜೆ ಸಲ್ಲಿಸಿದರು. ಕ್ಷೇತ್ರಕ್ಕೆ ಆಗಮಿಸಿ ಕಾವೇರಿ ನದಿಗೆ ತೆರಳಿ, ಪುಣ್ಯ ತೀರ್ಥ ಸೇವಿಸಿದ ಬಳಿಕ ನದೀ ಸ್ವರೂಪಿಣಿ ಕಾವೇರಿ ತಾಯಿಗೆ ಆರತಿ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಗಸ್ಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಯೇ ಅನ್ನಪ್ರಸಾದವನ್ನು ಸ್ವೀಕರಿಸಿದರು. ಅಗಸ್ಟೇಶ್ವರ ಸನ್ನಿಧಿಗೆ ಆಗಮಿಸುವ ಸಂದರ್ಭ ಮುನೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೊಳ್ಳಚೆಟ್ಟೀರ ಸುರೇಶ್, ಬೋಳಂಡ ಶೇರಿ, ಕೌಶಿಕ್, ತಕ್ಕ ಮುಖ್ಯಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.











