
ಮಡಿಕೇರಿ ಜ.24 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಫೆ.27 ಹಾಗೂ 28 ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ‘ಕೊಡವ ಬಲ್ಯನಮ್ಮೆ’ಯನ್ನು ಆಯೋಜಿಸಲು ಸರ್ವ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಮ್ಮತ್ತಿ ಕೊಡವ ಸಮಾಜದ ಸಹಭಾಗಿತ್ವದಲ್ಲಿ ಅದ್ಧೂರಿಯ ಕೊಡವ ಬಲ್ಯ ನಮ್ಮೆಯನ್ನು ನಡೆಸುವಂತೆ ಒಕ್ಕೊರಲಿನ ತೀರ್ಮಾನ ತೆಗೆದುಕೊಳ್ಳಲಾಯಿತು. ಕೊಡವ ಬಲ್ಯ ನಮ್ಮೆಯ ಮೊದಲ ದಿನ ಸಾರ್ವತ್ರಿಕವಾಗಿ ಕೊಡವ ಸಾಂಸ್ಕøತಿಕ ಸ್ಪರ್ಧೆಗಳು ನಡೆಯಲಿದ್ದು, ಈ ಪ್ರಯುಕ್ತ ಉಮ್ಮತಾಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಕಪ್ಪೆಯಾಟ್, ದುಡಿಕೊಟ್ಟ್ ಪಾಟ್ (ದೇಶಕೆಟ್ಟ್ ಪಾಟ್ ಅಥವಾ ಕಾವೇರಿ ಪಾಟ್), ಪರೆಯಕಳಿ, ಸಮ್ಮಂಧ ಅಡ್ಕುವ, ವಾಲಗ ನುಡಿಸುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು. ಅಂತೆಯೇ ಸಾಹಿತ್ಯ ಪರ ಸ್ಪರ್ಧೆಗಳಾದ ಕವನ ಸ್ಪರ್ಧೆ, ಕೊಡವ ಪಾಟ್ ಸ್ಪರ್ಧೆ, ಕೊಡವ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಕೊಡವ ವಸ್ತು ಪ್ರದರ್ಶನ ಹಾಗೂ ಪೈಪೋಟಿಗೆ ಅವಕಾಶವನ್ನು ಬಲ್ಯನಮ್ಮೆಯಲ್ಲಿ ಕಲ್ಪಿಸಲಾಗಿದೆ. ವಸ್ತು ಪ್ರದರ್ಶನ ನೀಡುವವರು ತಮ್ಮ ತಮ್ಮಲ್ಲಿರುವ ಪ್ರಾಚ್ಯ ಕೊಡವ ಬಳಕೆಯ ವಸ್ತುಗಳನ್ನು ಬಲ್ಯ ನಮ್ಮೆಯ ವೇಳೆ ಪ್ರದರ್ಶನಕ್ಕಿಡಲು ಅವಕಾಶವಿದ್ದು ಬಹುಮಾನಗಳನ್ನು ನೀಡಲಾಗುವುದು. ಬಲ್ಯ ನಮ್ಮೆಯಲ್ಲಿ ವಿಶೇಷವೆಂಬಂತೆ ಪಾನಿಕೆಟ್ಟ್, ಕೋರೆಕೆಟ್ಟ್, ವಸ್ತ್ರಕೆಟ್ಟ್ಗಳ ಪೈಪೋಟಿಯಿದ್ದು ಆಸಕ್ತರು ಭಾಗವಹಿಸಬಹುದು. ಸಾರ್ವತ್ರಿಕವಾಗಿ ಕೊಡವ ಸಂಸ್ಕøತಿಯ ಬಗ್ಗೆ ವಿಶೇಷ ಪ್ರತಿಭೆಯುಳ್ಳವರಿಗೆ ಬಲ್ಯನಮ್ಮೆಯಲ್ಲಿ ತಮ್ಮ ತಮ್ಮ ಸಾಂಸ್ಕøತಿಕ ಪ್ರತಿಭೆಗಳನ್ನು ಅನಾವರಣ ಮಾಡಲು ವೇದಿಕೆ ಕಲ್ಪಿಸಲಾಗುವುದು. ಅಂತಹವರು ತಮ್ಮ ಹೆಸರನ್ನು ವಿವರಗಳೊಂದಿಗೆ ಅಕಾಡೆಮಿ ಕಚೇರಿಗೆ 8762942976 ಮೂಲಕ ತ್ವರಿತವಾಗಿ ನೋಂದಾಯಿಸಿ ಕೊಳ್ಳಬಹುದಾಗಿದೆ. ಬಲ್ಯನಮ್ಮೆಯ ಎರಡನೇ ದಿನ ಬೆಳಗ್ಗೆ ಅಮ್ಮತ್ತಿ ಪಟ್ಟಣದಲ್ಲಿ ಅದ್ಧೂರಿಯ ಕೊಡವ ಸಾಂಸ್ಕøತಿಕ ಮೆರವಣಿಗೆಯನ್ನು ಏರ್ಪಡಿಸಲಾಗುವುದು. ‘ಕರ್ನಾಟಕ-50’ ರ ಸಂಭ್ರಮದ ಪ್ರಯುಕ್ತ ಕನ್ನಡ ಭುವನೇಶ್ವರಿಯ ಬಾವುಟವನ್ನು ಹಾರಿಸಿ ತದನಂತರ ಬಲ್ಯನಮ್ಮೆಯನ್ನು ಉದ್ಘಾಟಿಸಲಾಗುವುದು. ಮಧ್ಯಾಹ್ನದವರೆಗೆ ಹಿಂದಿನ ದಿನ ಪೈಪೋಟಿಯಲ್ಲಿ ವಿಜೇತರಾದ ತಂಡಗಳಲ್ಲಿ ಪ್ರಥಮ ಸ್ಥಾನ ಪಡೆದಿರುವವರಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಮಧ್ಯಾಹ್ನದ ನಂತರ ನಡೆಯುವ ಕಾರ್ಯಕ್ರಮವು ಮಹತ್ವದಾಗಿದ್ದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರು, ಜಿಲ್ಲೆಯ ಶಾಸಕರು, ಸಂಸದರುಗಳು ಆಗಮಿಸುವರು. ವೇದಿಕೆಯಲ್ಲಿ 2022-23 ಹಾಗೂ 2023-24ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿಗಳನ್ನು ಸಚಿವರಿಂದ ಪ್ರಧಾನ ಮಾಡಿಸಿ ಗೌರವಿಸಲಾಗುವುದು. ಅರ್ಹ ಕಲಾವಿದರುಗಳಿಗೆ ಹಾಗೂ ಐನ್ಮನೆ, ದೇವಸ್ಥಾನ, ಸಂಘ-ಸಂಸ್ಥೆ, ಸಮಾಜಗಳಿಗೆ ವಾದ್ಯ ಪರಿಕರಗಳನ್ನು ನೀಡಲಾಗುವುದು. ವೇದಿಕೆಗೆ ಕೊಡವ ಜನಾಂಗ ಹಾಗೂ ಭಾಷಿಕ ಜನಾಂಗದ ಮೇರು ವ್ಯಕ್ತಿಗಳನ್ನು ಆಹ್ವಾನಿಸಲಾಗುವುದು. ಬಲ್ಯನಮ್ಮೆಯ ಎರಡು ದಿನಗಳು ಊಟದ ವ್ಯವಸ್ಥೆ, ನೀರಿನ ಸಿದ್ಧತೆಗಳೊಂದಿಗೆ ನಡೆಸಲಾಗುವುದುದೆಂದು ಅಕಾಡೆಮಿಯ ಸರ್ವ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಸದಸ್ಯರುಗಳಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಪೊನ್ನಿರ ಯು. ಗಗನ್, ಕುಡಿಯರ ಕಾವೇರಪ್ಪ, ನಾಯಂದಿರ ಆರ್. ಶಿವಾಜಿ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ ಎ. ಸಂಜು ಕಾವೇರಪ್ಪ, ನಾಪಂಡ ಸಿ. ಗಣೇಶ್, ರಿಜಿಸ್ಟ್ರಾರ್ ಚಿನ್ನಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರುಗಳಾದ ಕುಮಾರ ಹಾಜರಿದ್ದರು.









