Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.6 ರ ಪಂದ್ಯಗಳು*
  • *ಗಾಂಧಿ ಭವನದಲ್ಲಿ ಡಾ. ಬಾಬು ಜಗಜೀವನ್‍ರಾಂ ಜಯಂತಿ ಮಡಿಕೇರಿಯಲ್ಲಿ‌ ಬಾಬೂಜಿ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮವಹಿಸಿ: ಡಾ.ಮಂತರ್ ಗೌಡ*
  • *ಕೊಡವ ಕುಟುಂಬಗಳ ನಡುವಿನ ಚೇನಂಡ ಕಪ್ ಹಾಕಿ ಹಬ್ಬ ಆರಂಭ : ದಾಖಲೆಯ 383 ತಂಡಗಳ ನಡುವೆ ಹಣಾಹಣಿ*
  • *ಪಿಎಸ್‌ಐ ಆಗಿ ಕರಿಕೆಯ ನಿಧಿ ಗೌಡ ಮುರುಳ್ಯ ನೇಮಕ*
  • *ಕೊನೆಗೂ ಅರಣ್ಯದಲ್ಲಿ ಶರಣ್ಯ ಪತ್ತೆ : ಕುಡಿಯ ಸಮುದಾಯದ ಹರಕೆ ಫಲಿಸಿತು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.5 ರ ವಿಜೇತ ತಂಡಗಳು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.4 ರ ವಿಜೇತ ತಂಡಗಳು..*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.4 ರ ವಿಜೇತ ತಂಡಗಳು*
  • *ಗೋಪಾಲಪುರ ಶಿಲುಬೆ ಬೆಟ್ಟದಲ್ಲಿ ಗುಡ್ ಫ್ರೈಡೆ*
  • *ಕುಶಾಲನಗರದಲ್ಲಿ ಜನ ಗಣತಿದಾರರಿಗೆ ತರಬೇತಿ :  ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ತಹಶೀಲ್ದಾರ್ ಕಿರಣ್ ಗೌರಯ್ಯ ಮನವಿ* 
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊನೆಗೂ ಅರಣ್ಯದಲ್ಲಿ ಶರಣ್ಯ ಪತ್ತೆ : ಕುಡಿಯ ಸಮುದಾಯದ ಹರಕೆ ಫಲಿಸಿತು*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

*ಕೊನೆಗೂ ಅರಣ್ಯದಲ್ಲಿ ಶರಣ್ಯ ಪತ್ತೆ : ಕುಡಿಯ ಸಮುದಾಯದ ಹರಕೆ ಫಲಿಸಿತು*

ಏಪ್ರಿಲ್ 5, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಏ.5 : ಕೊಡಗಿನ ಅತಿ ಎತ್ತರದ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಕೊಚ್ಚಿ ಮೂಲದ ಜಿ.ಎಸ್.ಶರಣ್ಯ(36) ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಕಕ್ಕಬ್ಬೆ ಯವಕಪಾಡಿ ಗ್ರಾಮದ ಕುಡಿಯ ಸಮುದಾಯದ ಯುವಕರ ರಕ್ಷಣಾ ತಂಡ ಶರಣ್ಯ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತಡಿಯಂಡಮೋಳ್ ಬೆಟ್ಟದ ಟ್ರಕ್ಕಿಂಗ್ ಪಾಯಿಂಟ್ ನಿಂದ 3.5 ಕಿ.ಮೀ ದೂರದ ಮಲೆ ತಿರಿಕೆ ಎಂಬ ಅರಣ್ಯದೊಳಗೆ ಸುರಕ್ಷಿತವಾಗಿದ್ದ ಶರಣ್ಯ ಅವರನ್ನು ಕುಡಿಯ ಸಮುದಾಯದ ಯುವಕರ ರಕ್ಷಣಾ ತಂಡ ಪತ್ತೆ ಮಾಡಿ ಕರೆ ತಂದಿದ್ದಾರೆ.
ತಡಿಯಂಡಮೋಳ್ ಬೆಟ್ಟದ ಸಂಪೂರ್ಣ ಮಾಹಿತಿ ಹೊಂದಿದ್ದ ಸ್ಥಳೀಯ ಕುಡಿಯ ಬುಡಕಟ್ಟು ಸಮುದಾಯದ ಯುವಕರ ತಂಡ ಇಂದು ಸಂಜೆ ವೇಳೆಗೆ ಮಲೆ ತಿರಿಕೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಶರಣ್ಯ ಇರುವುದನ್ನು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ಬಳಿಕ ಯುವಕರು ರಕ್ಷಣಾ ತಂಡಗಳಿಗೆ ಮಾಹಿತಿ ರವಾನಿಸಿದ್ದಾರೆ. ಆಹಾರವಿಲ್ಲದೆ ಬಳಲಿದ್ದ ಶರಣ್ಯ ಅವರನ್ನು ಉಪಚರಿಸಿದ ವಿವಿಧ ಇಲಾಖೆಗಳ ರಕ್ಷಣಾ ತಂಡ ಟ್ರಕ್ಕಿಂಗ್ ಪಾಯಿಂಟ್ ಪ್ರವೇಶ ದ್ವಾರಕ್ಕೆ ಕರೆ ತಂದರು. *ಕುಡಿಯರ ಹರಕೆ* ಕಳೆದ 3 ದಿನಗಳಿಂದ ತಡಿಯಂಡಮೋಳ್ ಬೆಟ್ಟದ ಅರಣ್ಯದೊಳಗೆ ನಿಗೂಢವಾಗಿ ನಾಪತ್ತೆಯಾಗಿದ್ದ ಶರಣ್ಯ ಅವರು ಸುರಕ್ಷಿತವಾಗಿ ಮರಳಬೇಕು ಎಂದು ಸ್ಥಳೀಯ ಕುಡಿಯ ಸಮುದಾಯದ ಪ್ರಮುಖರು ತಮ್ಮ ಆರಾಧ್ಯ ದೈವಗಳ ಮೊರೆ ಹೋಗಿದ್ದರು. ಮಲೆ ಬೀರ, ಮಲೆ ತಮ್ಮಚ್ಚ, ಚೌಂಡಿ ದೈವಗಳಿಗೆ ವಿಶೇಷ ಪೂಜೆ ಸಲ್ಲಿಸಿ ಶರಣ್ಯ ಸುರಕ್ಷಿತವಾಗಿ ಪತ್ತೆಯಾಗಬೇಕು. ಹುಡುಕಾಟ ನಡೆಸಲು ಕಾಡಿಗೆ ತೆರಳಿದ ಗ್ರಾಮಸ್ಥರಿಗೆ ಯಾವುದೇ ಕಾಡು ಪ್ರಾಣಿಗಳಿಂದ ತೊಂದರೆಯಾಗಬಾರದು ಎಂದು ದೀಪಕ್ಕೆ ಅಕ್ಕಿ ಹಾಕಿ ಮುಂದಿನ ಹಬ್ಬದ ಸಂದರ್ಭ ಹರಕೆ ನೀಡುವುದಾಗಿ ಪ್ರಾರ್ಥಿಸಿದ್ದರು.
ಗ್ರಾಮದಲ್ಲಿ ಹಬ್ಬದ ಕಟ್ಟು ಬಿದ್ದಿದೆ, ಇಂತಹ ಸಂದರ್ಭ ತಿಳಿದು ತಿಳಿಯದೆಯೋ ಏನಾದರೂ ತಪ್ಪು ನಡೆದಿದ್ದರೆ ಮನ್ನಿಸುವಂತೆ ದೈವಗಳಲ್ಲಿ ಬೇಡಿಕೊಂಡಿದ್ದರು. ಕಾಕತಾಳೀಯ ಎಂಬoತೆ ಕುಡಿಯ ಸಮುದಾಯದ ಯುವಕರ ತಂಡಕ್ಕೆ ಶರಣ್ಯ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಆ ಮೂಲಕ ಸಮುದಾಯದ ಪ್ರಾರ್ಥನೆಗೆ ಆರಾಧ್ಯ ದೈವಗಳು ಹರಸಿದಂತಾಗಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
*ಏಕಾಂಗಿ ಶರಣ್ಯ*
ಕಕ್ಕಬ್ಬೆ ಸಮೀಪದ ಕಬ್ಬಿನಕಾಡುವಿನ ಹೋಂಸ್ಟೇಗೆ ಏ.1ರಂದು ಬಂದಿದ್ದ ಧೈರ್ಯವಂತೆ ಶರಣ್ಯ ಏ.2ರಂದು ತಡಿಯಂಡಮೋಳ್ ಬೆಟ್ಟಕ್ಕೆ ಟ್ರಕ್ಕಿಂಗ್ ತೆರಳಿದ್ದರು. ಏಕಾಂಗಿಯಾಗಿ ಟ್ರಕ್ಕಿಂಗ್ ಬುಕ್ ಮಾಡಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇತರ ಚಾರಣಿಗರ ಜೊತೆಯಲ್ಲಿ ಶರಣ್ಯ ಅವರನ್ನು ಬೆಟ್ಟಕ್ಕೆ ತೆರಳಲು ಅನುಮತಿ ನೀಡಿದ್ದರು. ಶರಣ್ಯ ಜೊತೆಯಲ್ಲಿ ಟ್ರಕ್ಕಿಂಗ್ ತೆರಳಿದ್ದ ಎಲ್ಲಾ ಚಾರಣಿಗರು ಸಂಜೆ ಮರಳಿದ್ದರೂ ಶರಣ್ಯ ಮಾತ್ರ ವಾಪಾಸಾಗಿರಲಿಲ್ಲ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.6 ರ ಪಂದ್ಯಗಳು*

ಏಪ್ರಿಲ್ 5, 2026

*ಗಾಂಧಿ ಭವನದಲ್ಲಿ ಡಾ. ಬಾಬು ಜಗಜೀವನ್‍ರಾಂ ಜಯಂತಿ ಮಡಿಕೇರಿಯಲ್ಲಿ‌ ಬಾಬೂಜಿ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮವಹಿಸಿ: ಡಾ.ಮಂತರ್ ಗೌಡ*

ಏಪ್ರಿಲ್ 5, 2026

*ಕೊಡವ ಕುಟುಂಬಗಳ ನಡುವಿನ ಚೇನಂಡ ಕಪ್ ಹಾಕಿ ಹಬ್ಬ ಆರಂಭ : ದಾಖಲೆಯ 383 ತಂಡಗಳ ನಡುವೆ ಹಣಾಹಣಿ*

ಏಪ್ರಿಲ್ 5, 2026

*ಗಾಂಧಿ ಭವನದಲ್ಲಿ ಡಾ. ಬಾಬು ಜಗಜೀವನ್‍ರಾಂ ಜಯಂತಿ ಮಡಿಕೇರಿಯಲ್ಲಿ‌ ಬಾಬೂಜಿ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮವಹಿಸಿ: ಡಾ.ಮಂತರ್ ಗೌಡ*

ಏಪ್ರಿಲ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK  ಏ.05:- ರಾಷ್ಟ್ರದ‌ ಅಪರೂಪದ‌ ರಾಜಕೀಯ ಮುತ್ಸದ್ಧಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರ…

*ಕೊಡವ ಕುಟುಂಬಗಳ ನಡುವಿನ ಚೇನಂಡ ಕಪ್ ಹಾಕಿ ಹಬ್ಬ ಆರಂಭ : ದಾಖಲೆಯ 383 ತಂಡಗಳ ನಡುವೆ ಹಣಾಹಣಿ*

ಏಪ್ರಿಲ್ 5, 2026

*ಪಿಎಸ್‌ಐ ಆಗಿ ಕರಿಕೆಯ ನಿಧಿ ಗೌಡ ಮುರುಳ್ಯ ನೇಮಕ*

ಏಪ್ರಿಲ್ 5, 2026

*ಕೊನೆಗೂ ಅರಣ್ಯದಲ್ಲಿ ಶರಣ್ಯ ಪತ್ತೆ : ಕುಡಿಯ ಸಮುದಾಯದ ಹರಕೆ ಫಲಿಸಿತು*

ಏಪ್ರಿಲ್ 5, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.5 ರ ವಿಜೇತ ತಂಡಗಳು*

ಏಪ್ರಿಲ್ 5, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.4 ರ ವಿಜೇತ ತಂಡಗಳು..*

ಏಪ್ರಿಲ್ 4, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.4 ರ ವಿಜೇತ ತಂಡಗಳು*

ಏಪ್ರಿಲ್ 4, 2026

*ಗೋಪಾಲಪುರ ಶಿಲುಬೆ ಬೆಟ್ಟದಲ್ಲಿ ಗುಡ್ ಫ್ರೈಡೆ*

ಏಪ್ರಿಲ್ 4, 2026

*ಕುಶಾಲನಗರದಲ್ಲಿ ಜನ ಗಣತಿದಾರರಿಗೆ ತರಬೇತಿ :  ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ತಹಶೀಲ್ದಾರ್ ಕಿರಣ್ ಗೌರಯ್ಯ ಮನವಿ* 

ಏಪ್ರಿಲ್ 4, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.5ರ ಪಂದ್ಯಗಳು*

ಏಪ್ರಿಲ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.