ಸುಂಟಿಕೊಪ್ಪ ನ.11 NEWS DESK : ಪರಿಸರ ಕಾನೂನು ಪರೀಕ್ಷೆಯಲ್ಲಿ ದಿವ್ಯಶ್ರೀ. ಎಂ. ರಾಜ್ಯಕ್ಕೆ 5ನೇ ರ್ಯಾಂಕ್ ಗಳಿಸುವ ಮೂಲಕ ಉತ್ತಮ ಸಾಧನೆಯನ್ನು ತೋರಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾನಿಲಯದ ಹುಬ್ಬಳ್ಳಿಯಲ್ಲಿ ನಡೆದ 7 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾದೀಶ ಶಿವರಾಜ್.ವಿ.ಪಾಟೀಲ್ ಹಾಗೂ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾದ ಹೆಚ್.ಕೆ.ಪಾಟೀಲ್ ಅವರ ಸಮ್ಮುಖದಲ್ಲಿ ಚಿನ್ನದ ಪದಕ, ಪಾರಿತೋಷಕ ಹಾಗೂ ಅತ್ಯಧಿಕ ಅಂಕಗಳಿಸಿರುವುದಕ್ಕೆ ಸ್ಕಾಲರ್ ಶಿಪ್ ಸ್ವೀಕರಿಸಿರುತ್ತಾರೆ. ಎಂ.ದಿವ್ಯಶ್ರೀ ದಿವಂಗತ ಬಿ.ಎಸ್.ಮುತ್ತಪ್ಪ ಹಾಗೂ ಕುಸುಮ ದಂಪತಿಗಳ ಪುತ್ರಿಯಾಗಿದ್ದಾರೆ. ಪ್ರಸುತ್ತ ರಾಜ್ಯ ಉಚ್ಚನ್ಯಾಯಾಲಯದಲ್ಲಿ ವೃತ್ತಿ ನಡೆಸುತ್ತಿದ್ದು, ಮಡಿಕೇರಿಯಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಇನ್ಸ್ ಪೆಕ್ಟರ್ ಶಾಂತರಾಂ ಅವರ ಪತ್ನಿಯಾಗಿದ್ದಾರೆ.











