
ಮಡಿಕೇರಿ ಮೇ 17 NEWS DESK : ನಗರದ ಮಹಾಬೋಧಿ ಪತ್ತಿನ ಸಹಕಾರ ಸಂಘದ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ನಗರದ ಕಾಫಿಕೃಪಾ ಕಟ್ಟಡದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷರಾದ ಎಸ್. ಸಿ. ಸತೀಶ್, ಅಂಬೇಡ್ಕರ್ ಅವರ ಜೀವನ ಚರಿತ್ರೆ, ಅವರು ಅನುಭವಿಸಿದ ಕಷ್ಟ, ದಲಿತರ ಏಳಿಗೆಗೆ ಕೈಗೊಂಡ ಕಾರ್ಯ, ಸಂವಿಧಾನ ರಚನೆಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಎಸ್.ಗಣಪತಿ, ನಿರ್ದೇಶಕರಾದ ಹೆಚ್.ಎಸ್ ಪ್ರತಾಪ್, ಜಯಪ್ಪ ಹಾನಗಲ್, ಶಾರದ ನಾಗರಾಜ್, ಗೀತಾ ಜನಾರ್ಧನ್, ಗಾಯತ್ರಿ ನರಸಿಂಹ, ರಾಜು, ದೇವಕಿ ಉಪಸ್ಥಿತರಿದ್ದರು.










