
ವಿರಾಜಪೇಟೆ ಜೂ.3 NEWS DESK : ಕಾನೂನು ಮತ್ತು ಆಡಳಿತಾತ್ಮಕವಾಗಿ ಉತ್ತಮ ತಿಳುವಳಿಕೆ ಹೊಂದಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಗೆ ನೂತನ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲು ಕೊಡಗು ಜಿಲ್ಲಾ ಕಾಂಗ್ರೇಸ್ ಸಮಿತಿ ಸದಸ್ಯ ಮಾಳೇಟಿರ ಬೆಲ್ಲು ಬೋಪಯ್ಯ ಅವರು ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕ್ಷೇತ್ರವನ್ನು ಶಾಸಕ ಪೊನ್ನಣ್ಣ ಪ್ರಗತಿಯತ್ತ ಕೊಂಡೊಯ್ಯುತ್ತಿದ್ದು, ಸರಕಾರಕ್ಕೆ ಮತ್ತು ರಾಜ್ಯದ ಹಿತಾಸಕ್ತಿಗೆ ಸಮಸ್ಯೆ ಬಂದಾಗ ನಿಭಾಯಿಸುವ ಸಾಮಥ್ರ್ಯ ಅವರಿಗಿದೆ. ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಸಮಾಜದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಬದ್ಧತೆಯನ್ನು ಅವರು ತೋರಿದ್ದಾರೆ. ಸಚಿವರಾಗಿ ಪೊನ್ನಣ್ಣ ಅವರು ರಾಜ್ಯದ ಹಿತಾಸಕ್ತಿಗಾಗಿ ಕೇಂದ್ರ ಸರಕಾರದೊಂದಿಗೆ ಸಮಾಲೋಚಿಸುವ, ವ್ಯವಹಾರ ಮಾಡುವ, ಮನವರಿಕೆ ಮಾಡುವ, ನಿಭಾಯಿಸುವ ಸ್ವಂತ ಚಿಂತನೆ ಹೊಂದಿದ್ದಾರೆ. ಆದರೇ ಇವೆಲ್ಲವನ್ನು ನಿರ್ವಹಿಸಲು ಸೂಕ್ತ ಸಚಿವ ಸ್ಥಾನದ ಮೂಲಕ ಪೊನ್ನಣ್ಣ ಅವರಿಗೆ ಅಧಿಕಾರ ನೀಡಬೇಕು ಎಂದು ಬೆಲ್ಲು ಬೋಪಯ್ಯ ಆಗ್ರಹಿಸಿದ್ದಾರೆ.









