
ಸುಂಟಿಕೊಪ್ಪ ಫೆ.25 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಾಕಾವೇರಿ ಜ್ಞಾನ ವಿಕಾಸ ಹಾಗೂ ಕಾನ್ಬೈಲ್ ಜನನಿ ಸ್ವಸಹಾಯ ಸಂಘದ ಸಂಯುಕ್ತಾಶ್ರಯದಲ್ಲಿ ಸಂಘದ ಸದಸ್ಯರುಗಳಿಗೆ ಇಡುವಳಿ ಯೋಜನೆ, ಸಂಪೂರ್ಣ ಸುರಕ್ಷಾ ಆರ್ಬಿಐ ವಿಚಾರದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಕಾನ್ಬೈಲ್ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಸೇವಾ ಪ್ರತಿನಿಧಿ ಯಶೋಧ ಉದ್ಘಾಟಿಸಿ ಮಾತನಾಡಿ, ಇಡುವಳಿ ಯೋಜನೆಯನ್ನು ತಮ್ಮ ಅಭ್ಯುದಯಕ್ಕೆ ಕಾಲಕಾಲಕ್ಕೆ ಸದಸ್ಯರು ಸರಿಯಾಗಿ ತಮ್ಮ ಅಭ್ಯುದಯವನ್ನು ಬಳಸಿಕೊಳ್ಳಬಹುದಾಗಿದೆ. ಅಲ್ಲದೇ ಕುಟುಂಬದ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂದರು. ಸಂಪೂರ್ಣ ಸುರಕ್ಷಾ ಯೋಜನೆಯು ಬಡವರಿಗಾಗಿ ಇದರಿಂದ ನೀವು ನಿಮ್ಮ ಕುಟುಂಬದ ಸದಸ್ಯರು ಯಾವುದೇ ರೀತಿಯ ಅನಾರೋಗ್ಯಗಳಿಗೆ ತುತ್ತಾದಲ್ಲಿ ನಿರ್ಭಿತಿ ಚಿಕಿತ್ಸೆ ಪಡೆದು ಗುಣಮುಖ ಹೊಂದಿಕೊಳ್ಳಲು ಜಾರಿಗೆ ತಂದಿದ್ದು ಪ್ರತಿಯೊಬ್ಬ ಸದಸ್ಯರು ಇದರ ಫಲಾನುಭವಿಗಳಾಗುವ ಮೂಲಕ ಸದುಪಯೋಗ ಹೊಂದಿಕೊಳ್ಳುವಂತೆ ಕರೆ ನೀಡಿದರು. ಹಣಕಾಸು ಹೂಡಿಕೆ ಮತ್ತು ಸಾಲಗಳನ್ನು ಪಡೆಯುವಾಗ ಆರ್ಬಿಐ ನಿಯಮಗಳ ಕುರಿತು ಮಾಹಿತಿಯನ್ನು ಸಂಘದ ಸದಸ್ಯರಿಗೆ ನೀಡಿದರು. ಕಾರ್ಯಾಗಾರದಲ್ಲಿ ಜನನಿ, ಭೂಮಿಕಾ, ಶ್ರೀನಿಧಿ, ಕನ್ನಿಕಾ, ಭಗವತಿ ಹಾಗೂ ಧೃತಿ ಸ್ವ ಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದರು.









