Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಏ.2 ರಂದು ಸೋಮವಾರಪೇಟೆ ತಾ.ಪಂ.ಕೆಡಿಪಿ ಸಭೆ*
  • *ವಿರಾಜಪೇಟೆಯ ಮಲೆ ಮಹದೇಶ್ವರ ದೇವಾಲಯದ ವಾರ್ಷಿಕ ಉತ್ಸವ*
  • *ಮಾ.15 ರಂದು ಮೂರ್ನಾಡು ಗೌಡ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ*
  • *ವಿರಾಜಪೇಟೆ ಶ್ರೀ ಮುತ್ತಪ್ಪ ದೇವಾಲಯದ ತೆರೆ ಮಹೋತ್ಸವಕ್ಕೆ ಚಾಲನೆ*
  • *ಫಾಸ್ಟ್ ಪುಡ್(ಚಾಟ್ಸ್ ಸೆಂಟರ್) ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ*
  • *ಕೋಟ್ಪಾ ಕಾಯ್ದೆ ಉಲ್ಲಂಘನೆ : 1800 ರೂ.ದಂಡ*
  • *ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ*
  • *ಅಡುಗೆ ಅನಿಲದ ಕೊರತೆ : ಕೇಂದ್ರ ವಿರುದ್ಧ ಕುಶಾಲನಗರದಲ್ಲಿ ಪ್ರತಿಭಟನೆ*
  • *ಕನ್ನಡ ಸಾಹಿತ್ಯ ಸುದೀರ್ಘವಾದ ಕಾಲದಿಂದ ಜೀವಂತಿಕೆ ಉಳಿಸಿಕೊಂಡು ಬೆಳೆಯುತ್ತಿರುವ ಸಾಹಿತ್ಯ : ಪ್ರೊ.ಡಿ.ಕೆ.ಸರಸ್ವತಿ*
  • *ಸೋಮವಾರಪೇಟೆ : ಹೋಟೆಲ್ ಹಾಗೂ ಬೇಕರಿಗಳಿಗೆ ಆಹಾರ ನಿರೀಕ್ಷಕರ ಭೇಟಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಾ.19 ರಿಂದ ಚೇನಿವಾಡ-ಬೇಗೂರು ಗ್ರಾಮದ ಶ್ರೀ ಮಹಾವಿಷ್ಣು ದೇವಾಲಯದ ಅಷ್ಠಬಂಧ ಬ್ರಹ್ಮಕಲಶೋತ್ಸವ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಾ.19 ರಿಂದ ಚೇನಿವಾಡ-ಬೇಗೂರು ಗ್ರಾಮದ ಶ್ರೀ ಮಹಾವಿಷ್ಣು ದೇವಾಲಯದ ಅಷ್ಠಬಂಧ ಬ್ರಹ್ಮಕಲಶೋತ್ಸವ*

ಮಾರ್ಚ್ 16, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಗೋಣಿಕೊಪ್ಪ ಮಾ.16 NEWS DESK :  ಚೇನಿವಾಡ-ಬೇಗೂರು ಗ್ರಾಮದ 850 ವರ್ಷಗಳ ಪುರಾತನ ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶೋತ್ಸವ ಮಾ.19 ರಿಂದ 25 ರವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಲ್ಲಂಡ ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಮಾ.19 ರಿಂದ 25 ರವರೆಗೆ ಏಳು ದಿನಗಳ ಕಾಲ ದೇವಾಲಯದ ನವೀಕರಣ ನೂತನ ಬಿಂಬಗಳ ಪುನರ್ ಪ್ರತಿಷ್ಠಾಪನೆ ಕಾರ್ಯ ನಡೆಯಲಿದ್ದು, ತಂತ್ರಿಗಳಾದ ಬ್ರಹ್ಮಶ್ರೀ ಗೋಪಾಲಕೃಷ್ಣ ಆಡಿಗ ಪೆರ್ಲ ನೇತೃತ್ವದಲ್ಲಿ ಶಿಲ್ಪಿ ಜಗನಿವಾಸ್ ರಾವ್ ಪುತ್ತೂರು ಸಮ್ಮುಖದಲ್ಲಿ ಪ್ರಧಾನ ಅರ್ಚಕ ನಾಗೇಶ್ ಸಹಕಾರದೊಂದಿಗೆ ಪೂಜಾ ವಿಧಿ ವಿಧಾನಗಳು ಮತ್ತು ವಿಗ್ರಹ ಪ್ರಪ್ರತಿಷ್ಠಾಪನೆಗಳು ನೆರವೇರಲಿದೆ ಎಂದು ತಿಳಿಸಿದರು.
ಮಾ.19 ರಂದು ಸಂಜೆ 4 ಗಂಟೆಗೆ ತಂತ್ರಿಗಳನ್ನು ಹಾಗೂ ಶಿಲ್ಪಿಗಳನ್ನು ಪೂರ್ಣ ಕುಂಭ ಸ್ವಾಗತದಿಂದ ಬರಮಾಡಿಕೊಳ್ಳಲಾಗುವುದು.
ಮಾ.20 ರಂದು ಬೆಳಗ್ಗೆ 6.30ಕ್ಕೆ ಗಣಪತಿ ಹವನ, ಸಪ್ತಶುದ್ದಿ, ಪ್ರಸಾದ ಶುದ್ದಿ, ರಾಕ್ಷೋಘ್ನ ಹವನ, ವಾಸ್ತು ಹವನ, ಬಲಿ, ದಿಶಾಬಲಿ, ಮಹಾಪೂಜೆಗಳು ನಡೆಯಲಿದೆ.
ಮಾ.21 ರಂದು ಐಕ್ಯಮತ್ಯ ಬಾಗ್ಯ ಸೂಕ್ತ ಹವನ, ಗಣಪತಿ ಹವನ, ಅಂಕುರ ಪೂಜೆ, ಬಾಲಾಲಯದಲ್ಲಿ ಅನುಜ್ಞಾ ಕಲಶ, ಗಣಪತಿ, ಸುಬ್ರಮಣ್ಯ, ಮಹಾ ವಿಷ್ಣು, ಬಿಂಬಚಾಲನೆ, ಜಲೋದ್ಧಾರ, ನೇತ್ರೋನ್ಮಿಲನೆ, ಬಿಂಬಶುದ್ದಿ ಕಳಶಾಭಿಷೇಕ, ಮಹಾಪೂಜೆ, ಶಾಯಪೂಜೆ, ನಿದ್ರಾಕಳಷ, ದಾನ್ಯ ದಿವಸ, ಆಧಿವಾಸ ಹವನ ನೆರವೇರಲಿದ್ದು, ಮಾ.22ರಂದು ನವಗ್ರಹ ಹವನ, ತತ್ವ ಹವನ, ಗಣಪತಿ ಪೂಜೆ, ಅಂಕುರಪೂಜೆ, ಜೀವಕಲಶ ಸ್ಥಾಪನೆ ನಡೆಯಲಿದೆ.
ಮಾ.23 ರಂದು ಗಣಪತಿ ಹವನ, ಪ್ರಾಯಶ್ಚಿತ ಹವನ, ನಾಗಸನ್ನಿಧಿಯಲ್ಲಿ ಸ್ಪಪ್ತಶುದ್ದಿ, ವಾಸ್ತುಬಲಿ ಸೇರಿದಂತೆ ಇನ್ನಿತರ ಪೂಜಾ ಕಾರ್ಯಗಳು ನಡೆಯಲಿದೆ.
ಮಾ.24 ರಂದು ಗಣಪತಿ ಪೂಜೆಯೊಂದಿಗೆ ವಿಷ್ಣುಯಾಗ, ಗೋಪೂಜೆ, ದಂಪತಿ ಪೂಜೆ ಜತೆಗೆ ವೃಷಭ ಲಗ್ನದಲ್ಲಿ ಗಣಪತಿ, ಸುಬ್ರಹ್ಮಣ್ಯ, ನಾಗದೇವತೆಗಳ ಪ್ರತಿಷ್ಠಾಪನೆಗಳು ನಡೆಯಲಿದ್ದು, ಸಂಜೆ ಬ್ರಹ್ಮ ಕಳಶ, ಮಂಡಳ ಪೂಜೆ, ತಯಂಬಕ ದೀಪಾರಾಧನೆ, ಆಶ್ಲೇಷ ಬಲಿ ನಡೆಯಲಿದೆ.
ಮಾ.25 ರಂದು ಶ್ರೀ ಸೂಕ್ತ ಹವನ, ಬ್ರಹ್ಮಕಳಶಾಭಿಷೇಕ, ಅಲಂಕಾರಪೂಜೆ, ನಿತ್ಯ ನಿರ್ಣಯ ಪೂಜೆ ನಡೆಯಲಿದ್ದು, ಅಪರಾಹ್ನ 2 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಧಾನಿಗಳಿಗೆ, ಅತಿಥಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ದೀಪಾರಾಧನೆ, ರಂಗಪೂಜೆ ನಡೆಯಲಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಮಂತ್ರಂಡ ರಾಜೇಂದ್ರ ಮಾತನಾಡಿ ಅಷ್ಟಬಂಧ ಬ್ರಹ್ಮ ಕಳಶೋತ್ಸವ ಪ್ರಯುಕ್ತ ವಿಶೇಷವಾಗಿ ಮಾ.22ರಂದು ನವಗ್ರಹ ಶಾಂತಿ ಪೂಜೆ, ಮಾ.24ರಂದು ವಿಷ್ಣುಯಾಗ, 108 ತೆಂಗಿನಕಾಯಿ ಹವನ, ಮಾ.25ರಂದು ಲಕ್ಷ್ಮಿ ಪೂಜೆಗಳು ನಡೆಯಲಿದೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸುಮಾರು ಒಂದೂವರೆ ಕೋಟಿಯಷ್ಟ್ಟು ಅನುದಾನದ ಅವಶ್ಯಕತೆ ಇದೆ. ದಾನಿಗಳ ಸಹಕಾರದಿಂದ ದೇವಾಲಯದ ಜೀರ್ಣೋದ್ಧಾರದ ಕಾರ್ಯಗಳು ಮುಂದುವರೆದಿದ್ದು, ಅಷ್ಠಬಂಧ ಬ್ರಹ್ಮಕಳಶೋತ್ಸವ ನಡೆಯಲಿದೆ. ಮತ್ತಷ್ಟ ಜನಸಹಕಾರದ ಅಗತ್ಯತೆ ಇದ್ದು, ಭಕ್ತರು ಸಹಕಾರದ ಮನೋಭಾವವನ್ನು ವ್ಯಕ್ತಪಡಿಸಬೇಕೆಂದು ಈ ಸಂದರ್ಭ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಚೋಡುಮಾಡ ರವಿ, ಸಹಕಾರ್ಯದರ್ಶಿ ಮಲ್ಲಂಡ ದನೀಷ್ ಸುಬ್ರಮಣಿ, ಖಜಾಂಜಿ ಮಲ್ಲಂಡ ಮಧುದೇವಯ್ಯ, ಸದಸ್ಯರುಗಳಾದ ಕಾಯಪಂಡ ಚಿಣ್ಣಪ್ಪ, ಮತ್ರಂಡ ದಿನೇಶ್ ಕಾವೇರಪ್ಪ, ಚೋಡುಮಾಡ ಸುಬ್ರಮಣಿ, ಮಲ್ಲಂಡ ತಮ್ಮಿ ನಾಚಪ್ಪ, ಮಲ್ಲಂಡ ವಿನಯ್ ಕಾವೇರಪ್ಪ, ಮಲ್ಲಂಡ ದಿನೇಶ್, ಮಲ್ಲಂಡ ಪೊನ್ನಪ್ಪ, ಕಾಯಪಂಡ ದಿನು, ಮಂಡಂಗಡ ಬೋಪಣ್ಣ, ಕೇಚಟ್ಟಿರ ಸಪ್ತ, ನಾಯಂದರ ರಾಜಪ್ಪ, ತಕ್ಕ ಮಲ್ಲಂಡ ವಿಶ್ವನಾಥ್ ಹಾಜರಿದ್ದರು.

ಹಿನ್ನೆಲೆ: 850 ವರ್ಷಗಳ ಇತಿಹಾಸ ಹೊಂದಿರುವ ವಿಷ್ಣುದೇವಾಲಯ ಬೇಗೂರು ಚೀನಿವಾಡ ಗ್ರಾಮದಲ್ಲಿ ಕೆಲವು ವರ್ಷಗಳ ಹಿಂದೆ ಪತ್ತೆಯಾಯಿತು. ದೇವಾಲಯದ ವಿಗ್ರಹವು ಕಾಡಿನಲ್ಲಿ ಶಿಕ್ಷಕರೊಬ್ಬರು ಕೋಲಿನಿಂದ ಮಣ್ಣು ಕೆರೆಯುತ್ತಿದ್ದಾಗ ಗೋಚರಿಸಿದೆ. ನಂತರ ಗ್ರಾಮಸ್ಥರು ಪರಿಶೀಲಿಸಿದಾಗ ಕಾಡಿನ ಒಳಭಾಗದಲ್ಲಿ ಜೀರ್ಣವ್ಯವಸ್ಥೆಯಲ್ಲಿದ್ದ ದೇವಾಲಯ ಆವರಣದ ಭಾವಿಯೊಂದರಲ್ಲಿ ಮತ್ತಷ್ಟು ವಿಗ್ರಹಗಳು, ಪೂಜಾಸಾಮಾಗ್ರಿಗಳು ದೊರೆತ್ತಿದೆ. ಈ ಹಿಂದೆ ಟಿಪ್ಪು ಕೊಡಗಿಗೆ ದಾಳಿ ನಡೆಸಿದಾಗ ದೇವಾಲಯಗಳ ಮೇಲೆ ಆಕ್ರಮಣದ ಹಿನ್ನೆಲೆಯಲ್ಲಿ ವಿಗ್ರಹಗಳ ಭದ್ರತೆಗಾಗಿ ಆರ್ಚಕರು ಅಥವಾ ಗ್ರಾಮಸ್ಥರು ವಿಗ್ರಹವನ್ನು ಭಾವಿಗೆ ಹಾಕಿರಬಹುದೆಂದು ಹಿರಿಯರು ಅಂದಾಜಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಊರಿಗೆ ಉಂಟಾಗುತ್ತಿದ್ದ ಕ್ಷೋಬೆ, ಅನಾರೋಗ್ಯ ಇನ್ನಿತರ ದೀರ್ಘ ಸಮಸ್ಯೆಗಳಿಗೆ ಕಾರಣವನ್ನು ಊರಿನವರು ತಂತ್ರಿಗಳಲ್ಲಿ ಪ್ರಶ್ನಿಸಿದಾಗ ಊರಿನಲ್ಲಿ ದೇವಾಲಯವಿದ್ದು, ಅದು ಪುನರ್‍ಪ್ರತಿಷ್ಠಾಪನೆಗೊಂಡರೆ ಊರಿನಲ್ಲಿ ಶಾಂತಿ ನೆಲೆಸುವುದಾಗಿ ತಿಳಿಸಿದ್ದಾರೆ. ಈ ಉದ್ದೇಶದೊಂದಿಗೆ ಶ್ರೀ ಮಹಾವಿಷ್ಣು ದೇವಾಲಯದ ಜೀರ್ಣೋದ್ಧಾರ ಕಾರ್ಯ ಊರಿನ ಧಾನಿಗಳ ಸಹಕಾರದಿಂದ ನಡೆಯುತ್ತಿದೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಏ.2 ರಂದು ಸೋಮವಾರಪೇಟೆ ತಾ.ಪಂ.ಕೆಡಿಪಿ ಸಭೆ*

ಮಾರ್ಚ್ 17, 2026

*ವಿರಾಜಪೇಟೆಯ ಮಲೆ ಮಹದೇಶ್ವರ ದೇವಾಲಯದ ವಾರ್ಷಿಕ ಉತ್ಸವ*

ಮಾರ್ಚ್ 17, 2026

*ಮಾ.15 ರಂದು ಮೂರ್ನಾಡು ಗೌಡ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ*

ಮಾರ್ಚ್ 17, 2026

*ವಿರಾಜಪೇಟೆಯ ಮಲೆ ಮಹದೇಶ್ವರ ದೇವಾಲಯದ ವಾರ್ಷಿಕ ಉತ್ಸವ*

ಮಾರ್ಚ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಮಾ.17 NEWS DESK : ವಿರಾಜಪೇಟೆ ಸಮೀಪದ ಪ್ರಕೃತಿಯ ಸೊಬಗಿನ ನಡುವೆ ‘ಮಳೆ ದೇವರು’ಎಂದು ಹೆಸರುವಾಸಿಯಾಗಿರುವ ಮಲೆ ಮಹದೇಶ್ವರ…

*ಮಾ.15 ರಂದು ಮೂರ್ನಾಡು ಗೌಡ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ*

ಮಾರ್ಚ್ 17, 2026

*ವಿರಾಜಪೇಟೆ ಶ್ರೀ ಮುತ್ತಪ್ಪ ದೇವಾಲಯದ ತೆರೆ ಮಹೋತ್ಸವಕ್ಕೆ ಚಾಲನೆ*

ಮಾರ್ಚ್ 17, 2026

*ಫಾಸ್ಟ್ ಪುಡ್(ಚಾಟ್ಸ್ ಸೆಂಟರ್) ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ*

ಮಾರ್ಚ್ 17, 2026

*ಕೋಟ್ಪಾ ಕಾಯ್ದೆ ಉಲ್ಲಂಘನೆ : 1800 ರೂ.ದಂಡ*

ಮಾರ್ಚ್ 17, 2026

*ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ*

ಮಾರ್ಚ್ 17, 2026

*ಅಡುಗೆ ಅನಿಲದ ಕೊರತೆ : ಕೇಂದ್ರ ವಿರುದ್ಧ ಕುಶಾಲನಗರದಲ್ಲಿ ಪ್ರತಿಭಟನೆ*

ಮಾರ್ಚ್ 17, 2026

*ಕನ್ನಡ ಸಾಹಿತ್ಯ ಸುದೀರ್ಘವಾದ ಕಾಲದಿಂದ ಜೀವಂತಿಕೆ ಉಳಿಸಿಕೊಂಡು ಬೆಳೆಯುತ್ತಿರುವ ಸಾಹಿತ್ಯ : ಪ್ರೊ.ಡಿ.ಕೆ.ಸರಸ್ವತಿ*

ಮಾರ್ಚ್ 17, 2026

*ಸೋಮವಾರಪೇಟೆ : ಹೋಟೆಲ್ ಹಾಗೂ ಬೇಕರಿಗಳಿಗೆ ಆಹಾರ ನಿರೀಕ್ಷಕರ ಭೇಟಿ*

ಮಾರ್ಚ್ 17, 2026

*ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನಕ್ಕೆ ಬೃಹತ್ ಗಾತ್ರದ ಸ್ಟೀಲ್ ಪಾತ್ರೆಯ ಕೊಡುಗೆ*

ಮಾರ್ಚ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.