

ಮಡಿಕೇರಿ ಫೆ.18 NEWS DESK : ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ಪೋ 2025 ರ 2 ನೇ ಆವೃತ್ತಿಯು ಫೆಬ್ರವರಿ 26 ರಿಂದ 28 ರ ವರೆಗೆ ಬೆಂಗಳೂರು ಇಂಟನ್ರ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಆಯೋಜಿಸಲಾಗಿದೆ. ಈ ಪ್ರತಿಷ್ಠಿತ ಕಾರ್ಯಕ್ರಮವು ರಾಜ್ಯದ ಪ್ರವಾಸೋದ್ಯಮ ವಲಯವನ್ನು ಪ್ರದರ್ಶಿಸಲು, ವ್ಯಾಪಾರ ಅವಕಾಶ ಆಕರ್ಷಿಸಲು ಮತ್ತು ಪ್ರಮುಖ ಜಾಗತಿಕ ಪ್ರಯಾಣ ತಾಣವಾಗಿ ಕರ್ನಾಟಕದ ಸ್ಥಾನ ಬಲಪಡಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ಪೋ 2025 ಪ್ರವಾಸೋದ್ಯಮದ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುತ್ತದೆ, ಇದು ಜಗತ್ತಿನಾದ್ಯಂತದ ಪ್ರಯಾಣ ಮತ್ತು ವ್ಯಾಪಾರ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಒಂದು ಅನನ್ಯ ಅವಕಾಶ ನೀಡುತ್ತದೆ.
ಕಾರ್ಯಕ್ರಮದ ಮುಖ್ಯಾಂಶಗಳು: ಭಾರತ ಮತ್ತು 30 ಕ್ಕೂ ಹೆಚ್ಚು ದೇಶಗಳಿಂದ 400 ಕ್ಕೂ ಹೆಚ್ಚು ಅತಿಥೇಯ ಖರೀದಿದಾರರು, ದೇಶದಲ್ಲಿ ಇದುವರೆಗಿನ ಅತಿದೊಡ್ಡ ಬಿ2ಬಿ ಇನ್ ಬೌಂಡ್ ಮತ್ತು ದೇಶೀಯ ಬಿ2ಬಿ ಟ್ರಾವೆಲ್ ಈವೆಂಟ್ ಕಾರ್ಯಕ್ರಮ. ಆನ್ಲೈನ್ ಅಪಾಯಿಂಟ್ಮೆಂಟ್ ಬಿ2ಬಿ ವ್ಯವಸ್ಥೆ (ತಲಾ 20 ನಿಮಿಷಗಳು)ಸ್ಥಳೀಯ ರೆಸಾಟ್ಗಳು, ಪ್ರಯಾಣ ನಿರ್ವಾಹಕರು, ಹೋಟೆಲ್ ಉದ್ಯಮಿ ಮತ್ತು ಇತರ ಉದ್ಯಮ ಪ್ರತಿನಿಧಿಗಳು ಕೊಡಗು ಜಿಲ್ಲೆಯ ಶ್ರೀಮಂತ ಮತ್ತು ವೈವಿಧ್ಯಮಯ ಪ್ರವಾಸೋದ್ಯಮ ಕೊಡುಗೆಗಳನ್ನು ಪ್ರದರ್ಶಿಸಲು ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ಪೋ 2025 ರಲ್ಲಿ ಸಕ್ರಿಯವಾಗಿ ಭಾಗವಹಿಸಲು ವಿನಂತಿಸಲಾಗಿದೆ. ಇದಲ್ಲದೆ, ಕೊಡಗು ಜಿಲ್ಲೆಯ ಪಾಲುದಾರರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಸಾಂಸ್ಕøತಿಕ, ಪರಂಪರೆ, ಭೋಜನಶಾಸ್ತ್ರ ಮತ್ತು ಇತರೆ ಪ್ರವಾಸೋದ್ಯಮ ಉತ್ಪನ್ನಗಳನ್ನು ದೇಶಿಯ ಹಾಗೂ ಜಾಗತಿಕ ಟೂರ್ ಅಂಡ್ ಟ್ರಾವೆಲ್ ಸಮುದಾಯಕ್ಕೆ ಪರಿಚಯಿಸಬಹುದಾಗಿದ್ದು, ಅದರಂತೆ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ಪೋ 2025 ರಲ್ಲಿ ಮಳಿಗೆಗಳನ್ನು ಪಡೆದು ಭಾಗವಹಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗೆ ರಾಜ್ಯ ಅಂತರರಾಷ್ಟ್ರೀಯ ಪ್ರಯಾಣ ಪ್ರದರ್ಶನದ ವೆಬ್ಸೈಟ್ : https://www.karnatakatravelexpo.org ಗೆ ಲಾಗಿನ್ ಆಗುವುದು ಮತ್ತು ಜಂಟಿ ನಿರ್ದೇಶಕರು (ಪಬ್ಲಿಸಿಟಿ ಮತ್ತು ಪ್ರಮೋಷನ್) ಜನಾರ್ದನ್ ಎಚ್ ಪಿ ಅವರನ್ನು ಸಂಪರ್ಕಿಸಬಹುದು. ದೂರವಾಣಿ: 9611921927, ಅಥವಾ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ ಕೊಡಗು ಜಿಲ್ಲೆ- 571201 ದೂರವಾಣಿ: 08272-200519 ಅವರನ್ನು ಸಂಪರ್ಕಿಸಿ. ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ಪೋ 2025 ರಲ್ಲಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ಆಸಕ್ತ ಪ್ರವಾಸೋದ್ಯಮ ಪಾಲುದಾರರು, ಸ್ಥಳೀಯ ರೆಸಾರ್ಟ್ ಮಾಲೀಕರು, ಟ್ರಾವೆಲ್, ಅಪರೇಟರ್ಸ್, ಹೋಟೆಲ್ ಮಾಲೀಕರು ಹಾಗೂ ಇತರ ಉದ್ಯಮದಾರರು ಈ ಕೂಡಲೇ ಮಳಿಗೆಗಳನ್ನು ಪಡೆದುಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ ಅವರು ತಿಳಿಸಿದ್ದಾರೆ.









