
ಗೋಣಿಕೊಪ್ಪ NEWS DESK ಅ.1 (ಜಗದೀಶ್ ಜೋಡುಬೀಟಿ) : ಗೋಣಿಕೊಪ್ಪ ದಸರಾದ ಕಾವೇರಿ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳು ಸಂಭ್ರಮಿಸಿದವು. ಸೈಕ್ಲೋನ್ ಡ್ಯಾನ್ಸ್ ಅಕಾಡೆಮಿ, ಸುವೃತ ನಾಟ್ಯಾಲಯ, ವಿಧ್ಯಾರ್ಥಿಗಳ ನೃತ್ಯ, ಗಾಯಕರುಗಳಾದ ಅನ್ವಿತ್ಕುಮಾರ್, ಪ್ರಜ್ಞಾ ಮರಾಠೆ ಇವರ ಹಾಡು ವೈವಿಧ್ಯಮಯ ಭಾವನೆಗಳಿಂದ ಗಮನ ಸೆಳೆಯಿತು. ಎರಡು ಸಹಸ್ರಕ್ಕೂ ಹೆಚ್ಚು ಜನರ ಉಪಸ್ಥಿತಿಯಲ್ಲಿ ವೇದಿಕೆಯಲ್ಲಿ 260ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ನಡೆದ ನೃತ್ಯ, ಗಾಯನ ಕಲಾ ಸಾಮರ್ಥ್ಯ ಪ್ರದರ್ಶನ ಪ್ರೇಕ್ಷಕರನ್ನು ಮುಧಗೊಳಿಸುವಲ್ಲಿ ಸಾರ್ಥಕತೆ ಖಂಡಿತು. ಸೈಕ್ಲೋನ್ ಡ್ಯಾನ್ಸ್ ಅಕಾಡೆಮಿ ವಿಧ್ಯಾರ್ಥಿಗಳ ವಿವಿಧ ನೃತ್ಯ ಪ್ರದರ್ಶನಗಳಿಂದ ಭಾವನಾತ್ಮಕ ಮತ್ತು ಕಲಾತ್ಮಕ ಅನುಭವಗಳನ್ನು ಪ್ರೇಕ್ಷಕರಿಗೆ ನೀಡಿದರು. ಸುವೃತ ನಾಟ್ಯಾಲಯದ ಮಕ್ಕಳ ಸ್ಪಂದನಾತ್ಮಕ ನೃತ್ಯದ ದೃಶ್ಯಗಳು ಪ್ರೇಕ್ಷಕರಲ್ಲಿ ಹೊಸ ಆಲೋಚನೆಗಳನ್ನು ಮೂಡಿಸಿದವು. ಅನ್ವಿತ್ಕುಮಾರ್ ಮತ್ತು ಪ್ರಜ್ಞಾ ಮರಾಠೆ ಅವರ ಕಂಠದಲ್ಲಿ ಮೂಡಿ ಬಂದ ಗಾಯನ ಪ್ರೇಕ್ಷಕರಿಗೆ ಸಂಭ್ರವಾಗಿ ತಲುಪಿತು. ಭರತನಾಟ್ಯ, ಜನಪದ ಕುಣಿತ, ಸಿನಿಮಾ ಗೀತೆ, ಮಹಾಭಾರತ ನೃತ್ಯ ರೂಪಕ, ಮಾಣಿಪುರಿ ಸ್ಟಿಕ್ ಡ್ಯಾನ್ಸ್, ನಿಸರ್ಗ ಕಲಾ ತಂಡದ ಮಹಿಳೆಯರ ನೃತ್ಯಗಳು, ಪ್ರೇಕ್ಷಕರಲ್ಲಿ ರೋಮಾಂಚನ, ಸಂತೋಷ, ಹೊಸತನ ಅನುಭವವನ್ನು ಉಂಟುಮಾಡಿತು. ಸಂಜೆ ಏಳು ಗಂಟೆಗೆ ಪ್ರರಂಭವಾದ ನೃತ್ಯ ಗಾಯನ ಸಂಭ್ರಮ ನಿರಂತರ ಆರು ಗಂಟೆಗಳ ಕಾಲ ರಂಜಿಸಿತು. ರಾತ್ರಿ 1 ಗಂಟೆಗೆ ಕಾರ್ಯಕ್ರಮ ಮುಗಿದರ ಜನ ಸಂಭಾಂಗಣದಿಂದ ತೆರಳದ ಧ್ಯಾನಸ್ಥ ಬಾವವೊಂದು ಮಕ್ಕಳ ಕಲಾಪ್ರದರ್ಶನ ನಿರ್ಮಿಸಿಕೊಟ್ಟಿತು. 47ನೇ ದಸರಾ ಜನೋತ್ಸವದ ಸಾಂಸ್ಕೃತಿಕ ಸಂಜೆಯ ಪ್ರಭಾವವನ್ನು ಹೆಚ್ಚಿಸಲು ಸ್ಥಳೀಯ ಪ್ರತಿಭೆಗಳ ಕಲೆಗಳ ಅನಾವರಣ ಗಮನಾರ್ಹವಾಗಿತ್ತು. ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷ ಶಿವಾಜಿ, ಖಜಾಂಜಿ ಧ್ಯಾನ್ ಸುಬ್ಬಯ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ದಿಲನ್ ಚಂಗಪ್ಪ ಹಾಗೂ ಚಂದನ ಡಿ, ಸೈಕ್ಲೋನ್ ಡ್ಯಾನ್ಸ್ ಇನ್ಸಿಟ್ಯೂಟ್ ಮುಖ್ಯಸ್ಥ ರಮೇಶ್, ಸುವೃತ ನಾಟ್ಯಾಲಯ ಮುಖ್ಯಸ್ಥೆ ಲಿದಿನಾ ಸುಹಾಸ್ ಇದ್ದರು.








