ಮಡಿಕೇರಿ ನ.10 NEWS DESK : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 15 ನಿರ್ದೇಶಕ ಸ್ಥಾನಕ್ಕೆ ನಗರದ ಪತ್ರಿಕಾ ಭವನದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಬಾಚರಣಿಯಂಡ ಅನು ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಜೆ. ರಾಕೇಶ್, ರಾಜ್ಯ ಸಮಿತಿ ಸದಸ್ಯರಾಗಿ ಬಿ.ಆರ್. ಸವಿತಾ ರೈ, ಉಪಾಧ್ಯಕ್ಷರಾಗಿ ವನಿತಾ ಚಂದ್ರಮೋಹನ್, ಎ.ಎನ್. ವಾಸು, ನವೀನ್ ಸುವರ್ಣ, ಕಾರ್ಯದರ್ಶಿಯಾಗಿ ರಿಜ್ವಾನ್ ಹುಸೈನ್, ಮಲ್ಲಿಕಾರ್ಜುನ್, ಚೆರಿಯಮನೆ ಸುರೇಶ್ ಅವಿರೋಧವಾಗಿ ಆಯ್ಕೆಗೊಂಡಿದ್ದರು. ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ.ಆರ್. ಪ್ರಜ್ವಲ್, ಆನಂದ್ ಕೊಡಗು, ಸುನಿಲ್ ಪೊನ್ನೆಟ್ಟಿ, ಪ್ರಭುದೇವ್, ಜಗದೀಶ್ ಜೋಡುಬೀಟಿ, ವಿಷ್ಮಾ ಪೆಮ್ಮಯ್ಯ, ರಂಗಸ್ವಾಮಿ, ಎಂ.ಎಂ. ಅಬ್ದುಲ್ಲಾ, ಜೈರುಸ್ ಥೋಮಸ್ ಅಲೆಗ್ಸಾಂಡರ್, ಎಂ.ಕೆ. ರವಿಕುಮಾರ್, ಬಿ.ವೈ. ಚಿತನ್ ಕುಮಾರ್, ಸಂತೋಷ್ ರೈ, ಆರ್. ಸುಬ್ರಮಣಿ, ಗೋಪಾಲ್ ಸೋಮಯ್ಯ, ಕೆ.ಎಂ. ಇಸ್ಮಾಯಿಲ್ ವಿಜಯಿಯಾದರು. ಚುನಾವಣಾಧಿಕಾರಿಯಾಗಿ ಅಜ್ಜಿಕುಟ್ಟಿರ ಗಿರೀಶ್, ಸಹಾಯಕ ಚುನಾವಣಾಧಿಕಾರಿಯಾಗಿ ಸುನಿತಾ ಗಿರೀಶ್ ಕಾರ್ಯನಿರ್ವಹಿಸಿದರು.











