
ಮಡಿಕೇರಿ ಜು.1 NEWS DESK : ವಿರಾಜಪೇಟೆ ಕೊಡವ ಸಮಾಜ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ‘ವ್ಯಸನ ಮುಕ್ತ ‘ ಭಾರತ ಕಲ್ಪನೆಯಡಿಯಲ್ಲಿ ತ್ರಿವೇಣಿ ವಿದ್ಯಾಸಂಸ್ಥೆಯಲ್ಲಿ ಮಾದಕ ವಸ್ತು ಮುಕ್ತರಾಗಲು ಜಾಗೃತಿ ಕಾರ್ಯಕ್ರಮ ನಡೆಯಿತು. ಪಿಪಿಟಿಯ ಮೂಲಕ ದಕ್ಷಿಣ ಕನ್ನಡ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಗಳು ಮಾದಕವಸ್ತುಗಳು, ಅದರ ಪರಿಣಾಮಗಳು, ಅದರಿಂದ ಸಮಾಜದ ಮೇಲೆ ಉಂಟಾಗುವ ಸಮಸ್ಯೆಗಳು, ವ್ಯಕ್ತಿಯ ಗೌರವ ಇತ್ಯಾದಿಗಳ ಬಗೆಗೆ ವಿವರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಘದ ಕಾರ್ಯಕ್ರಮ ನಿರ್ವಹಣಾ ಅಧಿಕಾರಿಗಳು, ತ್ರಿವೇಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಗಳು, ಜಿಲ್ಲಾ ಸಂಚಾಲಕರು, ಶಿಕ್ಷಕರಾದ ಕೃಷ್ಣ ಪ್ರಸಾದ್, ಅರುಣ್, ಧನ್ಯ, ಸಮೀಕ್ಷಾ ಮುಂತಾದ ಶಿಕ್ಷಕರು ಪಾಲ್ಗೊಂಡಿದ್ದರು. ಸಂಸ್ಥೆಯ ವಿದ್ಯಾರ್ಥಿ ಪೂಜಾ ಪ್ರಾರ್ಥಿಸಿದರು. ಶಿಕ್ಷಕಿ , ಸೆವೆಂಟಿ ಆಗಸ್ಟೀನ್ ಸ್ವಾಗತಿಸಿದರು. ಆಶಾ ಅಕ್ಕಮ್ಮ ವಂದಿಸಿದರು.









