Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಾವೇರಿ ಶಾಲೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದ ಬೀಳ್ಕೊಡುಗೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ*
  • *ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*
  • *ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*
  • *ಸವ೯ ಜನರ ಪಾಲಿನ ಕಲ್ಯಾಣದ ಬಜೆಟ್ : ಶಾಸಕ ಡಾ.ಮಂಥರ್ ಗೌಡ ಶ್ಲಾಘನೆ*  
  • *ಕೊಡಗು ಜಿಲ್ಲೆಯನ್ನು ಕಡೆಗಣಿಸಿದ ಬಜೆಟ್ : ತೇಲಪಂಡ ಶಿವಕುಮಾರ್ ಟೀಕೆ*
  • *ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿದೆ*
  • *ಸಾಲದ ಶೂಲಕ್ಕೆ ತಳ್ಳಿದ ಬಜೆಟ್ : ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ : ಬಿಜೆಪಿ ಟೀಕೆ*
  • *ಅಸ್ಸಾಂನಲ್ಲಿ ಸುಖೋಯ್-30 ಯುದ್ಧ ವಿಮಾನ ಪತನ: ಇಬ್ಬರು ಪೈಲಟ್‌ಗಳು ಹುತಾತ್ಮ*
  • *ಹಾರ್ಮುಜ್ ಬಂದ್ ಆದ್ರೂ ತೈಲಕ್ಕೆ ಬರಲ್ಲ ಕಂಟಕ!: ಭಾರತದ ಇಂಧನ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಅಪ್ಡೇಟ್*
  • *ಸಿದ್ದರಾಮಯ್ಯ ಬಜೆಟ್‌ನಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ?*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ನ 144ನೇ ವಾರ್ಷಿಕ ಮಹಾಸಭೆ : ಉಪಾಸಿಯಿಂದ ಇಂಡಿಯನ್ ಕಾಫಿ ಬ್ರಾಂಡ್ ಗೆ ಪ್ರಯತ್ನ : ಸಿ.ಶ್ರೀಧರನ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ನ 144ನೇ ವಾರ್ಷಿಕ ಮಹಾಸಭೆ : ಉಪಾಸಿಯಿಂದ ಇಂಡಿಯನ್ ಕಾಫಿ ಬ್ರಾಂಡ್ ಗೆ ಪ್ರಯತ್ನ : ಸಿ.ಶ್ರೀಧರನ್*

ಅಕ್ಟೋಬರ್ 10, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.10 : ಜಾಗತಿಕವಾಗಿ ಭಾರತೀಯ ಕಾಫಿಗೆ ಬೇಡಿಕೆ ಮತ್ತು ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತ ಬೆಳೆಗಾರರ ಒಕ್ಕೂಟ (ಉಪಾಸಿ) ವಿವಿಧ ಕಾಫಿ ಸಂಸ್ಥೆಗಳ ಸಹಕಾರದಲ್ಲಿ ಇಂಡಿಯನ್ ಕಾಫಿ ಬ್ರಾಂಡ್ ರೂಪಿಸುವ ನಿಟ್ಟಿನಲ್ಲಿ ಮುಂದಾಗಿದೆ ಎಂದು ಉಪಾಸಿಯ ಅಧ್ಯಕ್ಷ ಸಿ.ಶ್ರೀಧರನ್ ಹೇಳಿದ್ದಾರೆ.
ನಗರದಲ್ಲಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ನ 144ನೇ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಧರನ್, ಈಗಾಗಲೇ ವಿಶ್ವದ ಪ್ರಮುಖ ಕಾಫಿ ಕೆಫೆ ಸಂಸ್ಥೆಗಳು ಭಾರತದಲ್ಲಿ ಕೆಫೆ ಪ್ರಾರಂಭಿಸುತ್ತಿವೆ. ಕಾಫಿ ಜಗತ್ತಿನಲ್ಲಿ ಭಾರತದ ಕಾಫಿಯೂ ಗುರುತಿಸಲ್ಪಡುತ್ತಿದೆ. ಬೆಂಗಳೂರಿನಲ್ಲಿ ಕಳೆದ ತಿಂಗಳು ಆಯೋಜಿತ ವಿಶ್ವಕಾಫಿ ಸಮ್ಮೇಳನ ಕೂಡ ಜಾಗತಿಕವಾಗಿ ಭಾರತೀಯ ಕಾಫಿಗೆ ಒಳ್ಳೆಯ ಪ್ರಚಾರ ದೊರಕುವಂತೆ ಮಾಡಿದೆ. ಉಪಾಸಿ ಸಂಸ್ಥೆಯು ಇದೀಗ ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಇಂಡಿಯನ್ ಕಾಫಿ ಎಂಬ ಬ್ರಾಂಡ್ ಮೂಲಕ ಭಾರತೀಯ ಕಾಫಿಗೆ ಜಾಗತಿಕ ಬೇಡಿಕೆ ಮತ್ತು ಮಾನ್ಯತೆ ದೊರಕಿಸಲು ಪ್ರಯತ್ನಿಸುತ್ತಿದೆ ಎಂದರು.
ಭಾರತದಲ್ಲಿ ಟೀ ಬೆಳೆಗೆ ಹೆಚ್ಚು ಅವಕಾಶಗಳಿದ್ದರೂ ವೈವಿಧ್ಯಮಯ ಟೀ ಉತ್ಪನ್ನಗಳಿಂದಾಗಿ ಟೀಯನ್ನು ಇಂಡಿಯನ್ ಟೀ ಎಂದು ಬ್ರಾಂಡ್ ಮಾಡಲು ಕಷ್ಟಸಾಧ್ಯ. ಆದರೆ ಕಾಫಿ ಇದಕ್ಕೆ ಹೊರತಾಗಿದ್ದು, ಕೊಲಂಬಿಯನ್, ಮೆಕ್ಸಿಕನ್ ಕಾಫಿ ರೀತಿಯಲ್ಲಿಯೇ ವಿಶ್ವದಲ್ಲಿ ಇಂಡಿಯನ್ ಕಾಫಿ ಎಂದು ಬ್ರಾಂಡ್ ಮಾಡಲು ಸುಲಭವಾಗಲಿದೆ. ಆದರೆ ಕಾಫಿ ಕೃಷಿಕರು ತಾವು ಬೆಳೆಯುವ ಕಾಫಿಯ ಗುಣಮಟ್ಟದತ್ತ ಗಮನ ಹರಿಸಿದರೆ ಮಾತ್ರ ಇಂಡಿಯನ್ ಕಾಫಿಗೆ ಬ್ರಾಂಡ್ ದೊರಕಲು ಸಾಧ್ಯವಾಗುತ್ತದೆ ಎಂದೂ ಶ್ರೀಧರನ್ ಅಭಿಪ್ರಾಯಪಟ್ಟರು.
ಪ್ರಸ್ತುತ ಭಾರತದಲ್ಲಿ ಬೆಳೆಸಲಾಗುತ್ತಿರುವ 3.50 ಲಕ್ಷ ಮೆಟ್ರಿಕ್ ಟನ್ ಕಾಫಿಯಲ್ಲಿ 90 ಸಾವಿರ ಮೆಟ್ರಿಕ್ ಟನ್ ಕಾಫಿ ಆಂತರಿಕವಾಗಿ ಬಳಸಲ್ಪಡುತ್ತಿದ್ದು, ಉಳಿದ 2.60 ಲಕ್ಷ ಮೆಟ್ರಿಕ್ ಟನ್ ಕಾಫಿಯನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ರಫ್ತು ವಹಿವಾಟಿನಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 80 ಸಾವಿರ ಕೋಟಿ ವರಮಾನ ಲಭಿಸುತ್ತಿದೆ ಎಂದು ಮಾಹಿತಿ ನೀಡಿದ ಶ್ರೀಧರನ್, ರಫ್ತು ಮಾಡಲಾಗುವ ಕಾಫಿಯಲ್ಲಿ ಈಗಿನಿಂದಲೇ ಶೇ.5 ರಷ್ಟು ಕಾಫಿಗೆ ಬ್ರಾಂಡ್ ಮಾಡುವ ಗುರಿ ಹೊಂದಬೇಕಾಗಿದೆ ಎಂದು ಸಲಹೆ ನೀಡಿದರು.
1940ರಲ್ಲಿ ಜಾರಿಯಾದ ಕಾಫಿ ಕಾಯಿದೆಯನ್ನು ಪರಿಣಾಮಕಾರಿಯಾಗಿ ಕಾಫಿ ಉದ್ಯಮಕ್ಕೆ ಪ್ರಯೋಜನವಾಗುವಂತೆ ಮಾಡುವ ನಿಟ್ಟಿನಲ್ಲಿ ಉಪಾಸಿ ಪ್ರಯತ್ವಿಸುತ್ತಿದೆ. ಈ ಕಾಯಿದೆಯ ಸಮರ್ಪಕ ಪ್ರಯೋಜನ ಕಾಫಿ ಕೃಷಿಕರು, ಉದ್ಯಮಿಗಳಿಗೆ ಆಗಬೇಕೆಂದು ಶ್ರೀಧರನ್ ಹೇಳಿದರು.
ಟೀ ತೋಟಗಳಲ್ಲಿ ಕೈಗೊಂಡ ಪ್ರಯೋಗದಂತೆ ಭವಿಷ್ಯದಲ್ಲಿ ಕಾಫಿ ತೋಟಗಳಲ್ಲಿಯೂ ಔಷಧೀಯ ಸಸಿಗಳನ್ನು ಬೆಳೆಸಬೇಕಾಗಿದೆ. ಈಗ ಉಪಾಸಿ ಗುರುಸಿರುವಂತೆ 1072 ಔಷಧೀಯ ಸಸ್ಯಗಳಿದ್ದು, ಈ ಪೈಕಿ 270 ಸಸ್ಯಗಳು ಉತ್ತಮ ಮಾರುಕಟ್ಟೆ ಹೊಂದಿದ್ದು ಕಾಫಿ, ಟೀ ಬೆಳೆಗಾರರ ಆರ್ಥಿಕತೆಗೆ ನೆರವಾಗಲಿದೆ ಎಂದೂ ಶ್ರೀಧರನ್ ತಿಳಿಸಿದರು.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಯು.ಅಶೋಕ್ ಮಾತನಾಡಿ, ಮಾನವ-ವನ್ಯಜೀವಿ ಸಂಘರ್ಷ ಕೊಡಗಿನಲ್ಲಿ ಎಲ್ಲೆ ಮೀರಿದ್ದು, ಶಾಶ್ವತ ಪರಿಹಾರ ದೊರಕದಿದ್ದರೆ ತೋಟ ನಿರ್ವಹಣೆಯೇ ಹೊರೆಯಾಗಲಿದೆ. ರಾಜ್ಯ ಸರ್ಕಾರ ಮುಂಗಡ ಪತ್ರದಲ್ಲಿ ಸೂಕ್ತ ಪರಿಹಾರವನ್ನು ವನ್ಯಜೀವಿ ಸಂಘರ್ಷದಲ್ಲಿ ಸಂತ್ರಸ್ಥರಾದವರಿಗೆ ನೀಡಬೇಕೆಂದು ಒತ್ತಾಯಿಸಿದರು.
ಕರಿಮೆಣಸು, ಅಡಕೆ ಬೆಳೆಗಳಂತೆಯೇ ಕಾಫಿ ಕೃಷಿಯನ್ನೂ ಕೇಂದ್ರ ಸರ್ಕಾರ ಬೆಳೆ ವಿಮೆ ಪರಿಹಾರ ಯೋಜನೆಯಡಿ ತರಬೇಕೆಂದು ಆಗ್ರಹಿಸಿದ ಅಶೋಕ್, ಕೊಡಗಿನಲ್ಲಿ ಬೆಳೆಗಾರರು ಎದುರಿಸುತ್ತಿರುವ ಪೌತಿ ಖಾತೆ ವರ್ಗಾವಣೆ ಸಂಬಂಧಿತ ಸಮಸ್ಯೆಗೆ ಶೀಘ್ರ ಪರಿಹಾರ ದೊರಕಬೇಕಾಗಿದೆ ಎಂದೂ ಹೇಳಿದರು.
ಕಾಫಿ ತೋಟಗಳಲ್ಲಿ ಇತ್ತೀಚಿನ ತಿಂಗಳಲ್ಲಿ ವೃತ್ತಿಪರ ಕಾರ್ಮಿಕರ ಕೊರತೆ ತೀವ್ರವಾಗಿದೆ. ಇತ್ತೀಚಿಗೆ ದಿನಕ್ಕೆ 3-4 ಗಂಟೆ ಮಾತ್ರ ಕಾಮಿ9ಕರು ಕೆಲಸ ಮಡುತ್ತಿದ್ದಾರೆ. ಆದರೆ ದಿನದ ವೇತನವಾದ 475 ರೂ. ಪಾವತಿಯು ಮಾಲೀಕರಿಗೆ ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಗಂಟೆಲೆಕ್ಕದಲ್ಲಿ ಕಾರ್ಮಿಕರಿಗೆ ವೇತನ ನಿಗಧಿಯಾಗಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಗಂಟೆಲೆಕ್ಕದಲ್ಲಿ ವೇತನ ಪಾವತಿ ನಿಯಮ ಜಾರಿಗೆ ಸರ್ಕಾರ ಮುಂದಾಗಬೇಕೆಂದೂ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಸಲಹೆ ನೀಡಿದರು.
ಸಿಎಸ್ ಐ ಆರ್ ಮತ್ತು ಸಿಎಫ್ ಟಿಆರ್ ಐ ನ ನಿವೃತ್ತ ಹಿರಿಯ ಪ್ರಧಾನ ವಿಜ್ಞಾನಿ ಡಾ.ಕೆ.ಎ.ಅನು ಅಪ್ಪಯ್ಯ ಮಾತನಾಡಿ, ಕಾಫಿ ಹಸ್ಕ್ ಸೇರಿದಂತೆ ಕಾಫಿಯ ವಿವಿಧ ಅಂಶಗಳನ್ನು ಬಳಸಿ ತಯಾರಿಸಬಹುದಾದ ಇತರ ಉತ್ಪನ್ನಗಳ ಬಗ್ಗೆಯೂ ಕಾಫಿ ಉದ್ಯಮ ಚಿಂತನೆ ಹರಿಸಬೇಕಾಗಿದೆ. ಚಿಕೋರಿ ರಹಿತ ಕಾಫಿ ಬಳಕೆ ಮೂಲಕ ಆರೋಗ್ಯ ವೃದ್ಧಿಯ ಬಗ್ಗೆ ಪ್ರತೀಯೋರ್ವರೂ ಜಾಗೃತಿ ವಹಿಸಬೇಕಾಗಿದೆ ಎಂದರು.
ತಂಪುಪಾನೀಯ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳಲ್ಲಿರುವ ಆರೋಗ್ಯಕ್ಕೆ ಮಾರಕವಾದ ವಿಷಕಾರಿ ಪದಾರ್ಥಗಳ ಬಗ್ಗೆ ಯಾರೂ ಉತ್ಪನ್ನಗಳ ಖರೀದಿ ಸಂದರ್ಭ ಎಚ್ಚರಿಕೆ ವಹಿಸುತ್ತಿಲ್ಲ. ಹೀಗಾಗಿಯೇ ನಾವು ಉಪಯೋಗಿಸುವ ಬಹುತೇಕ ಆಹಾರೋತ್ಪನ್ನಗಳಿಂದ ವಿಷಯುಕ್ತ ಪದಾರ್ಥಗಳು ನಮ್ಮ ದೇಹವನ್ನು ಸೇರುತ್ತಿದೆ. ಉತ್ಪನ್ನಗಳ ಖರೀದಿ ಸಂದರ್ಭ ಪ್ಯಾಕೇಟ್ ಗಳಲ್ಲಿ ಎಷ್ಟು ದರ ಇದೆ ಎಂದು ಗಮನಿಸುವ ಗ್ರಾಹಕ ಆ ಉತ್ಪನ್ನಗಳಲ್ಲಿ ಎಷ್ಟು ನೈಜ ಪದಾರ್ಥಗಳನ್ನು
ಬಳಸಲಾಗಿದೆ. ಎಷ್ಟು ಕೃತಕ ಪದಾರ್ಥಗಳನ್ನು ಬಳಸಲಾಗಿದೆ ಎಂದು ತಿಳಿದುಕೊಳ್ಳಲೇಬೇಕಾಗಿದೆ. ಉದಾಹರಣೆಗೆ ಹಣ್ಣಿನ ಪಾನೀಯಗಳಲ್ಲಿ ಶೇ.12 ರಷ್ಟು ಮಾತ್ರ ಹಣ್ಣಿನ ರಸ ಉಪಯೋಗಿಸಲಾಗುತ್ತಿದ್ದು ಉಳಿದ 88 ಶೇ. ಸಕ್ಕರೆಯ ಅಂಶವನ್ನು ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ಹಾನಿಕಾರಕ ಎಂದೂ ಡಾ.ಅನುಅಪ್ಪಯ್ಯ ಹೇಳಿದರು.
ಕೊಡಗಿನಲ್ಲಿ ಮಾರಾಟವಾಗುತ್ತಿರುವ ಹೋಂಮೇಡ್ ವೈನ್ ಗಳು ಅತ್ಯಂತ ಅಪಾಯಕಾರಿಯಾಗಿದ್ದು, ಖಂಡಿತವಾಗಿಯೂ ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ರೀತಿ ಹೋಂಮೇಡ್ ವೈನ್ ತಯಾರಿಸುವುದೇ ಅಕ್ರಮವಾಗಿದ್ದು ಇದನ್ನು ಮಾರಾಟಕ್ಕೆ ಹೇಗೆ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದ ಡಾ.ಅನು ಅಪ್ಪಯ್ಯ, ಹೋಂಮೇಡ್ ವೈನ್ ಎಂಬ ಅಪಾಯಕಾರಿ ಪ್ರವೃತ್ತಿಗೆ ಕಡಿವಾಣ ಹಾಕಲೇಬೇಕಾಗಿದೆ ಎಂದು ಒತ್ತಾಯಿಸಿದರು.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸಿ.ಕೆ.ಬೆಳ್ಯಪ್ಪ, ಉಪಾಧ್ಯಕ್ಷ ಎ.ನಂದಬೆಳ್ಯಪ್ಪ ವೇದಿಕೆಯಲ್ಲಿದ್ದರು. ಎಂ.ಸಿ.ಕಾರ್ಯಪ್ಪ ನಿರೂಪಿಸಿದ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವೆಡೆಗಳಿಂದ ಕಾಫಿ ಬೆಳೆಗಾರರು, ಬೆಳೆಗಾರ ಸಂಸ್ಥೆಗಳು, ಕೃಷಿ ಸಂಬಂಧಿತ ಉತ್ಪನ್ನಗಳ ಮಾರಾಟಗಾರರು ಪಾಲ್ಗೊಂಡಿದ್ದರು. ಕಾಫಿ ಸಂಬಂಧಿತ ವಿಚಾರ ಸಂಕಿರಣಗಳು ನಡೆದವು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಾವೇರಿ ಶಾಲೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದ ಬೀಳ್ಕೊಡುಗೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ*

ಮಾರ್ಚ್ 6, 2026

*ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*

ಮಾರ್ಚ್ 6, 2026

*ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*

ಮಾರ್ಚ್ 6, 2026

*ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*

ಮಾರ್ಚ್ 6, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಮಾ.೬ : ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ, ವಿರಾಜಪೇಟೆ ತಾಲ್ಲೂಕು, ಅಮ್ಮತ್ತಿ ಹೋಬಳಿ ಘಟಕ…

*ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*

ಮಾರ್ಚ್ 6, 2026

*ಸವ೯ ಜನರ ಪಾಲಿನ ಕಲ್ಯಾಣದ ಬಜೆಟ್ : ಶಾಸಕ ಡಾ.ಮಂಥರ್ ಗೌಡ ಶ್ಲಾಘನೆ*  

ಮಾರ್ಚ್ 6, 2026

*ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿದೆ*

ಮಾರ್ಚ್ 6, 2026

*ಸಾಲದ ಶೂಲಕ್ಕೆ ತಳ್ಳಿದ ಬಜೆಟ್ : ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ : ಬಿಜೆಪಿ ಟೀಕೆ*

ಮಾರ್ಚ್ 6, 2026

*ಅಸ್ಸಾಂನಲ್ಲಿ ಸುಖೋಯ್-30 ಯುದ್ಧ ವಿಮಾನ ಪತನ: ಇಬ್ಬರು ಪೈಲಟ್‌ಗಳು ಹುತಾತ್ಮ*

ಮಾರ್ಚ್ 6, 2026

*ಹಾರ್ಮುಜ್ ಬಂದ್ ಆದ್ರೂ ತೈಲಕ್ಕೆ ಬರಲ್ಲ ಕಂಟಕ!: ಭಾರತದ ಇಂಧನ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಅಪ್ಡೇಟ್*

ಮಾರ್ಚ್ 6, 2026

*ಸಿದ್ದರಾಮಯ್ಯ ಬಜೆಟ್‌ನಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ?*

ಮಾರ್ಚ್ 6, 2026

*ಕರ್ನಾಟಕದಲ್ಲಿ 16 ವರ್ಷದೊಳಗಿನವರಿಗೆ ಸಾಮಾಜಿಕ ಜಾಲತಾಣ ನಿಷೇಧ*

ಮಾರ್ಚ್ 6, 2026

*ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾಧ೯  ಸಹಕಾರಿ ಸಂಘದ ಅಧ್ಯಕ್ಷರಾಗಿ ಹೆಚ್.ಎಸ್.ಚೇತನ್, ಉಪಾಧ್ಯಕ್ಷರಾಗಿ ಬಿ.ಬಿ.ಸ್ವಾತಿ ಅವಿರೋಧ ಆಯ್ಕೆ*

ಮಾರ್ಚ್ 6, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.