
ಮಡಿಕೇರಿ ಮೇ 16 NEWS DESK : ಹೆಬ್ಬಾಲೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಸಂಭ್ರಮದಿಂದ ನಡೆಯಿತು. ಭೀಮ ರಥೋತ್ಸವವನ್ನು ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಗಳನ್ನು ಜನರಿಗೆ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶ ಕಂಡ ಅಪ್ರತಿಮ ನಾಯಕ. ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ ಎಲ್ಲಾ ಜಾತಿಯ ಜನರು ಗೌರವಿಸುವಂತಾಗಬೇಕು ಎಂದರು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ಡಾ. ಜೆ.ಸೋಮಣ್ಣ, ಬಹುಜನರ ನಾಯಕ ಡಾ. ಬಿ.ಆರ್.ಅಂಬೇಡ್ಕರ್ ಅವರು ಬಾಲ್ಯದಿಂದಲೂ ಅನೇಕ ಕಷ್ಟಗಳನ್ನು ಅನುಭವಿಸುವ ಮೂಲಕ ತಮ್ಮ ಜನಕ್ಕೆ ಆಗುತ್ತಿದ್ದ ದೌರ್ಜನ್ಯ ದಬ್ಬಾಳಿಕೆ ಕಣ್ಣಿಂದಲೇ ನೋಡಿದರು. ತಾನು ಕೂಡ ಅನುಭವಿಸಿದರು ಶಾಲೆಯಲ್ಲಿ ಓದುವಾಗ ಹೊರಗಡೆ ಕೂತು ಪಾಠ ಕೇಳುತ್ತಿದ್ದರು ಈ ತಾರತಮ್ಯವನ್ನು ಪಣತೊಟ್ಟು ಪೋಷಿತ ಸಮುದಾಯಗಳಿಗೆ ಸಮಾನ ಹಕ್ಕುಗಳನ್ನು ಕೊಡಿಸುವ ಮೂಲಕ ಸಮಾಜದಲ್ಲಿ ಎಲ್ಲರಂತೆ ಸಮಾನವಾಗಿ ಬದುಕಲು ಭಾರತದ ಸಂವಿಧಾನದಲ್ಲಿ ಮೀಸಲಾತಿಯನ್ನು ಕೊಡುವ ಮೂಲಕ ಎಲ್ಲರಿಗೂ ನ್ಯಾಯವನ್ನು ಕೊಡಿಸಿದರು. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಸಮಾನವಾಗಿ ಬದುಕುವ ಹಕ್ಕನ್ನು ಕೊಡಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಎಲ್ಲಾ ಸಮುದಾಯ ಮಂದಿ ಗೌರವಿಸುವಂತಾಗಬೇಕು ಎಂದು ಜೆ.ಸೋಮಣ್ಣ ಹೇಳಿದರು. ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರು ಬಾಲ್ಯದಿಂದಲೂ ಅನೇಕ ರೀತಿಯ ಶೋಷಣೆಗೆ ಒಳಗಾಗಿ ವಿದೇಶದಲ್ಲಿ ಓದಿ ವಿಶ್ವದ ನಂಬರ್ ಒನ್ ವಿದ್ಯಾರ್ಥಿಯಾಗಿ ಉನ್ನತ ಶಿಕ್ಷಣವನ್ನು ಪಡೆದು ವಿದೇಶದಲ್ಲಿ ಉಳಿಯದೆ ಸ್ವದೇಶಕ್ಕೆ ಬಂದು ಎಲ್ಲ ವರ್ಗದ ಜನರಿಗೆ ಉತ್ತಮವಾದ ಸಂವಿಧಾನವನ್ನು ಬರೆದು ಕೊಟ್ಟು ದೇಶ ಕಂಡ ಅಪ್ರತಿಮ ನಾಯಕ ಎಂದು ಹೋಗಳುವಂತೆ ನಡೆದುಕೊಂಡರು. ಅವರ ಆದರ್ಶ ಗುಣಗಳನ್ನು ತಾವೆಲ್ಲರೂ ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದು ಶಶಿಧರ್ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಿರಣ್ ಕುಮಾರ್ ಮುಂದಿನ ದಿನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ವಿಜೃಂಭಣೆಯಿಂದ ಮಾಡುವುದಾಗಿ ತಿಳಿಸಿದರು. ಬುದ್ಧ, ಬಸವ, ಅಂಬೇಡ್ಕರ್ ಅವರ ಮಾರ್ಗದರ್ಶನವನ್ನು ಇಟ್ಟುಕೊಂಡು ಉತ್ತಮ ಬಾಂಧವ್ಯವನ್ನು ಬಳಸಿಕೊಂಡು ಹೋಗುತ್ತೇವೆ ಎಂದು ಕಿರಣ್ ಕುಮಾರ್ ಹೇಳಿದರು. ಜೈ ಭೀಮ್ ಯುವಕ ಸಂಘದ ಪ್ರಮುಖ ಹೆಚ್.ಆರ್.ಸಚಿನ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮೆಲ್ಲರ ಆಶಾಕಿರಣ. ಶೋಷಿತ ಸಮುದಾಯಗಳ ಏಳಿಗೆಗಾಗಿ ತಮ್ಮ ಬದುಕಿನ ಉದ್ದಕ್ಕೂ ಕಷ್ಟಗಳನ್ನು ಅನುಭವಿಸಿ ನಮ್ಮೆಲ್ಲರಿಗೂ ಸುಖದಿಂದ ಬದುಕಲು ದಾರಿದೀಪವಾಗಿದ್ದಾರೆ ಎಂದು ಸಚಿನ್ ಹೇಳಿದರು. ಕದಸಂಸ ಭೀಮವಾದ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ.ರಾಜು ಮಾತನಾಡಿ, ಶತಮಾನಗಳಿಂದ ತುಳಿತಕ್ಕೆ ಒಳಗಾದ ಜನರಿಗೆ ಬದುಕನ್ನು ಕಟ್ಟಿಕೊಟ್ಟ ಭಾರತ ರತ್ನ ವಿಶ್ವ ರತ್ನ ಡಾ. ಬಿಆರ್ ಅಂಬೇಡ್ಕರ್, ಈ ದೇಶ ಕಂಡ ಅಪ್ರತಿಮ ನಾಯಕ 32 ಪದವಿಯನ್ನು ಪಡೆದು 60,000 ಪುಸ್ತಕಗಳನ್ನು ಮನೆಯಲ್ಲಿ ಇಟ್ಟುಕೊಂಡು ಸಮಾನ ಹಕ್ಕನ್ನು ಕೊಡಿಸುವ ಮೂಲಕ ಸಮಾಜದಲ್ಲಿ ನನ್ನಂತೆ ಬಾಳಿ ಸ್ವಾಭಿಮಾನಿಗಳಾಗಿ ಎಂದು ಡಾ.ಬಿ.ಆರ್.ಭೀಮರಾವ್ ಅಂಬೇಡ್ಕರ್ ಕರೆ ನೀಡಿದ್ದು, ಎಲ್ಲರೂ ಅವರ ಆದರ್ಶಗಳನ್ನು ಪಾಲಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ರಂಜನ್ ಕುಶಾಲನಗರ, ಹಸಿರು ಸೇನೆಯ ಶರತ್ ಕುಮಾರ್, ಸಂತೋಷ್ ಮಾತನಾಡಿದರು. ಹೆಬ್ಬಾಲೆ ಗ್ರಾ.ಪಂ ಅಧ್ಯಕ್ಷ ಅಣ್ಣಯ್ಯ ಅರುಣ್, ಕೆಪಿಸಿಸಿ ಸಂಯೋಜಕರಾದ ನಟೇಶ್ ಗೌಡ, ರಾಜಶೇಖರ್ ಹೆಬ್ಬಾಲೆ, ಮಂಜುನಾಥ್, ಬಾಬು, ಮಿಥುನ್ ಗೌಡ, ಶೇಖರ್, ಪ್ರಜ್ವಲ್, ಲೋಕೇಶ್, ರವಿ, ಚೇತನ್, ಸಚಿನ್, ಲೋಕೇಶ್, ಗಣೇಶ್ ಹಾಗೂ ಅನೇಕ ಹೋರಾಟಗಾರರು ಭಾಗವಹಿಸಿದರು. ವೆಂಕಟ್ ನಾಯಕ್ ಸ್ವಾಗತಿಸಿ, ವಂದಿಸಿದರು. ವೇದಿಕೆಯಲ್ಲಿ ಹಾಜರಾಗಿದ್ದ ಅತಿಥಿಗಳನ್ನು ಸನ್ಮಾನಿಸಲಾಯಿತು.
ವರದಿ : ಕೆ.ಬಿ.ರಾಜು









