
ಮಡಿಕೇರಿ ಜ.13 NEWS DESK : ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಭಾರತೀಯ ಕ್ರೀಡಾ ಪ್ರಾಧಿಕಾರದ ನೇತಾಜಿ ಸುಭಾಷ್ ದಕ್ಷಿಣ ಕೇಂದ್ರಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕ್ರೀಡಾಪಟುಗಳ ಸಾಧನೆ, ಕ್ರೀಡಾ ಕೊಠಡಿ, ಕ್ರೀಡೆಗೆ ಸಂಬಂಧಿತ ಉಪಕರಣಗಳು, ಸುಸಜ್ಜಿತ ಕ್ರೀಡಾಂಗಣಾದ ಒಳ ಹಾಗೂ ಹೊರ ನೋಟವನ್ನು ವೀಕ್ಷಿಸಿದರು. ಕ್ರೀಡಾಪಟುಗಳನ್ನು ಭೇಟಿ ಮಾಡಿ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡುವಂತೆ ಎಂದು ಪ್ರೋತ್ಸಾಹಿಸಿದರು. ಕ್ರೀಡಾ ಪ್ರಾಧಿಕಾರದ ನಿರ್ದೇಶಕರಾದ ವಿಷ್ಣು ಸುಧಾಕರನ್, ನಿಕಟ ಪೂರ್ವ ನಿರ್ದೇಶಕರಾದ ಎಂ.ಕೆ ಗಣೇಶನ್ ಹಾಗೂ ಹಿರಿಯ ಕ್ರೀಡಾಪಟುಗಳು ಉಪಸ್ಥಿತರಿದ್ದರು.









