
ಸುಂಟಿಕೊಪ್ಪ ಫೆ.25 NEWS DESK : ಕಲೆ ಮತ್ತು ಕ್ರೀಡೆಗೆ ಪರಸ್ಪರ ಬಾಂಧವ್ಯ ಮತ್ತು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಅದ್ಬುತ ಶಕ್ತಿಯಿದೆ ಎಂದು ಸೋಮವಾರಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಳ್ಳಿ ಹಬ್ಬದ ಅಂಗವಾಗಿ ನಾಕೂರು ಶಿರಂಗಾಲದ ಕಾನ್ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ಕಾನ್ಬೈಲ್ ಶಾಲಾ ಆವರಣದಲ್ಲಿ ನಡೆದ ಬೆಳ್ಳಿಹಬ್ಬ ಮತ್ತು ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಯುವ ಸಂಘಕ್ಕೆ 25 ವರ್ಷಗಳ ಇತಿಹಾಸವಿದ್ದು ಅದರ ಪರಿಣಾಮವೇ ಜಾತಿ, ಜನಾಂಗ, ರಾಜಕೀಯ ಮೀರಿದ ಈ ಕ್ರೀಡೋತ್ಸವ ಎಂದು ಬಣ್ಣಿಸಿದರು. ಕ್ರೀಡೋತ್ಸೋವ ಮತ್ತು ಯುವ ಸಂಘದ ಇತಿಹಾಸದಲ್ಲಿ 2 ತಲೆಮಾರುಗಳ ಕ್ಷಮವನ್ನು ಕಾಣಬಹುದಾಗಿದೆ. ಪ್ರೆಂಡ್ಸ್ ಯೂತ್ ಕ್ಲಬ್ ಮುಂದೆ ಸುವರ್ಣಮಹೋತ್ಸವ ವಜ್ರಮಹೋತ್ಸವ ಮತ್ತು ಅಮೃತಮಹೋತ್ಸವಗಳನ್ನು ದಾಟಿ ಶತಮನೋತ್ಸವ ಆಚರಿಸಲೆಂದು ಹಾರೈಸಿದರು. ನಾಕೂರಿನ ಪ್ರೆಂಡ್ಸ್ ಯೂತ್ಕ್ಲಬ್ ಕ್ರೀಡಾಕೂಟದ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದು, ಎಲ್ಲಾರನ್ನು ಒಳಗೊಳ್ಳುವ ಮನುಷ್ಯ ಪ್ರೀತಿಯ ಸಮಾಜವನ್ನು ನಿರ್ಮಿಸುತ್ತಿರುವ ನಾಯಕರನ್ನು ರೂಪಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಕೂರು ಶಿರಂಗಾಲ ಗ್ರಾ.ಪಂ.ಅಧ್ಯಕ್ಷ ಮಂದೋಡಿ ಜಗನ್ನಾಥ್, ಪ್ರೆಂಡ್ಸ್ ಯೂತ್ ಕ್ಲಬ್ ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಬೆಳ್ಳಿ ಹಬ್ಬದ ತಯಾರಿಗೆ ಕ್ಲಬಿನ ಪದಾಧಿಕಾರಿಗಳು ಮತ್ತು ಗ್ರಾಮಸ್ಥರ ಕೊಡುಗೆ ಶ್ರಮ ಅಪಾರವಾದದ್ದು, ವಿದ್ಯೆಯಿಂದ ಮಾತ್ರವಲ್ಲದೆ ಕ್ರೀಡೆಯಿಂದ ಕೂಡ ಉತ್ತಮ ಉದ್ಯೋಗ ಉನ್ನತ ಪದವಿಗಳನ್ನು ಪಡೆಯಬಹುದು. ಕ್ರೀಡೆ ನಮ್ಮನ್ನು ಜೀವನ ಪರ್ಯಾಂತ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಎಂದು ಅವರು ಬಣ್ಣಿಸಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಜಿ.ಮಾತನಾಡಿ ನಮ್ಮಲ್ಲಿ ವಿಶ್ವ ಮಟ್ಟದ ತರಬೇತಿ ಪ್ರೋತ್ಸಾಹದ ಕೊರತೆ ಕಾರಣವಾಗಿದೆ ಎಂದು ವಿಷಾಧಿಸಿದರು. ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಸ್ಪರ್ಧೆ ಮುಖ್ಯ. ಹೆಚ್ಚು ಸುಂಸ್ಕøತರಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೇವೆ ಎಂಬುದು ಮುಖ್ಯವಾಗಬೇಕೆಂದು ಅವರು ಕಿವಿಮಾತು ಹೇಳಿದರು. ಸಮಾರೋಪ ಸಮಾರಂಭವನ್ನು ಸೌತ್ ಇಂಡಿಯಾ ಕಾಫಿ ಕಂ, ನಾಕೂರು ಮೂಲೆಮನೆ ಕೋಮಲ್ ಸಾಬ್ಲೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಕ್ಷಯ್ ದಶರಥ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಹೆರೂರು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಗೌತಮ್, ಗ್ರಾ.ಪಂ.ಉಪಾಧ್ಯಕ್ಷ ಬಿ.ಇ.ಸತೀಶ್, ಸದಸ್ಯರುಗಳಾದ ಅರುಣಾ ಕುಮಾರಿ ಪ್ರಕಾಶ್, ರಾಧಮಣಿ, ಸೀತೆ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಬಸಪ್ಪ, ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣರೈ, ಹಾರಂಗಿ ಕಾವೇರಿ ಮಿನುಗಾರರ ಸಂಘದ ಅಧ್ಯಕ್ಷ ಮಹಮ್ಮದ್,ಕಾಫಿ ಬೆಳೆಗಾರರುಗಳಾದ ಕೆ.ಎಂ.ನಂಜಪ್ಪ,ಅಡಿಕೇರಿ ಧರ್ಮಪ್ಪ, ಪಿ.ಎಂ.ಈರಪ್ಪ, ಎ.ಆರ್.ಪಾಪ್ಪಣ್ಣ, ಆದಂ,ಕಾರ್ಮಿಕರ ಸಂಘದ ಅಧ್ಯಕ್ಷ ಕುಮಾರ, ಬಿ.ಜಿ.ನರೇಂದ್ರ, ಪಿ.ಜಿ.ಹೆಗ್ಡೆ, ಪ್ರೆಂಡ್ಸ್ ಯೂತ್ ಅಧ್ಯಕ್ಷ ಶಂಕರನಾರಾಯಣ,ಪಿ.ಟಿ.ಪೌಲೊಸ್, ಮಾಜಿ ಅಧ್ಯಕ್ಷ ಪಿ.ಎಸ್.ಅಜಿತ್, ಗೌರವಧ್ಯಕ್ಷ ವಸಂತ್ ಬಿ.ಎ., ಖಜಾಂಚಿ ಕೆ.ಎಸ್.ವಿನೋದ್, ಕೆ.ಎಂ.ವಿನೇಶ್, ಟಿ.ಚಂದ್ರಶೇಖರ್, ಸಂಘನಾಕಾರ್ಯದರ್ಶಿ ಸಂತೋಷ್ ಬಿ.ವಿ., ಸೇರಿದಂತೆ ಮತ್ತಿತರರು ಇದ್ದರು. ಬೆಳ್ಳಿ ಮಹೋತ್ಸವದ ಅಂಗವಾಗಿ ತಾ.22 ರಂದು ಕಾನ್ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸ್ಥಳೀಯರಿಗೆ ವಿವಿಧ ಗ್ರಾಮೀಣಾ ಕ್ರೀಡಾಕೂಟಗಳನ್ನು ಆಯೋಜಿಸಲಾದ ಸ್ಥಳೀಯ ಪರುಷರಿಗೆ ಕಬಡ್ಡಿ ಪಂದ್ಯಾವಳಿ, ಮಕ್ಕಳ ಕಬಡ್ಡಿ (ಪ್ರಾಥಮಿಕ ಶಾಲಾ ವಿಭಾಗ ಮತ್ತು ಪ್ರೌಢಶಾಲಾ ವಿಭಾಗ) ಪಂದ್ಯಾವಳಿ, ಸ್ಥಳೀಯ ಪುರುಷ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ, ಹಾಗೂ ಮಕ್ಕಳಿಗೆ ಕಾಳು ಹೆಕ್ಕುವುದು (5ವರ್ಷಗೊಳಪಟ್ಟು), ಕಪ್ಪೆ ಜಿಗಿತ, ಗೋಣಿಚೀಲ ಜಿಗಿತ (1ರಿಂದ7ನೇತರಗತಿ ಮಕ್ಕಳಿಗೆ ಮಾತ್ರ)ವಿವಿಧ ಗ್ರಾಮೀಣ ಕ್ರೀಡಾಕೂಟಗಳನ್ನು ಸ್ಥಳೀಯ ಪುರುಷರಿಗೆ ಮತ್ತು ಮಹಿಳೆಯರಿಗೆ ಇತರೆ ಕ್ರೀಡಾಕೂಟಗಳನ್ನು ನಡೆಸಲಾಯಿತು.









