
ವಿರಾಜಪೇಟೆ ಮಾ.1 NEWS DESK : ವಿರಾಜಪೇಟೆ ಚಿಕ್ಕಪೇಟೆಯ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಶಾಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಹೆಚ್.ಎಂ.ಗೌರಿ ಅವರನ್ನು ಬ್ಯಾಂಕ್ ನ ಸಿಬ್ಬಂದಿಗಳು ಆತ್ಮೀಯವಾಗಿ ಬೀಳ್ಕೊಟ್ಟರು. ಬ್ಯಾಂಕ್ ಶಾಖೆ ಸಭಾಂಗಣದಲ್ಲಿ ಗೌರಿ ಅವರನ್ನು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹಾಸನ ವಿಭಾಗದ ಹಾಗೂ ಕೊಡಗು ವಲಯದ ಸಹ ಕಾರ್ಯದರ್ಶಿ ಜೇಮ್ಸ್ ಮೆನೆಜಸ್ ಹಾಜರಿದ್ದರು.









