
ಸೋಮವಾರಪೇಟೆ NEWS DESK ಮೇ 14 : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿರುವ ಕೊಡಗು ಗೌಡ ಕುಟುಂಬಗಳ ನಡುವಣ ಫುಟ್ಬಾಲ್ ಪಂದ್ಯಾವಳಿಯ ಆಕರ್ಷಕ ಟ್ರೋಫಿಗಳನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿ ಬಿಡುಗಡೆಗೊಳಿಸಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿ ಎರಡು ವರ್ಷಗಳಾದ ಹಿನ್ನೆಲೆಯಲ್ಲಿ ಡಾ. ಮಂಥರ್ ಗೌಡ ಅವರನ್ನು ಸನ್ಮಾನಿಸಲು ಅವರು ಸೋಮವಾರಪೇಟೆಯ ಶಾಸಕರ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭ ಗೌಡ ಪುಟ್ಬಾಲ್ ಅಕಾಡೆಮಿ ಸದಸ್ಯರು ತಂದಿದ್ದ ಟ್ರೋಫಿಗಳನ್ನು ಶ್ರೀಗಳು ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭ ಶಾಸಕ ಮಂತರ್ ಗೌಡ ಗೌಡ ಪುಟ್ಬಾಲ್ ಅಕಾಡೆಮಿ ಪದಾಧಿಕಾರಿಗಳಾದ ಬೊಳ್ಳೂರು ರೋಷನ್, ದೇವಜನ ಪುನೀತ್, ಅಯ್ಯಂಡ್ರ ರಾಕೇಶ್, ಪಾರೇರ ಚೇತನ್, ಗಗನ್ ಬೊಳ್ಳೂರು, ಪರಿಚನ ವಿಘ್ನೇಶ್, ಕೋಲನ ಸುತನ್ ಹಾಜರಿದ್ದರು.








